Neer Dose Karnataka
Take a fresh look at your lifestyle.

ಒಂದು ಕಾಲದ ಟಾಪ್ ನಟಿ ಪಾರುಲ್ ಯಾದವ್ ಇದೀಗ ಅವಕಾಶ ಸಿಗದೇ ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರಗಳಲ್ಲಿ ಅದೆಷ್ಟು ನಟಿಮಣಿಯರು ಬಂದು ನಟಿಸಿ ಹೋಗಿದ್ದಾರೆ. ಕೆಲ ನಟಿಯರು ಪರಭಾಷೆಯಿಂದ ಬಂದು ಇಲ್ಲಿ ಜನರ ಮನಗೆದ್ದ ಇಂದಿಗೂ ಇಲ್ಲಿ ನೆಲೆಸಿದ್ದಾರೆ. ಅಂತಹ ನಟಿಯರಲ್ಲಿ ಒಬ್ಬರ ಕುರಿತಂತೆ ನಾವು ಹೀಗೆ ಹೇಳಲು ಹೊರಟಿದ್ದೇವೆ. ಆ ನಟಿ ಯಾರು ಆ ನಟಿಯ ಗುರುತಿನಿಂದ ನಾನು ಹೇಳಲು ಹೊರಟಿರುವ ವಿಷಯ ಏನು ಎಂಬುದು ನಿಮಗೆ ಸವಿಸ್ತಾರವಾಗಿ ಮುಂದಿನ ಸಾಲುಗಳಲ್ಲಿ ಹೇಳುತ್ತೇವೆ ಬನ್ನಿ.

ಹೌದು ನಾವು ಹೇಳಲು ಹೊರಟಿರುವುದು ಪರಭಾಷೆಯಿಂದ ಬಂದು ಕನ್ನಡದಲ್ಲಿ ಮಿಂಚಿ ಇಂದಿಗೂ ಕೂಡ ಚಾಲ್ತಿಯಲ್ಲಿರುವ ಪಾರುಲ್ ಯಾದವ್ ರ ಕುರಿತಂತೆ. ಹೌದು ಪಾರುಲ್ ಯಾದವ್ ರವರು ಮುಂಬೈಯಲ್ಲಿ ಜನಿಸಿದವರು. ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ್ದು ತಮಿಳು ಚಿತ್ರರಂಗದ ಮೂಲಕ. ಹೌದು ಎಲ್ಲರೂ ತಿಳಿದುಕೊಂಡಿರುವುದು ಏನೆಂದರೆ ಪಾರುಲ್ ಯಾದವ್ ಮೊದಲು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದು ಎಂದು. ಆದರೆ ನಟಿ ಪಾರುಲ್ ಯಾದವ್ ಚಿತ್ರಲೋಕಕ್ಕೆ ಮೊದಲು ಪಾದರ್ಪಣೆ ಮಾಡಿದ್ದು ಧನುಷ್ ಅಭಿನಯದ ಡ್ರೀಮ್ಸ್ ಎಂಬ ತಮಿಳು ಚಿತ್ರದ ಮೂಲಕ.

ನಂತರದ ದಿನಗಳಲ್ಲಿ ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡರು. ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಪಾರುಲ್ ಯಾದವ್ ಮೊದಲ ಯಶಸ್ಸು ಕಂಡಿದ್ದು ಗೋವಿಂದಾಯ ನಮಃ ಚಿತ್ರದಲ್ಲಿ. ಹೌದು ಕೋಮಲ್ ನಟನೆಯ ಗೋವಿಂದಾಯ ನಮಃ ಚಿತ್ರದಲ್ಲಿ ನಟಿಸಿದ ಮೇಲೆ ಪ್ಯಾರ್ಗೆ ಆಗ್ಬಿಟ್ಟೈತೆ ಜನಪ್ರಿಯತೆ ಮೂಲಕ ಕನ್ನಡಿಗರ ಮನದಲ್ಲಿ ಸದಾ ಅಲ್ಲೇ ಇರತೊಡಗಿದರು. ನಂತರದ ದಿನಗಳಲ್ಲಿ ಕಿಚ್ಚ ಸುದೀಪ್ ಅಭಿನಯದ ಬಚ್ಚನ್ ಚಿತ್ರದ ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು.

ಕನ್ನಡ ಚಿತ್ರದಲ್ಲಿ ಮುಖ್ಯವಾಗಿ ವಾಸ್ತುಪ್ರಕಾರ ವೀರಪ್ಪನ್ ಹೀಗೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡು ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡರು. ಆದರೆ ನಟಿ ಪಾರುಲ್ ಯಾದವ್ ರವರ ಬೇಡಿಕೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗ ತೊಡಗಿದೆ. ಕಾರಣ ಹೊಸನಟಿಯರ ಪ್ರವೇಶ ಹಾಗೂ ವೀಕ್ಷಕರ ಅಭಿರುಚಿ ಬೇರೆ ಆಗಿರಬಹುದು ಎಂದು ಹೇಳಲಾಗುತ್ತದೆ. ಆದರೆ ಬೇಡಿಕೆ ಆದನಂತರ ಪಾರು ಯಾದವರು ಅವರು ಏನು ಮಾಡುತ್ತಿದ್ದಾರೆ ಎಂದು ನಿಮಗೆ ಗೊತ್ತೆ ಹೇಳುತ್ತೇವೆ ಬನ್ನಿ.

ಹೌದು ನಟಿ ಪಾರುಲ್ ಯಾದವ್ ರವರು ಸಿನಿಮಾರಂಗದಲ್ಲಿ ಬೇಡಿಕೆ ಕಡಿಮೆಯಾದ ನಂತರ ಹಿಂದಿ ಹಾ ಕಣ್ಣಿನ ರಾಣಾವತ್ ನಟಿಸಿದ್ದ ಚಿತ್ರದ ರಿಮೇಕ್ ಅನ್ನು ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಿರ್ಮಾಪಕಿಯಾಗಿ ಕನ್ನಡ ವರ್ಷನ್ ನಲ್ಲಿ ಕೂಡ ತಾವೇ ನಟಿಸಿದ್ದರು‌. ಇದು ಅಂದುಕೊಂಡಷ್ಟು ಯಶಸ್ಸು ಕಾಣದಿದ್ದರಿಂದ ನಿರ್ಮಾಪಕಿಯಾಗಿ ಕೂಡ ನಟಿ ಪಾರುಲ್ ಯಾದವ್ ಯಶಸ್ಸನ್ನು ಕಾಣಲಿಲ್ಲ.

ಈಗ ಬಂದಿರುವ ಕೆಲ ಮಾಹಿತಿಯ ಪ್ರಕಾರ ಪಾರುಲ್ ಯಾದವ್ ಅವರು ತಾವೇ ಸ್ವತಹ ಕಥೆಯನ್ನು ರಚಿಸಿ ಚಿತ್ರದ ನಿರ್ದೇಶನವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆಯಂತೆ. ನಟಿಯಾಗಿ ಈಗಾಗಲೇ ಯಶಸ್ಸನ್ನು ಕಂಡಿದ್ದ ಪಾರು ಯಾದವರು ಹೀಗೆ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಚಾಪ್ಟರ್ ಒಂದನ್ನು ತೆರೆಯಬೇಕೆಂಬ ಸಿದ್ಧತೆಯಲ್ಲಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.