Neer Dose Karnataka
Take a fresh look at your lifestyle.

ಘಟಾನುಘಟಿ ಸ್ಪರ್ಧಿಗಳಾದ ಮಂಜು, ಅರವಿಂದ್ ಅವರನ್ನು ಮೀರಿಸುವ ಸಂಭಾವನೆ ಪಡೆಯುತ್ತಿರುವ ಸನ್ನಿಧಿ ರವರ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಇದೀಗ ಪ್ರತಿ ಸ್ಪರ್ಧಿಗಳು ಕೂಡ ಗೆಲ್ಲುವ ಲೆಕ್ಕಾಚಾರದಲ್ಲಿ ಆಟವಾಡಲು ಆರಂಭಿಸಿದ್ದಾರೆ, ಬಹುತೇಕ ಸ್ಪರ್ಧಿಗಳು ಇಷ್ಟು ದಿವಸ ಹೆಚ್ಚು ಸದ್ದು ಮಾಡದ ಕಾರಣ ಇಂದು ಮುಂದೆ ನಾವು ಕೆಲವೊಂದು ಆಟಗಾರರನ್ನು ಹೊರತು ಪಡಿಸಿ ನಾವು ಕೂಡ ಮನೆಯಲ್ಲಿ ಇದ್ದೇವೆ ನಾವು ಕೂಡ ಮನೆಯಲ್ಲಿ ಆಟ ಮಾಡಬಹುದು ಎಂಬುದನ್ನು ತೋರಿಸಲು ನಿರ್ಧಾರ ಮಾಡಿರುವುದು ನಿಮಗೆಲ್ಲರಿಗೂ ತಿಳಿದಿರುತ್ತದೆ. ಈ ಕುರಿತು ಶುಭ, ನಿಧಿ ಸೇರಿದಂತೆ ಇನ್ನಿತರ ಸ್ಪರ್ದಿಗಳು ಮಾತನಾಡಿರುವುದು ಪ್ರಸಾರವಾಗಿದೆ.

ಇನ್ನು ಬಿಗ್ ಬಾಸ್ ಆರಂಭವಾದ ದಿನದಿಂದಲೂ ನಿಮಗೆಲ್ಲರಿಗೂ ತಿಳಿದಿರುವಂತೆ ಮಂಜು ಪಾವಗಡ ರವರು ಬಹಳ ಅದ್ಭುತವಾಗಿ ಪ್ರೇಕ್ಷಕರನ್ನು ಮನ ರಂಜಿಸುವಲ್ಲಿ ಯಶಸ್ವಿ ಯಾಗುತ್ತಿದ್ದು ಈಗಾಗಲೇ ಅಭಿಮಾನಿಗಳು ಮಂಜು ಪಾವಗಡ ರವರು ಗೆಲ್ಲಬಹುದು ಎಂಬ ಅಭಿಪ್ರಾಯ ಪಟ್ಟಿದ್ದಾರೆ. ಅದೇ ಸಮಯದಲ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ನೇರ ವ್ಯಕ್ತಿತ್ವದ ಮೂಲಕ ಅರವಿಂದ್ ರವರು ಕೂಡ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಕೊಳ್ಳುತ್ತಿದ್ದಾರೆ.

ಯಾರನ್ನು ಕೇಳಿದರೂ ಈ ಇಬ್ಬರೂ ಆಟಗಾರರು ವಿಜೇತರಾಗುವ ಸಾಧ್ಯತೆಗಳು ಇದೆ ಎಂದು ಹೇಳುತ್ತಿದ್ದಾರೆ. ಇನ್ನು ಅದೇ ಸಂದರ್ಭದಲ್ಲಿ ಮನೆಯವರೆಲ್ಲರ ಜೊತೆ ಬಹಳ ಸರಳವಾಗಿ ಬೆರೆತು ಕೊಂಡು ಯಾವುದೇ ವಾದ-ವಿವಾದಗಳ ಇಲ್ಲದೆ ಬಹಳ ಸೈಲೆಂಟಾಗಿ ಒಮ್ಮೆಯೂ ನಾಮಿನೇಟ್ ಆಗದೆ ಉಳಿದಿರುವ ವೈಷ್ಣವಿ ರವರು ಸೇಫ್ ಆಟಕ್ಕೆ ಮೊರೆಹೋಗಿದ್ದಾರೆ ಎನ್ನಲಾಗುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ಈ ಮೂವರು ಸ್ಪರ್ದಿಗಳಿಗೆ ಸಿಗುವ ಸಂಭಾವನೆ ನಾವು ನೋಡುವುದಾದರೆ, ಮಂಜು ಪಾವಗಡ ರವರಿಗೆ 35, ಅರವಿಂದ್ ರವರಿಗೆ 30 ಹಾಗೂ ವೈಷ್ಣವಿ ರವರು ಇವರಿಬ್ಬರಿಗಿಂತ ಹೆಚ್ಚು 60 ಸಾವಿರ ರೂಪಾಯಿಗಳನ್ನು ಒಂದು ವಾರಕ್ಕೆ ಸಂಭಾವನೆಯನ್ನು ಪಡೆಯುತ್ತಾರೆ.

Comments are closed.