Neer Dose Karnataka
Take a fresh look at your lifestyle.

ದಿವ್ಯ ಹೋದಾಗ ಶುಭ ಅತ್ತಿದೇಕೆ ಗೊತ್ತಾ?? ಇವರಿಬ್ಬರು ನಡುವಿನ ಸಂಬಂದವೇನಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ದಿವ್ಯ ಉರುಡುಗ ರವರು, ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ, ಅನಾರೋಗ್ಯದ ಕಾರಣದಿಂದ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ದಿವ್ಯ ಉರುಡುಗ ರವರು ಮನೆಯಿಂದ ಹೊರಹೋಗಿರುವುದು ಎಲ್ಲರಿಗೂ ಬೇಸರ ತರಿಸಿದೆ. ಅಭಿಮಾನಿಗಳು ಕೂಡ ದಿವ್ಯ ಉರುದುಗರವರು ಗೆಲ್ಲುವ ನೆಚ್ಚಿನ ಸ್ಪರ್ದಿಗಳಲ್ಲಿ ಒಬ್ಬರಾಗಿದ್ದರು, ಆದರೆ ಅವರು ಎಲಿಮಿನೇಟ್ ಕೂಡ ಆಗದೆ ಈ ರೀತಿ ಹೋಗಿರುವುದು ನಿಜಕ್ಕೂ ವಿಪರ್ಯಾಸ ಎಂದಿದ್ದಾರೆ.

ಇನ್ನು ಇದೇ ಸಮಯದಲ್ಲಿ ಹೊರಗಿನ ಅಭಿಮಾನಿಗಳನ್ನು ಪಕ್ಕಕ್ಕೆ ಇಟ್ಟು, ಮನೆಯ ಮಂದಿಯ ಕುರಿತು ಮಾತನಾಡುವುದಾದರೇ, ದಿವ್ಯ ಉರುದುಗರವರು ಹೊರ ಹೋಗಿರುವುದು ಮನೆಯ ಬಹುತೇಕ ಮಂದಿಗೆ ಬೇಸರ ತರಿಸಿದೆ, ಅದರಲ್ಲಿಯೂ ಅರವಿಂದ್ ರವರು ಹಲವಾರು ಬಾರಿ ನೆನೆಸಿಕೊಂಡು ಕಣ್ಣೀರು ಹಾಕುತ್ತಿದ್ದಾರೆ, ಅದೇ ಸಮಯದಲ್ಲಿ ಶುಭ ಪೂಂಜಾ ರವರು ಕೂಡ ಗಳ ಗಳನೇ ಕಣ್ಣೀರು ಹಾಕಿದ್ದು, ಅವರು ಹೇಳಿರುವ ಮಾತುಗಳ ಮೂಲಕ ಇವರರಿಬ್ಬರ ನಡುವಿನ ಸಂಬಂಧ ಏನು ಏನು ತಿಳಿದು ಬರುತ್ತಿದೆ.

ಇದು ಕೇವಲ ಸ್ಪರ್ದಿಗಳ ನಡುವಿನ ಬಾಂದವ್ಯತೆ ಅಲ್ಲ ಎಂಬುದು ಶುಭ ಪೂಂಜಾ ರವರು ಹೇಳಿದ ಮಾತುಗಳಿಂದ ತಿಳಿದು ಬರುತ್ತಿದೆ, ಹೌದು ಸ್ನೇಹಿತರೇ, ದಿವ್ಯ ಉರುದುಗ ರವರು ಮನೆಯಿಂದ ಹೊರ ಹೋದ ಬಳಿಕ ಮಾತನಾಡಿದ ಶುಭ ರವರು, ಗಳ ಗಳನೆ ಅಳುತ್ತ, ದಿವ್ಯ ರವರು ಮೊದಲಿಂದಲೂ ನನ್ನನ್ನು ಅಕ್ಕ ಅಕ್ಕ ಎಂದು ಕರೆಯುತ್ತಿದ್ದರು. ನಾನು ಅವಳನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ, ಪ್ರತಿ ಬಾರಿಯೂ ಕೂಡ ಅಕ್ಕ ಅಕ್ಕ ಎನ್ನುತ್ತಿದ್ದಳು, ನಾನು ಯಾವಾಗಲು ಕೂಡ ಅವಳನ್ನು ಬೈಯುತ್ತಿದ್ದೆ, ಕ್ಲೋಸ್ ಆಗಿ ಇದ್ದಳು ಅದು ಬೇರೆ ವಿಷಯ ಆದರೆ ಈ ರೀತಿ ಸಡನ್ ಆಗಿ ಕನ್ಫೆಶನ್ ರೂಮ್ ಗೆ ಹೋಗಿ ವಾಪಾಸ್ ಬರುವುದಿಲ್ಲ ಎಂದರೇ ಏನು. ಕನಿಷ್ಠ ಗುಡ್ ಬೈ ಕೂಡ ಹೇಳದೆ ಹೊರಟು ಹೋದಳು.

Comments are closed.