Neer Dose Karnataka
Take a fresh look at your lifestyle.

ಬಿಗ್ ಬಾಸ್ ನಲ್ಲಿ ಕಳೆ ಕಳೆದುಕೊಂಡಿರುವ ಮಂಜು ರವರಿಂದ ಹೊಸ ತಂತ್ರ ! ಕುರಿ ಪ್ರತಾಪ್ ಅವರನ್ನು ಫಾಲೋ ಮಾಡಲು ನಿರ್ಧಾರ

ನಮಸ್ಕಾರ ಸ್ನೇಹಿತರೇ ಕಾರ್ಯಕ್ರಮ ಆರಂಭವಾದ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾರು ಗೆಲ್ಲುತ್ತಾರೆ ಎಂದು ಕೇಳಿದರೇ ಬಹುತೇಕರ ಬಾಯಲ್ಲಿ ಮಂಜು ಪಾವಗಡ ಅವರ ಹೆಸರು ಕೇಳಿ ಬರುತ್ತಿತ್ತು, ಕಾರ್ಯಕ್ರಮ ಆರಂಭವಾದ ಕೆಲವು ವಾರಗಳ ಕಾಲ ಪ್ರೇಕ್ಷಕರನ್ನು ಸಾಕಷ್ಟು ಮನರಂಜಿಸುವಲ್ಲಿ ಮಂಜು ಪಾವಗಡ ರವರು ಯಶಸ್ವಿಯಾಗಿದ್ದರು. ದಿವ್ಯ ಸುರೇಶ್ ರವರ ಜೊತೆ ಸೇರಿಕೊಂಡು ವಿವಿಧ ರೀತಿಯ ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸಿದ್ದರು.

ದಿವ್ಯ ಸುರೇಶ ರವರ ಜೊತೆ ಅಷ್ಟೇ ಅಲ್ಲ ಮನೆಯ ಪ್ರತಿಯೊಬ್ಬ ಸದಸ್ಯರು ಜೊತೆ ಕೂಡ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡು ಯಾವುದೇ ಸನ್ನಿವೇಶವನ್ನು ಆಗಿರಲಿ ಮನರಂಜನೆಯ ರೀತಿಯಲ್ಲಿ ಬದಲಾಯಿಸುವುದು ಮಂಜು ಪಾವಗಡ ರವರು ಕರಗತ ಮಾಡಿಕೊಂಡಂತೆ ಕಾಣುತ್ತಿತ್ತು, ಆದರೆ ಕಳೆದ ಎರಡು ವಾರಗಳಿಂದ ದಿವ್ಯ ಸುರೇಶ್ ರವರ ಜೊತೆ ಸದಾ ಚರ್ಚೆಯಲ್ಲಿ ಪಾಲ್ಗೊಂಡು ಹಾಗೂ ಗುಂಪಿನ ಚರ್ಚೆಯಲ್ಲಿ ಮಾತ್ರ ಪಾಲ್ಗೊಳ್ಳುತ್ತಾ ಬಹುತೇಕ ಮನರಂಜನೆ ನೀಡುವುದನ್ನು ಮಂಜು ಪಾವಗಡ ರವರು ಮರೆತಿದ್ದರು.

ಬಹುಶಃ ಇದು ಇದೀಗ ಮಂಜು ಪಾವಗಡ ರವರ ಅರಿವಿಗೆ ಬಂದಂತೆ ಕಾಣುತ್ತಿದೆ ಅದೇ ಕಾರಣಕ್ಕಾಗಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡಲು ಹೊಸ ತಂತ್ರವನ್ನು ಆರಂಭಿಸಿದ್ದು ಕಳೆದ ಸೀಸನ್ನಲ್ಲಿ ಕು ರಿಪ್ರತಾಪ್ ರವರಂತೆ ಇಂಗ್ಲಿಷ್ ನಲ್ಲಿ ಮಾತನಾಡಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಪ್ರಯತ್ನ ಪಡುತ್ತಿದ್ದಾರೆ, ಕುರಿ ಪ್ರತಾಪ್ ರವರು ತಮ್ಮ ಬಟ್ಲರ್ ಇಂಗ್ಲಿಷ್ ಮೂಲಕ ಸಾಕಷ್ಟು ಮನರಂಜನೆ ನೀಡಿ ರನ್ನರ್ ಅಪ್ ಸ್ಥಾನದವರೆಗೂ ತಲುಪಿದ್ದರು, ಮಂಜು ಪಾವಗಡ ರವರು ಕೂಡ ಅದೇ ರೀತಿಯ ಲೆಕ್ಕಾಚಾರದಲ್ಲಿ ಮಾತುಗಳನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.

Comments are closed.