Neer Dose Karnataka
Take a fresh look at your lifestyle.

ವಿಜಯಲಕ್ಷ್ಮಿ ರವರ ಅಕ್ಕನ ಜೀವನ ಹಾಳಾಗುವುದಕ್ಕೆ ಈ ಟಾಪ್ ನಟಿಯೇ ಕಾರಣವಂತೆ. ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿ ತದನಂತರ ಸಿನಿಮಾರಂಗದಿಂದ ದೂರ ಉಳಿದು ಬಿಡುತ್ತಾರೆ. ಅಂತಹ ನಟಿಯರಲ್ಲಿ ನಟಿ ವಿಜಯಲಕ್ಷ್ಮಿ ಕೂಡ ಒಬ್ಬರು. ಹೌದು ಇವರು ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಸ್ವಸ್ತಿಕ್, ಕನಕಾಂಬರಿ ಹೀಗೆ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ಇವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.

ಅಂದಿನ ದಿನಗಳಲ್ಲಿ ಸ್ಟಾರ್ ನಟರೊಂದಿಗೆ ನಟಿಸಿದರು ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಅಂದಿನ ದಿನಗಳಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಆದರೆ ದಿನಗಳು ಕಳೆದಂತೆ ನಟಿ ವಿಜಯಲಕ್ಷ್ಮಿ ಅವರು ಚಿತ್ರರಂಗದಿಂದ ದೂರ ಉಳಿದರು. ಇಷ್ಟೆಲ್ಲ ಯಶಸ್ಸನ್ನು ಪಡೆದಿದ್ದ ನಟಿ ವಿಜಯಲಕ್ಷ್ಮಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹಲವಾರು ಕಷ್ಟ ಹಾಗೂ ನೋವುಗಳನ್ನು ಅನುಭವಿಸಿದರು. ಅಷ್ಟೇ ಅಲ್ಲದೆ ಇದರಿಂದ ಬೇಸತ್ತು ತಮ್ಮ ಪ್ರಾ-ಣವನ್ನು ಕ-ಳೆದುಕೊಳ್ಳುವ ನಿರ್ಧಾರ ಕೂಡ ಮಾಡಿದ್ದಾರಂತೆ. ಇಂತಹ ಖ್ಯಾತನಟಿ. ಹೌದು ನಟಿ ವಿಜಯಲಕ್ಷ್ಮಿ ಅವರಿಗೆ ಉಷಾದೇವಿ ಎಂಬ ಒಬ್ಬರು ಸಹೋದರಿ ಇದ್ದಾರೆ.

ಉಷಾದೇವಿಯವರು ಗರ್ಭಾಶಯದ ತೊಂದರೆಯಿಂದ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ನಟಿ ವಿಜಯಲಕ್ಷ್ಮಿ ಅವರು ಶಿವರಾಜ್ ಕುಮಾರ್ ಬಳಿ ಆರ್ಥಿಕ ಸಹಾಯ ಕೇಳಿದ್ದರು. ಹೌದು ಈ ವಿಚಾರವಾಗಿ ನಟಿ ವಿಜಯಲಕ್ಷ್ಮಿ ಅವರು ಸಾಕಷ್ಟು ಭಾರಿ ಸುದ್ದಿಯಾಗಿದ್ದರು. ಅಷ್ಟೇ ಅಲ್ಲದೆ ಸಾಕಷ್ಟು ಜನರು ಬರೆ ಸಹಾಯ ಕೇಳುವುದನ್ನೇ ಮಾಡುತ್ತೀರಾ..? ನಟ ಸೃಜನ್ ಲೋಕೇಶ್ ಅವರಿಗೆ ಹಾಗೆ ಮಾಡಿದ್ದಕ್ಕಾಗಿ ನಿಮಗೆ ಈ ಪರಿಸ್ಥಿತಿ ಬಂದಿದೆ ಎಂದು ಸಾಕಷ್ಟು ಜನರು ಹೇಳಿಕೆ ನೀಡುವ ಮೂಲಕ ತಮ್ಮ ತಾಳ್ಮೆ ಕಳೆದುಕೊಳ್ಳುವಂತೆ ಮಾಡಿದ್ದರು.

ಇನ್ನು ಈ ಪ್ರಶ್ನೆಗಳಿಗೆಲ್ಲಾ ಉತ್ತರವೆಂಬಂತೆ ನಟಿ ವಿಜಯಲಕ್ಷ್ಮಿ ಅವರು ವೀಡಿಯೋ ಮೂಲಕ ಸ್ಪಷ್ಟವಾದ ಉತ್ತರ ಗಳನ್ನು ನೀಡಿದ್ದಾರೆ. ಹೌದು ನಟಿ ವಿಜಯಲಕ್ಷ್ಮಿ ಅವರು ವಿಡಿಯೋ ಮೂಲಕ ನಾನು ಬರೆ ಎರಡು ಬಾರಿ ಸಹಾಯ ಕೇಳಿದ್ದಕ್ಕೆ ನನ್ನನ್ನು ಹೀಗೆ ಟೀಕೆ ಮಾಡುತ್ತಿದ್ದೀರಲ್ಲ ನಾನೇನು ಅಂತಹ ತಪ್ಪು ಮಾಡಿದ್ದೆ. ನನ್ನ ಹಳೆಯ ವಿಚಾರಗಳನ್ನೆಲ್ಲ ತೆಗೆದು ಈ ರೀತಿ ಮಾತಾಡ್ತೀರಲ್ಲ..

ನಾನು ಸೃಜನ್ ಅವರನ್ನು ಯಾಮಾರಿಸಿಲ್ಲ. ಒಂದು ವೇಳೆ ಅಂತಹ ವಿಚಾರ ನನ್ನ ಮನಸ್ಸಿನಲ್ಲಿದ್ದರೆ ಅಷ್ಟೊಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಾನೇಕೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದೆ??ಎಂದು ಮತ್ತೆ ನೆಟ್ಟಿಗರಿಗೆ ಪ್ರಶ್ನೆ ಹಾಕಿದ್ದಾರೆ. ನನ್ನ ಕಥೆ ನನಗೆ ಮಾತ್ರ ಗೊತ್ತು. ಸುಮ್ಮನೆ ಅವಳು ಸರಿ ಇಲ್ಲ ಎಂದು ಹೇಳಬೇಡಿ. ನಾನೊಬ್ಬಳು ಇಲ್ಲವಾದರೆ ಎಲ್ಲವೂ ಸರಿಹೋಗುತ್ತದೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ಅಷ್ಟೇ ಅಲ್ಲದೆ ನಾನು ಸಹಾಯ ಕೇಳಿದ್ದಕ್ಕೆ ಇಷ್ಟೆಲ್ಲಾ ಮಾತನಾಡುತ್ತೀರಲ್ಲಾ ನನ್ನ ಕುಟುಂಬದ ಬಗ್ಗೆ ಯಾಕೆ ಯಾರು ಸಹ ಮಾತನಾಡುವುದಿಲ್ಲ? ನಮ್ಮ ಅಕ್ಕನ ಬದುಕು ಹಾ-ಳಾಗುವುದಕ್ಕೆ ನಟಿ ಜಯಪ್ರದಾ ಅವರೇ ಕಾರಣ ಎಂದು ಕೂಡ ನಟಿ ವಿಜಯಲಕ್ಷ್ಮಿ ಹೇಳಿದ್ದಾರೆ. ಹೌದು ನಟಿ ಜಯಪ್ರದಾ ಅವರ ಅಣ್ಣನೇ ನಮ್ಮಕ್ಕ ಉಷಾಳ ಗಂಡ. ಹತ್ತು ವರ್ಷದಿಂದ ದೂರವಿದ್ದಾರೆ. ಇತ್ತ ವಿ-ಚ್ಛೇದನ ಕೂಡ ನೀಡುತ್ತಿಲ್ಲ. ಮತ್ತೊಂದು ಕಡೆ ಮಗುವಿನ ಮುಖವು ಕೂಡ ತೋರಿಸುತ್ತಿಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೆಲ್ಲ ಯಾಕೆ ಯಾರೂ ಕೇಳುವುದಿಲ್ಲ? ನಾನು ಮಾತ್ರ ಯಾಕೆ ಸರಿ ಇಲ್ಲ ಎಂದು ಹೇಳುತ್ತೀರಿ ಈ ರೀತಿ ಇರೋದನ್ನೆಲ್ಲಾ ಹೇಳಬೇಡಿ ಎಂದು ಮನವಿ ಮಾಡಿದ್ದಾರೆ.

Comments are closed.