Neer Dose Karnataka
Take a fresh look at your lifestyle.

ಪಬ್ಲಿಕ್ ಟಿವಿ ದಿವ್ಯ ಜ್ಯೋತಿ ರವರು ದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

ಕನ್ನಡದ ಖ್ಯಾತ ನ್ಯೂಸ್ ಚಾನಲ್ಗಳಲ್ಲಿ ಒಂದಾಗಿರುವ ಪಬ್ಲಿಕ್ ಟಿವಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ನಿರೂಪಕರಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿರುವ ನಿರೂಪಕಿ ಯಾರು ಎಂದರೆ ನಿಮಗೆ ಸಿಗುವ ಉತ್ತರ ದಿವ್ಯಜ್ಯೋತಿ. ಒಂದೆಡೆ ರಂಗಣ್ಣ ರವರು ಮಾಧ್ಯಮದ ಮೂಲಕ ಸಮಾಜದ ಉತ್ತಮ ಕಾರ್ಯಗಳ ಜೊತೆಗೆ ಅನಗತ್ಯ ಕೆಲಸವನ್ನು ಮಾಡುತ್ತಿರುವ ಎಲ್ಲರಿಗೂ ತರಾಟೆಗೆ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಪಕ್ಕದಲ್ಲೇ ಕೂತು ರಂಗಣ್ಣ ರವರಿಗೆ ಅಗತ್ಯ ಮಾಹಿತಿ ಒದಗಿಸಿ ಹಾಗೂ ತಮ್ಮದೇ ಆದ ಶೈಲಿಯಲ್ಲಿ ನ್ಯೂಸ್ ರಿಪೋರ್ಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿ ಬಳಗವನ್ನು ಗಳಿಸಿರುವ ದಿವ್ಯಜ್ಯೋತಿ ರವರನ್ನು ನೀವೆಲ್ಲರೂ ನೋಡಿಯೇ ಇರುತ್ತೀರಾ

ಇವರು ಹಲವಾರು ವರ್ಷಗಳಿಂದ ಪಬ್ಲಿಕ್ ಟಿವಿಯಲ್ಲಿ ನ್ಯೂಸ್ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಿಕಾಂ ಪದವೀಧರೆಯಾಗಿರುವ ದಿವ್ಯಜ್ಯೋತಿ ರವರು ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇವರ ಆರಂಭದ ನಿರೂಪಕಿಯ ದಿನಗಳು ಉದಯ ಮ್ಯೂಸಿಕ್ ಚಾನಲ್ ನಲ್ಲಿ ಕಳೆದಿದ್ದವು. ತದನಂತರ ಕ್ರಮೇಣ ನ್ಯೂಸ್ ವರದಿಗಾರ್ತಿಯಾಗಿ ಬದಲಾಗಿ ದಿವ್ಯಜ್ಯೋತಿ ರವರು ಇನ್ನಿತರ ವಾಹಿನಿಗಳಲ್ಲಿಯೂ ಕೂಡ ನಿರೂಪಕಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಸದ್ಯ ಕೆಲವು ವರ್ಷಗಳಿಂದ ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡುತ್ತಿರುವ ದಿವ್ಯಜ್ಯೋತಿ ರವರು, ವಿವಿಧ ಕಾರ್ಯಕ್ರಮಗಳಿಗೆ ವಿವಿಧ ರೀತಿಯ ಸಂಭಾವನೆ ಪಡೆದುಕೊಳ್ಳುತ್ತಾರೆ ಎಂಬುದು ತಿಳಿದುಬಂದಿದೆ.

ಸಾಮಾನ್ಯ ನ್ಯೂಸ್ ವರದಿ ಮಾಡಲು ಪ್ರತಿ ದಿನಕ್ಕೆ ಐದು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುವ ದಿವ್ಯಜ್ಯೋತಿ ರವರು, ರಂಗಣ್ಣ ರವರ ಜೊತೆ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರೆ ಅವರ ಸಂಭಾವನೆ ಅಂದು ದುಪ್ಪಟ್ಟಾಗುತ್ತದೆ ಎಂದು ಹೇಳಲಾಗುತ್ತದೆ. ಇದಾದ ನಂತರ ನಟ ನಟಿಯರ ಸಂದರ್ಶನ ತೆಗೆದುಕೊಳ್ಳಲು ವಿಶೇಷ ಭತ್ಯೆ ಪಡೆದುಕೊಳ್ಳುತ್ತಾರೆ ಎಂಬುದು ತಿಳಿದುಬಂದಿದೆ. ಇನ್ನು ಸದಾ ನಗುಮುಖ ಸ್ಪಷ್ಟ ಕನ್ನಡ ಒಳ್ಳೆಯ ಪದಗಳ ಬಳಕೆಯಿಂದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ದಿವ್ಯ ಜ್ಯೋತಿ ರವರಿಗೆ ಜೀವನದಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ ಧನ್ಯವಾದಗಳು.

Comments are closed.