Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಪರಭಾಷಾ ನಟನಿಗಾಗಿ ಯುವರತ್ನ ಸಿನಿಮಾಗೆ ಬಿಗ್ ಶಾಕ್ ನೀಡಿತಾ ಹೊಂಬಾಳೆ ಫಿಲ್ಮ್ಸ್. ರೊಚ್ಚಿಗೆದ್ದ ಅಭಿಮಾನಿಗಳು.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಯುವ ರತ್ನ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗುತ್ತಿದೆ. ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆಯನ್ನು ಗಳಿಸುತ್ತಿದ್ದರೂ ಕೂಡ ಯಾಕೆ ಯುವ ರತ್ನ ಸಿನಿಮಾ ಚಿತ್ರತಂಡ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದರ ನಡುವೆ ಈ ನಿರ್ಧಾರಕ್ಕೆ ವಿವಿಧ ರೀತಿಯ ಅಭಿಪ್ರಾಯಗಳು ಕೂಡ ಕೇಳಿಬರುತ್ತಿವೆ. ಆದರೆ ಇದೀಗ ಕೇಳಿ ಬಂದಿರುವ ಕಾರಣ ನೋಡಿದರೆ ನಿಜಕ್ಕೂ ಕನ್ನಡ ಚಿತ್ರಪ್ರೇಮಿಗಳಿಗೆ ಬಹಳ ಬೇಸರ ತರುವಂತಹ ಮಾಹಿತಿ ಕೇಳಿಬಂದಿವೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಯುವರತ್ನ ಸಿನಿಮಾವನ್ನು ಹೊಂಬಾಳೆ ಫಿಲಂಸ್ ಪ್ರೊಡಕ್ಷನ್ ಹೌಸ್ ನ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ತೆಲುಗು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರಾಗಿರುವ ಪವನ್ ಕಲ್ಯಾಣ್ ರವರ ವಕೀಲ್ ಸಾಬ್ ಚಿತ್ರ ಬಿಡುಗಡೆಯಾಗುತ್ತಿದೆ, ಈ ಚಿತ್ರದ ವಿತರಣೆ ಹ’ಕ್ಕನ್ನು ಹೊಂಬಾಳೆ ಫಿಲಂಸ್ ಪಡೆದುಕೊಂಡಿದೆ. ಇನ್ನು ಪವನ್ ಕಲ್ಯಾಣ್ ರವರ ಸಿನಿಮಾ ಎಂದ ತಕ್ಷಣ ಅಭಿಮಾನಿಗಳು ಥಿಯೇಟರ್ಗಳ ಬರುತ್ತಾರೆ ಆದರೆ ಥಿಯೇಟರ್ಗಳಲ್ಲಿ ಯುವರತ್ನ ಹಾಗೂ ರಾಬರ್ಟ್ ಸಿನಿಮಾ ಬಹಳ ಯಶಸ್ಸಿನಿಂದ ನಡೆಯುತ್ತಿದೆ,

ಆದರೂ ಕೂಡ ರಾಬರ್ಟ ಸಿನಿಮಾವನ್ನು ಕೆಲವು ಥಿಯೇಟರುಗಳಿಂದ ತೆಗೆದು ಹಾಕಿ ವಕೀಲ್ ಸಾಬ್ ಚಿತ್ರ ಪ್ರದರ್ಶನ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ ದೊಡ್ಡ ವಿವಾದದ ನಂತರ ಡಿಬಾಸ್ ಅಭಿಮಾನಿಗಳ ಮನವಿಗೆ ಥಿಯೇಟರ್ ಗಳು ರಾಬರ್ಟ ಚಿತ್ರದ ಪ್ರದರ್ಶನವನ್ನು ಮುಂದುವರಿಸಲು ನಿರ್ಧಾರ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಂಬಾಳೆ ಫಿಲಂ ಥಿಯೇಟರ್ ಸಮಸ್ಯೆ ಎದುರಾಗಬಹುದಾದ ಕಾರಣ ಯುವರತ್ನ ಸಿನಿಮಾವನ್ನು ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರ ಮಾಡಲು ನಿರ್ಧಾರ ಮಾಡಿ ತನ್ನಲ್ಲಿರುವ ಥಿಯೇಟರ್ ಗಳನ್ನು ವಕೀಲ್ ಸಾಬ್ ಚಿತ್ರವನ್ನು ಪ್ರದರ್ಶನ ಮಾಡಲು ಅನುವು ಮಾಡಿಕೊಡಲು ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾಹಿತಿ ಕೇಳಿಬಂದಿದೆ.

Comments are closed.