Neer Dose Karnataka
Take a fresh look at your lifestyle.

ಇಡೀ ಭಾರತದಲ್ಲಿ ಕಮಲ್ ಹಾಸನ್ ರವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಕನ್ನಡದ ನಟ ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಕೆಲವರು ಡ್ಯಾನ್ಸ್ ಹಾಗೂ ಸಾಹಸ ದೃಶ್ಯಗಳು ಕಾಮಿಡಿ ಹೀಗೆ ಹಲವಾರು ಪ್ರಕಾರಗಳಲ್ಲಿ ಪ್ರಾವಿಣ್ಯತೆಯನ್ನು ಸಾಧಿಸಿ ಆ ವಿಭಾಗದಲ್ಲಿ ಪ್ರೇಕ್ಷಕರನ್ನು ಸಂಪಾದಿಸುತ್ತಾರೆ. ಆದರೆ ಕೆಲವು ನಟರು ಎಲ್ಲಾ ಪ್ರಕಾರದ ನಟನೆಯಲ್ಲಿ ತಮ್ಮ ಪ್ರಾಬಲ್ಯದ ವನ್ನು ಸಾಧಿಸಿ ಅಭಿನಯದಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿರುತ್ತಾರೆ. ಅವರಿಗೆ ಯಾವುದೇ ಪಾತ್ರವನ್ನು ನೀಡಿದರು ಸಹ ಸುಲಲಿತವಾಗಿ ನಟಿಸಿ ಪ್ರೇಕ್ಷಕರ ಮನಗೆಲ್ಲುತ್ತಾರೆ. ಅಂತಹ ಕೆಲವೇ ನಟರ ಪೈಕಿ ಇಂದು ನಾನು ಹೇಳಹೊರಟಿರುವ ನಟ ಅಗ್ರಗಣ್ಯರು ಎಂದು ಹೇಳಬಹುದು. ಬನ್ನಿ ಅ ನಟ ಯಾರೆಂದು ಹೇಳುತ್ತೇವೆ.

ಹೌದು ನಾವು ಮಾತನಾಡುತ್ತಿರುವುದು ಅಭಿನಯದ ಭಾಷೆಯನ್ನು ಬರೆದಿರುವ ದಕ್ಷಿಣ ಭಾರತ ಚಿತ್ರರಂಗದ ನಟನೆಯ ಭಗವದ್ಗೀತೆ ಎಂದು ಹೇಳಲಾಗುವ ಕಮಲ್ ಹಾಸನ್ ಅವರ ಬಗ್ಗೆ. ಹೌದು ಕಮಲ್ ಹಾಸನ್ ರವರ ನಟನೆ ಅಂದಿನಿಂದ ಇಂದಿಗೂ ಸಹ ಎಲ್ಲರ ಮೆಚ್ಚುಗೆಯ ಅಂಶವಾಗಿದೆ. ಕಮಲ್ ಹಾಸನ್ ರವರಿಗೆ ಯಾವ ಪಾತ್ರವನ್ನು ನೀಡಿದರು ಸಹ ಅದನ್ನು ಪರಿಪೂರ್ಣ ಕ್ಕಿಂತ ಹೆಚ್ಚಿನ ಪರಿಪೂರ್ಣತೆ ಯಲ್ಲಿ ನಟಿಸಿ ಪ್ರೇಕ್ಷಕರ ಮನಗೆಲ್ಲುತ್ತಾರೆ. ಭಾರತದ ಅತ್ಯುನ್ನತ ಪ್ರಶಸ್ತಿಗಳು ಆದ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಈ ಪ್ರಶಸ್ತಿಗಳ ಸಾಕು ಅವರ ನಟನೆಯ ಹಿರಿಮೆಯನ್ನು ವಿವರಿಸಲು. ಕೇವಲ ತಮಿಳಿನಲ್ಲಿ ಮಾತ್ರವಲ್ಲದೆ ಕನ್ನಡ ತೆಲುಗು ಹಿಂದಿ ಬೆಂಗಾಳಿ ಯಂತಹ ಬಹುಭಾಷೆಯಲ್ಲಿ ಬಹುಬೇಡಿಕೆ ನಟನಾಗಿ ಮಿಂಚಿ ಮೆರೆದವರು ಕಮಲ್ ಹಾಸನ್. ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶನ ಸಂಗೀತ ನಿರ್ಮಾಪಕ ಹಾಗೂ ನಿರೂಪಕರಾಗಿ ಕೂಡ ತಮ್ಮ ಪ್ರಾವೀಣ್ಯವನ್ನು ಜಗತ್ತಿಗೆ ಸಾರಿದವರು ಕಮಲಾಸನ್. ವಯಸ್ಸು 66 ಆದರೂ ಸಹ ಸಲ್ಟ್ ಅಂಡ್ ಪೆಪ್ಪರ್ ಲುಕ್ಕಿನಲ್ಲಿ ಕಮಲ್ ಹಾಸನ್ ಅವರು ಸಕ್ಕತ್ತಾಗಿ ಕಾಣಿಸಿಕೊಂಡಿದ್ದಾರೆ.

ಇಂದಿಗೂ ಸಹ ಅದೇ ಹುರುಪಿನಲ್ಲಿ ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸುತ್ತಾರೆ. ಆದರೆ ನಾವು ನೆನಪಿಟ್ಟುಕೊಳ್ಳಬೇಕು ಆಗಿರುವ ಒಂದು ವಿಷಯ ಎಂದರೆ ಕಮಲಹಾಸನ್ ರವರು ಇನ್ನೇನು ಕೆಲವೇ ವರ್ಷಗಳಲ್ಲಿ 70 ದಾಟುತ್ತಾರೆ. ಆನಂತರ ಅವರ ಸ್ಥಾನಕ್ಕೆ ತುಂಬಬಲ್ಲ ಸಮರ್ಥ ನಟ ಯಾರು ಎಂದು ಹೇಳಿದರೆ, ಅದಕ್ಕೆ ಕೂಡ ಉತ್ತರ ನಮ್ಮಲ್ಲಿದೆ. ಹೌದು ಕಮಲ್ ಹಾಸನ್ ರವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಏಕೈಕ ನಟ ಎಂದರೆ ಅದು ನಮ್ಮ ಕನ್ನಡ ಮಣ್ಣಿನ ನಟನೆ. ಹೌದು ಅವರ್ಯಾರು ಹೇಳುತ್ತೇವೆ ಬನ್ನಿ.

ಹೌದು ಕಮಲ್ ಹಾಸನ್ ರವರಂತೆ ನಟನೆಯಲ್ಲಿ ಉಚ್ಚ ಸ್ಥಾನವನ್ನು ತಲುಪಿದವರು ಎಂದರೆ ಅದು ನಮ್ಮ ಕನ್ನಡ ಮಣ್ಣಿನ ನಟ ಹಾಗೂ ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾಗಿರುವ ನಟ ಕಿಚ್ಚ ಸುದೀಪ್. ಹೌದು ನಟನೆ ಎಂದು ಬಂದರೆ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿ ಆಗಿ ಕಾಣಿಸಿಕೊಂಡಿರುವ ನಟನೆಂದರೆ ನಮ್ಮ ಕನ್ನಡ ಮಣ್ಣಿನ ಕಿಚ್ಚ ಸುದೀಪ್. ರಾಜಮೌಳಿ ನಿರ್ದೇಶನದ ಈಗ ಚಿತ್ರದಲ್ಲಿ ಕಿಚ್ಚ ಸುದೀಪ್ ರವರ ನಟನೆಯನ್ನು ನೋಡಿದವರು ಎಲ್ಲರೂ ಮನಸಾರೆ ಹೊಗಳಿ ಅಭಿನಂದಿಸಿದ್ದಾರೆ.

ಇಲ್ಲದಿರುವ ನೊಣವನ್ನು ಸುತ್ತಮುತ್ತಲೇ ಓಡಾಡುತ್ತಿರುವಂತೆ ನಟಿಸಿ ಎಲ್ಲರ ಮನಗೆದ್ದಿರುವ ಸುದೀಪ್ ಈಗ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಮಲೆಯಾಳಂ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ತಮ್ಮ ಬೇಡಿಕೆ ಎನಿಸಿಕೊಂಡಿರುವ ಏಕೈಕ ಎಂದು ಹೇಳಬಹುದು. ನಟನೆಯಲ್ಲಿ ಸುಮ್ಮಸುಮ್ಮನೆ ಅವರಿಗೆ ಅಭಿನಯ ಚಕ್ರವರ್ತಿ ಎಂದು ಹೆಸರು ನೀಡಿಲ್ಲ. ಅವರ ನಟನೆ ನೋಡಿ ಎಂತೆಂತಹ ಹಿರಿಯ ಅಂತಾರೆ ಶಹಬಾಸ್ ಎಂದಿದ್ದಾರೆ.

ಸ್ವತಹ ಸ್ವಾತಿಮುತ್ತು ಚಿತ್ರವನ್ನು ನೋಡಿದ ನಂತರ ಕಮಲ ತಂದವರೇ ಕಿಚ್ಚ ಸುದೀಪ್ ರವರಿಗೆ ನನಗಿಂತ ಚೆನ್ನಾಗಿ ಮಾಡಿದ್ದೀಯಾ ಎಂದು ಹೇಳಿದ್ದಾರೆ. ಹಾಗಾಗಿ ಕಮಲ್ ಹಾಸನ್ ರವರ ಸ್ಥಾನವನ್ನು ತುಂಬಬಲ್ಲ ಏಕೈಕ ನಟ ಎಂದರೆ ಅದು ನಮ್ಮ ಕನ್ನಡ ಮಣ್ಣಿನ ನಟ ಕಿಚ್ಚ ಸುದೀಪ್ ಎಂದು ಹೇಳಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Comments are closed.