Neer Dose Karnataka
Take a fresh look at your lifestyle.

ಮನೀಷ್ ಪಾಂಡೆಗೆ ಸರಿಯಾಗಿ ಕುಟುಕಿದ ವೀರೇಂದ್ರ ಸೆಹ್ವಾಗ್ ! ಅರ್ಧ ಶತಕ ಗಳಿಸಿದರೂ ಸೆಹ್ವಾಗ್ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಐಪಿಎಲ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 10 ರನ್ಗಳ ಸೋಲನ್ನು ಅನುಭವಿಸಿದೆ. ಕೊಲ್ಕತ್ತಾ ನೀಡಿದ 188 ರನ್ ಗಳ ಗುರಿಯನ್ನು ಹೈದರಾಬಾದ್ ಕಂಡ ಗಳಿಸುವುದರಲ್ಲಿ ವಿಫಲವಾಗಿದ್ದು ರನ್ಗಳ ಸೋಲನ್ನು ಕಂಡಿದೆ. ಈ ಪಂದ್ಯದಲ್ಲಿ ಹಲವಾರು ಆಟಗಾರರು ಉತ್ತಮ ಪ್ರದರ್ಶನ ನೀಡಿದರು, ಆದರೆ ಸನ್ರೈಸರ್ಸ್ ತಂಡದ ಪರವಾಗಿ ಮನೀಶ್ ಪಾಂಡೆ ರವರು ಅತಿ ಹೆಚ್ಚು ರನ್ ಗಳಿಸಿದರು.

ಆದರೂ ಕೂಡ ವೀರೇಂದ್ರ ಸೆಹ್ವಾಗ್ ರವರು ಮನೀಶ್ ಪಾಂಡೆ ರವರ ಆಟದ ಕುರಿತು ಮಾತನಾಡಿ, ಮನೀಶ್ ಪಾಂಡೆ ರವರಿಗೆ ಪರೋಕ್ಷವಾಗಿ ಕುಟುಕಿದ್ದಾರೆ. ಹೌದು ಸ್ನೇಹಿತರೇ ಪಂದ್ಯ ಮುಗಿದ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವೀರೇಂದ್ರ ಸೆಹ್ವಾಗ್ ರವರು ಸಾಮಾಜಿಕ ಜಾಲತಾಣಗಳಲ್ಲಿ,

ಯಾವುದೇ ಬ್ಯಾಟ್ಸ್ಮನ್ ಆಗಿರಲಿ, ಗೆಲುವಿನ ರುಚಿ ನೋಡಬೇಕು ಎಂದರೆ ಅಗತ್ಯವಿರುವ ಸಂದರ್ಭದಲ್ಲಿ ಬ್ಯಾಟ್ಸ್ಮನ್ಗಳು ರನ್ ರೇಟ್ ಹೆಚ್ಚಿಸುವ ಕಡೆ ಗಮನವನ್ನು ನೀಡಬೇಕು, ಅದೇ ಸಮಯದಲ್ಲಿ ವೇಗವಾಗಿ ರನ್ ಗಳಿಸಬಹುದಾದ ಆಟಗಾರರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು, ಅದರಲ್ಲಿಯೂ ಹೆಚ್ಚು ಕಾಲ ಬ್ಯಾಟಿಂಗ್ ಮಾಡುವ ಆಟಗಾರರು ಬ್ಯಾಟಿಂಗ್ ವೇಗವನ್ನು ಹೆಚ್ಚಿಸದೇ ಇರುವುದು ತಂಡಕ್ಕೆ ಕಷ್ಟವನ್ನು ಉಂಟು ಮಾಡುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಈ ಪಂದ್ಯದಲ್ಲಿ ಮನೀಶ್ ಪಾಂಡೆ ರವರು ಅತಿ ಹೆಚ್ಚು ಕಾಲ ಬ್ಯಾಟಿಂಗ್ ಮಾಡಿ ರನ್ ವೇಗವನ್ನು ಹೆಚ್ಚಿಸುವ ಕಡೆ ಗಮನ ಕೊಡಲಿಲ್ಲ. ಈ ಕುರಿತು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

Comments are closed.