Neer Dose Karnataka
Take a fresh look at your lifestyle.

ಬಿಗ್ ಬಾಸ್ ಮನೆಯಿಂದ ವೈಜಯಂತಿ ರವರು ಹೊರಬರಲು ಇರುವ ನಿಜವಾದ ಕಾರಣವೇ ಬೇರೆ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಿಗ್ ಬಾಸ್ ಕಾರ್ಯಕ್ರಮದ ಹಿತಿಹಾಸದಲ್ಲಿ ನಾಮಿನೇಟ್ ಆಗದೇ ಇದ್ದರೂ ಕೂಡ ತಮ್ಮ ವೈಯಕ್ತಿಕ ನಿರ್ಧಾರ ಮೇರೆಗೆ ಮನೆಯಿಂದ ಹೊರಗೆ ಹೋಗಬೇಕು ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದ ಕಾರಣ ಸುದೀಪ್ ರವರು ತಮ್ಮ ಅ’ಧಿಕಾರ ಬಳಸಿಕೊಂಡು ವೈಜಯಂತಿ ಅಡಿಗ ಅವರನ್ನು ಮನೆಯಿಂದ ಹೊರ ಕಳುಹಿಸುವ ನಿರ್ಧಾರ ಮಾಡಲಾಗಿದೆ. ಸಮಂತ್ ರವರು ಪ್ರೇಕ್ಷಕರ ತೀರ್ಪಿನ ಪ್ರಕಾರ ಹೊರಗಡೆ ಬರುವ ಬದಲು, ವೈಜಯಂತಿ ಅಡಿಗ ರವರು ಸ್ವಇಚ್ಛೆಯಿಂದ ಹೊರಬಂದಿದ್ದಾರೆ.

ಸದಾ ಮನೆಯಿಂದ ಹೊರಹೋಗಬೇಕು ಎನ್ನುತ್ತಿದ್ದ ವೈಜಯಂತಿ ಅಡಿಗ ರವರ ಮಾತನ್ನು ಕೇಳಿಸಿಕೊಂಡಿದ್ದ ಸುದೀಪ್ ರವರು ಈ ಕುರಿತು ನಿರ್ಧಾರ ತೆಗೆದು ಕೊಳ್ಳಲು ನೀವು ಮನೆಯಿಂದ ಹೊರಬರಬೇಕು ಎಂದರೆ ಕೆಲವು ನಿಮಿಷಗಳ ಕಾಲ ಆಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಿ ಎಂದು ಹೇಳಿ ವೈಜಯಂತಿ ಅಡಿಗ ರವರಿಗೆ ಸಮಯವಕಾಶ ನೀಡಿದ್ದರು, ಈ ಸಮಯದಲ್ಲಿ ಮಾತನಾಡಿದ ವೈಜಯಂತಿ ಅಡಿಗ ಅವರು ಇದು ಯಾವುದೇ ಅಹಂಕಾರದ ನಿರ್ಧಾರ ಅಲ್ಲ ಎಂದು ಹೇಳುವ ಮೂಲಕ ಮನೆಯಿಂದ ಹೊರ ಬರುತ್ತೇನೆ ಎಂಬುದನ್ನು ಖಚಿತಪಡಿಸಿದ್ದರು.

ಇವರು ಹೀಗೆ ನಿರ್ಧಾರ ಕೈಗೊಳ್ಳಲು ನಾವು ಕಾರಣವನ್ನು ನೋಡುವುದಾದರೆ, ಬಂದ ಮೊದಲನೇ ದಿನದಿಂದಲೂ ಕುಟುಂಬವನ್ನು ಬಹಳ ಮಿಸ್ ಮಾಡಿ ಕೊಳ್ಳುತ್ತಿರುವ ವೈಜಯಂತಿ ಅಡಿಗ ರವರು, ಹೊರಗಡೆಯಿಂದ ನೋಡಿದಷ್ಟು ಸುಲಭವಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಇನ್ನು ವೈಯಕ್ತಿಕವಾಗಿ ಬಹಳ ಕು’ಗ್ಗಿರುವ ವೈಜಯಂತಿ ಅಡಿಗ ರವರು, ಅಪ್ಪ ಅಮ್ಮ ಹಾಗೂ ಭಾವಿ ಪತಿ ರವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ, ಇದು ಅಹಂಕಾರದ ನಿರ್ಧಾರವಲ್ಲ ಕ್ಷಮೆ ಇರಲಿ ಎಂದು ಹೇಳಿ ಮನೆಯಿಂದ ಹೊರ ಬಂದಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.