Neer Dose Karnataka
Take a fresh look at your lifestyle.

ಖುದ್ದು ಅಣ್ಣಾವ್ರು ಮನೆಗೆ ಕರೆಸಿ ಸನ್ಮಾನಿಸಿದ ಆ ಸೀರಿಯಲ್ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಣ್ಣಾವ್ರು ಯಾರಿಗೆ ತಾನೇ ಗೊತ್ತಿಲ್ಲ. ಅವರು ಈ ಶತಮಾನದ ಲೆಜೆಂಡ್. ಪ್ರತಿ ಪಾತ್ರದಲ್ಲಿಯೂ ಪರಕಾಯಪ್ರವೇಶಿಸಿದ ಮೇರುನಟ. ವೃತ್ತಿಧರ್ಮದಲ್ಲಿಯಂತೂ ಪ್ರತಿಯೊಬ್ಬ ಕಲಾವಿದನಿಗೂ ಸೂಕ್ತ ಗೌರವ ನೀಡುತ್ತಿದ್ದ ವ್ಯಕ್ತಿ. ಸಹನಟರ ಅಭಿನಯವನ್ನ ಮೆಚ್ಚಿಕೊಂಡು ಶೂಟಿಂಗ್ ಸ್ಥಳದಲ್ಲಿಯೇ ಹಲವಾರು ಭಾರಿ ಅಭಿನಂದಿಸಿದ್ದನ್ನ, ಆನಂದಭಾಷ್ಪವನ್ನ ಸುರಿಸಿದ್ದನ್ನು , ಅವರ ಜೊತೆ ನಟಿಸಿದ ಹಲವು ನಟ-ನಟಿಯರು, ಚಿತ್ರರಂಗದ ತಂತ್ರಜ್ಞರು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

ಅಣ್ಣಾವ್ರು ಕೇವಲ ತಮ್ಮ ಜೊತೆ ನಟಿಸಿದ ನಟ ನಟಿಯರು ಮಾತ್ರವಲ್ಲದೇ , ತಾವು ನೋಡಿದ ಸಿನಿಮಾ, ನಾಟಕ, ಧಾರವಾಹಿಗಳಲ್ಲಿಯೂ ಉತ್ತಮವಾಗಿ ಅಭಿನಯಿಸುತ್ತಿದ್ದ ನಟನಟಿಯರಿಗೆ ಶಹಭಾಶ್ ಗಿರಿ ಕೊಡುತ್ತಿದ್ದರಂತೆ. ಸದಾಶಿವನಗರದ ಅವರ ಮನೆಗೆ ಕರೆಸಿ, ಅವರ ಜೊತೆ ಊಟ ಮಾಡಿ, ಮುಕ್ತಕಂಠದಿಂದ ಅವರ ಜೊತೆ ಮಾತನಾಡಿ ಹರಟುತ್ತಿದ್ದರಂತೆ.

ಅದೇ ರೀತಿ ಅಣ್ಣಾವ್ರು ಈ ಕನ್ನಡದ ಧಾರವಾಹಿಯನ್ನ ಒಂದು ದಿನವೂ ಬಿಟ್ಟುಬಿಡದೇ ನೋಡುತ್ತಿದ್ದರಂತೆ. ಅದೇ ಸಿಲ್ಲಿಲಲ್ಲಿ. ಸುಮಾರು ವರ್ಷಗಳ ಕಾಲ ಕನ್ನಡಿಗರನ್ನು ನಗೆಗಡಲಿನಲ್ಲಿ ತೇಲಿಸಿದ ಧಾರವಾಹಿ ಅದು. ಅದರಲ್ಲಿ ಬರುವ ಪಾತ್ರಗಳು ಒಂದಕ್ಕಿಂತ ಒಂದು ಚೆಂದವಾಗಿದ್ದವು. ದಿನದ ಅರ್ಧ ಘಂಟೆ ಅದನ್ನ ನೋಡಿದರೇ ಅದೆಷ್ಟೋ ಜನರ ಬಿಪಿ, ಶುಗರ್ ಗಳು ನಾರ್ಮಲ್ ಆಗಿಬಿಡುತ್ತಿದ್ದವು. ಆ ಸೀರಿಯಲ್ ಅಂತು ಅಣ್ಣಾವ್ರಿಗೆ ಬಹಳ ಅಚ್ಚುಮೆಚ್ಚಾಗಿತ್ತಂತೆ.

ಅದರಲ್ಲೂ ಆ ಸೀರಿಯಲ್ ನಲ್ಲಿ ಬರುತ್ತಿದ್ದ ಎನ್.ಎಮ್.ಎಲ್ ಅಥವಾ ನರ್ಸ್ ಲಲಿತಾ ಪಾತ್ರವಂತೂ ಅಣ್ಣಾವ್ರು ಹೆಚ್ಚು ಇಷ್ಟ ಪಡುತ್ತಿದ್ದರಂತೆ. ಆ ನಟಿಯ ಹಾವಭಾವ, ಡೈಲಾಗ್ ಡೆಲಿವರಿ ಎಲ್ಲವೂ ಬಹಳ ಹಿಡಿಸಿತ್ತಂತೆ. ಅಂದ ಹಾಗೆ ಆ ಪಾತ್ರ ನಿರ್ವಹಿಸಿದವರು ನಟಿ ನಮಿತ ರಾವ್.

ಒಂದು ದಿನ ಶೂಟಿಂಗ್ ಇಲ್ಲದ ಸಮಯದಲ್ಲಿ ನಮಿತ ರಾವ್ ಗೆ ಕರೆಬಂದಿತಂತೆ. ಅರ್ಜೆಂಟಾಗಿ ಸದಾಶಿವನಗರದ ಅಣ್ಣಾವ್ರ ಮನೆಗೆ ಬನ್ನಿ. ಏನಾಯ್ತು ಅಂತ ಆತಂಕದಿಂದಲೇ ಮನೆಗೆ ಹೋದ ನಮಿತಾಗೆ, ಶಾಕ್ ಕಾದಿತ್ತು. ಅಣ್ಣಾವ್ರೇ ಅವರನ್ನ ಮನೆಯೊಳಗೆ ಸ್ವಾಗತಿಸಿ, ಮನ ತುಂಬಿ ಮಾತನಾಡಿದರಂತೆ. ಅವರ ಕೈಲಿಂದ ಸಿಲ್ಲಿಲಲ್ಲಿಯ ಧಾರವಾಹಿಯ ಆ ಪಾತ್ರದ ಕೆಲವು ಡೈಲಾಗ್ ಹೇಳಿಸಿ ಬಿದ್ದು ಬಿದ್ದು ನಕ್ಕರಂತೆ. ಕೊನೆಗೆ ಹಬ್ಬದೂಟ ಮಾಡಿಸಿ, ಶಾಲು ಹೊದೆಸಿ, ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಉತ್ತುಂಗಕ್ಕೆ ಬೆಳೆಯಬೇಕು ಎಂದು ಶುಭ ಹರಸಿ ಹಾರೈಸಿದರಂತೆ. ಅಣ್ಣಾವ್ರ ಈ ಗುಣ ನಿಜಕ್ಕೂ ಅಭಿನಂದನಾರ್ಹ.

Comments are closed.