Neer Dose Karnataka
Take a fresh look at your lifestyle.

ಖಚಿತವಾಯಿತು ಗುಂಪುಗಾರಿಕೆ, ಮಂಜು ಅರವಿಂದ್ ಗೆ ಬಿಗ್ ಶಾಕ್ ನೀಡಿದ ಪ್ರೇಕ್ಷಕರು. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ಯಾವ ಸಮಯದಲ್ಲಿ ಯಾವ ಸ್ಪರ್ಧಿಗಳನ್ನು ಪ್ರೇಕ್ಷಕರು ಬೆಂಬಲಿಸುತ್ತಾರೆ ಎಂಬುದು ಹೇಳುವುದು ಕಷ್ಟ ಸಾಧ್ಯ. ಆದರೆ ಈತನ ಬಗ್ಗೆ ಮೊದಲಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ ಅದರಂತೆ ಕೆಲವರು ಗುಂಪಿನಲ್ಲಿ ಇರುವುದು ಗುಂಪಿನಲ್ಲಿ ಕಾಲಕಳೆಯುವುದು ಸಾಮಾನ್ಯವಾಗಿದೆ. ಆದರೆ ಆಟ ಎಂದು ಬಂದಾಗ ಎಲ್ಲರೂ ನೈಜ ಆಟ ಆಡುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ ಇತ್ತೀಚೆಗೆ ಗುಂಪುಗಾರಿಕೆಯ ಮಟ್ಟ ಯಾವ ಮಟ್ಟಕ್ಕೆ ಹೋಗಿದೆಯೆಂದರೆ ಪ್ರೇಕ್ಷಕರಿಗೆ ಸ್ಪಷ್ಟವಾಗಿ ಮನೆಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂಬುದು ಖಚಿತವಾಗಿದೆ. ಅಷ್ಟೇ ಅಲ್ಲದೆ ಮನೆಯಲ್ಲಿ ನಡೆದ ಒಂದು ಘಟನೆ ಪ್ರೇಕ್ಷಕರ ಕಣ್ತೆರೆಸಿದೆ. ಹೌದು ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ವಿವಿಧ ರೀತಿಯ ಟಾಸ್ಕ್ ಗಳ ಮೂಲಕ ನಾಯಕನ ಸ್ಪರ್ಧೆಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಕೆಲಸ ನಡೆಯುತ್ತಿದೆ ಇದೇ ಸಮಯದಲ್ಲಿ, ಬಾಲನ್ನು ತಲೆಯಿಂದ ನೂಕುವ ಸಂದರ್ಭ ಎದುರಾದಾಗ, ಪ್ರಶಾಂತ್ ಅರವಿಂದ್ ಹಾಗೂ ಪ್ರಿಯಾಂಕಾ ರವರು ಈ ಸುತ್ತಿನಲ್ಲಿ ಭಾಗವಹಿಸಿದ್ದರು.

ಇದೇ ಸಮಯದಲ್ಲಿ ಅರವಿಂದ ಅವರು ತಮ್ಮ ಟ್ರ್ಯಾಕ್ ಅನ್ನು ತಪ್ಪಿ ಪ್ರಿಯಾಂಕಾ ರವರ ಟ್ರ್ಯಾಕಿಗೆ ಬಂದ ಕಾರಣ ಪ್ರಿಯಾಂಕಾ ರವರು ಇದರ ವಿರುದ್ಧ ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್ ಹಾಗೂ ವೈಷ್ಣವಿ ರವರು ತೆಗೆದುಕೊಂಡ ನಿರ್ಧಾರದ ವಿರುದ್ಧ ಗರಂ ಆಗಿದ್ದರು. ಮೊದಲಿಗೆ ಪ್ರಶಾಂತ್ ರವರನ್ನು ವಿಜೇತ ಎಂದು ಘೋಷಿಸಿ ತದ ನಂತರ ಅರವಿಂದರನ್ನು ವಿಜೇತ ಎಂದು ಮಾಡಲಾಗಿತ್ತು ಅಷ್ಟೇ ಅಲ್ಲದೆ ಪ್ರಿಯಾಂಕ ರವರಿಗೆ ಬಾಲನ್ನು ಅಡ್ಡಿಪಡಿಸಿದ ಕಾರಣ ಅರವಿಂದ್ ರವರ ವಿರುದ್ಧ ಯಾರೂ ಮಾತನಾಡಲಿಲ್ಲ ಇದರ ಕುರಿತು ಪ್ರಿಯಾಂಕಾ ರವರು ಗಟ್ಟಿಯಾಗಿ ನಿಂತು ಎಲ್ಲರ ಚಳಿ ಬಿಡಿಸಿದರು. ಇದನ್ನು ಕಂಡ ಪ್ರೇಕ್ಷಕರು ಇದೇ ಸ್ಥಾನದಲ್ಲಿ ದಿವ್ಯ ಹುಡುಗ ಅಥವಾ ದಿವ್ಯ ಸುರೇಶ್ ರವರ ಇದ್ದಿದ್ದರೆ, ಮಂಜು ಹಾಗೂ ಅರವಿಂದ್ ರವರ ನಿರ್ಧಾರ ಯಾವ ರೀತಿ ಇರುತ್ತಿತ್ತು ಎಂದು ತರಾಟೆಗೆ ತೆಗೆದು ಕೊಂಡಿದ್ದಾರೆ.

Comments are closed.