Neer Dose Karnataka
Take a fresh look at your lifestyle.

ಮ್ಯಾಚ್ ಗೆಲ್ಲಿಸಿದ ಎಬಿಡಿ ಕುರಿತು ಶಾಕಿಂಗ್ ಹೇಳಿಕೆ ನೀಡಿದ ವೀರೇಂದ್ರ ಸೆಹ್ವಾಗ್ ! ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಐಪಿಎಲ್ ಟೂರ್ನಿಯ ಆರಂಭದ ಪಂದ್ಯದಲ್ಲಿ ಇದೀಗ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆರ್ಸಿಬಿ ತಂಡವು ರೋಚಕ ಗೆಲುವನ್ನು ದಾಖಲಿಸಿದೆ. ಇನ್ನೇನು ಪಂದ್ಯ ಗೆದ್ದು ಬಿಟ್ಟರು ಉತ್ತಮವಾಗಿ ಆಡುತ್ತಿದ್ದೇವೆ ಎಂದು ಕೊಳ್ಳುವಷ್ಟರಲ್ಲಿ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದ ತಂಡಕ್ಕೆ ಎಬಿ ಡಿವಿಲಿಯರ್ಸ್ ಅವರು ಆಸರೆಯಾಗಿ ನಿಂತು ಕೊನೆಯ ಓವರ್ ಗಳಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು.

ಕೇವಲ 3 ರನ್ ಅಗತ್ಯವಿದ್ದಾಗ 1 ರನ್ ಕಂಪ್ಲೀಟ್ ಮಾಡಿ ಎರಡನೆಯ ರನ್ನೋ ಓದುವಾಗ ಎಬಿ ಡಿವಿಲಿಯರ್ಸ್ ರವರು ರನ್ ಔಟ್ ಆಗಿ ಪೆವಿಲಿಯನ್ ಸೇರಿದರು, ಆದರೆ ಆಗ ತಂಡಕ್ಕೆ ಅಗತ್ಯವಿದ್ದದ್ದು ಕೇವಲ ಎರಡು ಬಾಲ್ ಗಳಿಗೆ ಎರಡು ರನ್, ಆದ ಕಾರಣ ಸಿಂಗಲ್ ಗಳನ್ನು ತೆಗೆದುಕೊಳ್ಳುವ ಮೂಲಕ ಆರ್ಸಿಬಿ ತಂಡ ಗೆಲುವನ್ನು ದಾಖಲಿಸಿತು. ಗೆಲುವಿನ ದಡ ದವರೆಗೂ ತೆಗೆದುಕೊಂಡು ಹೋದ ಎಬಿಡಿ ರವರು ಕೊನೆಯ ಓವರ್ ನಲ್ಲಿ ಔಟ್ ಆಗಿ ನಿರಾಸೆ ಮೂಡಿಸಿದರು. ಎಬಿಡಿ ರವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಇನ್ನು ಎರಡು ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಆರ್ಸಿಬಿ ತಂಡ ಕೊನೆಯ ಓವರ್ಗಳಲ್ಲಿ ಹಲವಾರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಕೊನೆಯವರೆಗೂ ನಿಂತವರು ಎಬಿಡಿ ಮಾತ್ರ. ಇದನ್ನು ಕಂಡ ವೀರೇಂದ್ರ ಸೇವಾಗ್ ರವರು ಮಾತನಾಡಿದ್ದು ಐಪಿಎಲ್ ಲೋಗೋ ಶೇರ್ ಮಾಡಿ ವಿಲ್ ಪವರ್ = ಡಿವಿಲಿಯರ್ಸ್ ಪವರ್, ಅಂದರೆ ಇಚ್ಚಾಶಕ್ತಿ ಎಂದರೆ ಎಬಿ ಡಿವಿಲಿಯರ್ಸ್, ಐಪಿಎಲ್ ಲೋಗೋ ವನ್ನು ರಹಸ್ಯವಾಗಿ ಎಬಿ ಡಿವಿಲಿಯರ್ಸ್ ರವರ ಚಾಂಪಿಯನ್ ಆಟ ನೋಡಿ ವಿನ್ಯಾಸಗೊಳಿಸಿದ್ದಾರೆ ಎಂಬುವುದರಲ್ಲಿ ಆಶ್ಚರ್ಯ ಏನು ಇಲ್ಲ, ಎಂದು ಒಂದೇ ವಾಕ್ಯದಲ್ಲಿ ಮತ್ತೊಮ್ಮೆ ಎಬಿಡಿ ರವರ ಗತ್ತನ್ನು ತಿಳಿಸಿದ್ದಾರೆ.

Comments are closed.