Neer Dose Karnataka
Take a fresh look at your lifestyle.

ಮಗಳು ಜಾನಕಿ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಡುತ್ತಾರಾ ಸೀತಾರಾಮನ್ ??ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಕೋಟ್ಯಂತರ ಜನರನ್ನು ತಲುಪುವಂತಹ ಧಾರವಾಹಿಗಳನ್ನು ನಿರ್ಮಾಣ ಮಾಡಿ ಧಾರಾವಾಹಿಗಳ ಮೂಲಕ ಉತ್ತಮ ಸಂದೇಶವನ್ನು ಕೂಡ ಸಮಾಜಕ್ಕೆ ತಲುಪಿಸಿರುವ ಇವರು ಧಾರವಾಹಿ ನಿರ್ದೇಶನ ಮಾಡುತ್ತಿದ್ದೇನೆ ಖಂಡಿತ ಧಾರವಾಹಿ ಯಶಸ್ಸು ಕಾಣುತ್ತದೆ ಎಂಬ ಭರವಸೆ ಮೂಡಿಸಿರುವ ಟಿಎನ್ ಸೀತಾರಾಮನ್ ರವರ ಮಗಳು ಜಾನಕಿ ದಾರಾವಾಹಿ ಕೂಡ ಕಿರುತೆರೆಯಲ್ಲಿ ಹೊಸತನವನ್ನು ಸೃಷ್ಟಿಸಿತ್ತು.

ಮಗಳು ಜಾನಕಿ ಕಳೆದ ಸೀತಾರಾಮನ್ ರವರ ಧಾರವಾಹಿ ಗಳಂತೆ ಪ್ರಸಿದ್ಧಿ ಪಡೆದುಕೊಂಡು ಬಾರಿ ಅಭಿಮಾನಿ ಬಳಗವನ್ನು ಗಳಿಸುವುದರಲ್ಲಿ ಯಶಸ್ವಿಯಾಗಿತ್ತು. ಆದರೆ ಕಳೆದ ವರ್ಷ ಇದ್ದಕ್ಕಿದ್ದಂತೆ ಕೋರೋಣ ಕಾರಣದಿಂದಾಗಿ ಉಂಟಾದ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಕೆಲವೇ ಕೆಲವು ದಿನಗಳಲ್ಲಿ ಮಗಳು ಜಾನಕಿ ಧಾರವಾಹಿಯನ್ನು ಮುಗಿಸಲಾಗಿತ್ತು. ಅಭಿಮಾನಿಗಳು ಸೀತಾರಾಮನ್ ರವರ ಈ ನಿರ್ಧಾರದಿಂದ ಸಾಕಷ್ಟು ಬೇಸರಗೊಂಡಿದ್ದರು.

ಈಗಲೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮಗಳು ಜಾನಕಿ ಯ ಕುರಿತು ಒಂದು ಪೋಸ್ಟ್ ಹಾಕಿದರೆ ಸಾಕು ಸಾವಿರಾರು ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಇಂತಹ ಹೆಸರು ಪಡೆದಿದ್ದ ಧಾರವಾಹಿ ನಿಂತು ಹೋಗಿದ್ದಕ್ಕೆ ಪ್ರೇಕ್ಷಕರಿಗೆ ತುಂಬಾ ಬೇಜಾರಾಗಿತ್ತು, ಆದರೆ ಆ ಬೇಜಾರು ಇದೀಗ ದೂರವಾಗುವ ಲಕ್ಷಣಗಳು ಕಾಣಿಸುತ್ತವೆ. ಹೌದು ಸ್ನೇಹಿತರೇ ಕಿರುತೆರೆ ಮೂಲಗಳ ಪ್ರಕಾರ ಇದೀಗ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಮಗಳು ಜಾನಕಿ ಧಾರವಾಹಿಯನ್ನು ಟಿಎನ್ ಸೀತಾರಾಮನ್ ರವರು ಮತ್ತಷ್ಟು ವಿಶೇಷತೆಯಿಂದ ಮುಂದುವರಿಸಲು ಆಸಕ್ತಿ ತೋರುತ್ತಿದ್ದಾರೆ ಎಂಬುದು ಬಹಿರಂಗಗೊಂಡಿದೆ. ಸೀತಾರಾಮ್ ರವರು ಈ ಕುರಿತು ಆಲೋಚನೆ ನಡೆಸಿದ್ದು ಒಂದು ವೇಳೆ ಎಲ್ಲಾ ಅಂದುಕೊಂಡಂತೆ ಆಗಿ ಮಗಳು ಜಾನಕಿ ಮತ್ತೆ ಬಿಡುಗಡೆ ಗೊಂಡು ಕಥೆ ಮುಂದುವರೆದಲ್ಲಿ ಖಂಡಿತ ಮಗಳು ಜಾನಕಿ ಮತ್ತಷ್ಟು ಯಶಸ್ಸು ಗಳಿಸಲಿದೆ ಎಂಬುದು ಖಚಿತ.

Comments are closed.