Neer Dose Karnataka
Take a fresh look at your lifestyle.

ಮೊದಲ ಚಿತ್ರಕ್ಕೆ ಅದ್ಭುತ ಯಶಸ್ಸು ಪಡೆದಿದ್ದ ದಾಮಿನಿ ನಂತರ ಚಿತ್ರರಂಗದಿಂದ ಕಣ್ಮರೆಯಾಗಿದೆ ಏಕೆ??ಜೀವನದಲ್ಲಿ ನಡೆದ್ದಡೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸ್ನೇಹಿತರೆ ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡು ಒಳ್ಳೆಯ ಸಿನಿಮಾದಲ್ಲಿ ಒಳ್ಳೆಯ ನಟನೆಯ ಮೂಲಕ ಜನರ ಮನವನ್ನು ಗೆದ್ದರೆ ಖಂಡಿತವಾಗಿಯೂ ಚಿತ್ರರಂಗದಲ್ಲಿ ಒಂದು ಒಳ್ಳೆಯ ಹೆಸರು ಹಾಗೂ ಸಂಭಾವನೆಯನ್ನು ಸಂಪಾದನೆ ಮಾಡಬಹುದು. ಜನ ನಿಮ್ಮ ಕಥೆಯ ಆಯ್ಕೆ ಹಾಗೂ ನಿಮ್ಮ ನಟನೆಯಲ್ಲಿ ಉತ್ತಮ ಅಂಶವನ್ನು ಕಂಡುಹಿಡಿದರೆ ಖಂಡಿತವಾಗಿ ನೀವು ನಿಮ್ಮ ಸಿನಿ ಜೀವನದ ಕರಿಯ ರಲ್ಲಿ ಯಶಸ್ಸಿನ ಉತ್ತುಂಗಕ್ಕೇರಲು ಸಾಧ್ಯ ಎಂಬುದನ್ನು ಈಗಾಗಲೇ ಹಲವಾರು ನಟರು ಸಾಬೀತುಪಡಿಸಿದ್ದಾರೆ ನಟಿಯರು ಕೂಡ ಮೂಲಕ ಜನರ ಮನಗೆಲ್ಲುವ ಯಶಸ್ವಿಯಾಗಿ ಪೂರೈಸಿದ್ದಾರೆ.

ಹೌದು ಸ್ನೇಹಿತರೇ ಈ ವಿಷಯದಲ್ಲಿ ವಿಫಲರಾದ ಒಬ್ಬ ಹೆಸರಾಂತ ನಟಿಯ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರಿಂದ ನಾವು ಹೇಳಲು ಹೊರಟಿರುವುದು ನಟಿ ದಾಮಿನಿ ಅವರ ಕುರಿತಂತೆ. ನಟಿ ದಾಮಿನಿ ಅವರು ಚಿತ್ರರಂಗಕ್ಕೆ ಹಾಗೆ ಬಂದು ಹೀಗೆ ಹೋದವರು ಪೈಕಿಯಲ್ಲಿ ಅಗ್ರಗಣ್ಯರಾಗಿ ನಿಲ್ಲುತ್ತಾರೆ. ಹೌದು ಸ್ನೇಹಿತರೇ ಅವರ ಚೊಚ್ಚಲ ಚಿತ್ರವೇ ಸ್ಯಾಂಡಲ್ವುಡ್ನಲ್ಲಿ ಸಕ್ಕತ್ ಸೂಪರ್ ಹಿಟ್ ಆಗಿತ್ತು.

ಹೌದು ಸ್ನೇಹಿತರೇ ಅವರ ಮೊದಲ ಚಿತ್ರ ಕನ್ನಡದಲ್ಲಿ ಸೂಪರ್ ಸ್ಟಾರ್ ಹಾಗೂ ರಿಯಲ್ ಸ್ಟಾರ್ ಖ್ಯಾತಿಯ ನಟ ಹಾಗೂ ನಿರ್ದೇಶಕ ಉಪೇಂದ್ರರವರ ನಿರ್ದೇಶನದಲ್ಲಿ ಮೂಡಿಬಂದ ಉಪೇಂದ್ರ ಚಿತ್ರದ ನಾಯಕಿಯಾಗಿದ್ದರು. ಈ ಚಿತ್ರವನ್ನು ಸ್ವತಹ ಉಪೇಂದ್ರ ಅವರೇ ನಿರ್ದೇಶಿಸಿ ಹಾಗೂ ನಾಯಕನಟನಾಗಿ ಕೂಡ ನಟಿಸಿದ್ದರು. ಇದರಲ್ಲಿ ಇದ್ದಂತಹ ಮೂರು ನಟಿಯರಲ್ಲಿ ನಟಿ ದಾಮಿನಿ ಕೂಡ ಒಬ್ಬರಾಗಿದ್ದರು. ಇನ್ನು ದಾಮಿನಿ ಅವರ ಜೊತೆಗೆ ಈ ಚಿತ್ರದಲ್ಲಿ ಕನ್ನಡದ ಖ್ಯಾತ ನಟಿಯಾದ ಪ್ರೇಮ ಹಾಗೂ ಬಾಲಿವುಡ್ನ ಖ್ಯಾತ ನಟಿಯಾದ ರವೀನ ತಂಡನ್ ರವರು ಕೂಡ ಕಾಣಿಸಿಕೊಂಡಿದ್ದರು.

ಕನ್ನಡ ಚಲನಚಿತ್ರರಂಗದಲ್ಲಿ ಉಪೇಂದ್ರ ಚಿತ್ರ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಇಂತಹ ವಿಭಿನ್ನ ಅಭಿರುಚಿಯುಳ್ಳ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ನಂತರ ಕನ್ನಡ ಚಿತ್ರರಂಗದಲ್ಲಿ ಇವರಿಗೆ ಒಳ್ಳೆಯ ಬೇಡಿಕೆ ನಿರ್ಮಾಣವಾಗಿತ್ತಾದರೂ ನಟಿ ದಾಮಿನಿ ಅವರು ಒಳ್ಳೆಯ ಕಥೆಯನ್ನು ಒಪ್ಪಿಕೊಂಡು ಚಿತ್ರ ಮಾಡದೆ ಬೇಕಾಬಿಟ್ಟಿಯಾಗಿ ಕಥೆಗಳನ್ನು ಒಪ್ಪಿಕೊಂಡು ಚಿತ್ರದಲ್ಲಿ ನಟಿಯಾಗಿ ನಟಿಸುತ್ತ ಬಂದರು. ಆದರೆ ನಟಿ ದಾಮಿನಿ ಅವರು ಇದರಿಂದಾಗಿ ಬಹಳಷ್ಟು ನಷ್ಟವನ್ನು ಅನುಭವಿಸುವಂತಾಯಿತು ಏಕೆಂದರೆ ಅವರು ಚಿತ್ರಗಳನ್ನು ಕೇವಲ ಸಂಭಾವನೆಗಾಗಿ ಮಾಡುತ್ತಿದ್ದರು ಯಾವುದೇ ಒಳ್ಳೆಯ ನಟನೆಯಾಗಲಿ ಅಥವಾ ಒಳ್ಳೆಯ ಕಥೆ ಇರುವ ಚಿತ್ರಗಳನ್ನಾಗಲೀ ಒಪ್ಪಿಕೊಳ್ಳಲೇ ಇಲ್ಲ.

ನಂತರ ಇತ್ತೀಚಿಗಷ್ಟೇ 2016 ರಲ್ಲಿ ಬಿಡುಗಡೆಯಾದ ಸ್ವತಂತ್ರಪಾಳ್ಯ ಎಂಬ ಚಿತ್ರದಲ್ಲಿ ಹುಚ್ಚ ವೆಂಕಟ್ ಅವರ ನಿರ್ದೇಶನ ಹಾಗೂ ನಟನೆಯ ಚಿತ್ರ ಮೂಡಿ ಬಂದಿತ್ತು. ಇದರಲ್ಲಿ ಕೂಡ ನಾಯಕಿಯಾಗಿ ನಟಿಸಿದ್ದರು ಅದರಲ್ಲಿ ನೀವು ತಿಳಿದುಕೊಳ್ಳಬಹುದು ಅವರು ಎಷ್ಟು ಸೋತು ಹೋಗಿದ್ದರು ಎಂದು. ಇನ್ನು ಈ ಚಿತ್ರದಲ್ಲಿ ಕೂಡ ನಿರ್ಮಾಪಕರೊಂದಿಗೆ rs.80000 ಸಂಭಾವನೆಗಾಗಿ ಜಗಳವನ್ನು ಆಡಿದ್ದರು ಎಂಬುದು ಸುದ್ದಿಮಾಧ್ಯಮಗಳಲ್ಲಿ ಬಿತ್ತರವಾಗಿತ್ತು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸುದ್ದಿಯಾಗಿತ್ತು.

ಇದಾದ ನಂತರ ನಟಿ ದಾಮಿನಿ ಅವರು ಸಂಪೂರ್ಣವಾಗಿ ಚಿತ್ರದಿಂದ ವಿಫಲ ಪ್ರಯತ್ನವನ್ನು ಪಡೆದು ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿ ಈಗ ಎಲ್ಲಿದ್ದಾರೆ ಎಂದು ಯಾವ ಮೂಲಗಳಿಂದಲೂ ಸುದ್ದಿ ಇಲ್ಲ. ನಿಮಗೇನನ್ನಿಸುತ್ತಿದೆ ಸ್ನೇಹಿತರೆ ದಾಮಿನಿ ಅವರ ವಿಫಲತೆಗೆ ಕಾರಣವಾದ ಅಂಶಗಳು ಯಾವುವು ಅವರು ಏನನ್ನು ಮಾಡಿದರೆ ಸುಧಾರಣೆ ಮಾಡಿಕೊಳ್ಳಬಹುದಿತ್ತು ಎಂಬುದು ನಿಮ್ಮ ಅನಿಸಿಕೆ ಇದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.