Neer Dose Karnataka
Take a fresh look at your lifestyle.

ಕನ್ನಡ ಸುದ್ದಿವಾಹಿನಿಯ ಖ್ಯಾತ ನಿರೂಪಕಿ ರಾಧಾ ಹಿರೇಗೌಡ ಅವರ ಪತಿ ಯಾರು ಗೊತ್ತಾ? ಇಲ್ಲಿವೆ ನೋಡಿ ಕುಟುಂಬದ ಫೋಟೋಗಳು.

ನಮಸ್ಕಾರ ಸ್ನೇಹಿತರೇ ಪತ್ರಿಕೋದ್ಯಮ ಹಾಗೂ ಸುದ್ದಿವಾಹಿನಿಗಳಲ್ಲಿ ಸಾಕಷ್ಟು ನಿರೂಪಕರು ತಮ್ಮದೇ ಆದ ಒಂದು ಮಾತುಗಾರಿಕೆಯ ಮೂಲಕ ಜನಪ್ರಿಯತೆಯನ್ನು ಪಡೆದಿದ್ದಾರೆ. ಯಾವ ದೊಡ್ಡ ಜನರಪಿಯಂತೆ ಪಡೆದುಕೊಂಡಿರುವವರಿಗೆ ಆಗಲಿ ಹಿಂಜರಿಯದೆ ಪ್ರಶ್ನೆಗಳನ್ನು ಕೇಳುವ ಧೈರ್ಯ ಇವರಿಗಿದೆ. ಇನ್ನು ಇಂತಹ ಸುದ್ದಿವಾಹಿನಿಯ ನಿರೂಪಕರಲ್ಲಿ ರಾಧಾ ಹಿರೇಗೌಡ ಕೂಡ ಒಬ್ಬರು. ಹೌದು ರಾಧಾ ಅವರು ಕೂಡ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಯಾರಿಗೂ ಹೆದರದೆ ತಮ್ಮ ನೇರ ಪ್ರಶ್ನೆಗಳನ್ನು ಮುಂದಿಡುತ್ತಾರೆ.

ಇನ್ನು ಇವರು ಮುಂದೆ ಕುಳಿತು ಉತ್ತರ ನೀಡುವವರು ಕೂಡ ಕಕ್ಕಾಬಿಕ್ಕಿಯಾಗುವಂತೆ ಇವರ ಪ್ರಶ್ನೆಗಳು ಇರುತ್ತವೆ. ಪತ್ರಿಕೋದ್ಯಮದ ರಂಗದಲ್ಲಿ ಸಾಕಷ್ಟು ಕಡೆ ಹಲವಾರು ಕೆಲಸಗಳನ್ನು ಮಾಡಿದ ಅನುಭವ ಇವರಿಗಿದೆ. ಅಷ್ಟೇ ಅಲ್ಲದೆ ಚಿತ್ರರಂಗದ ಸೆಲೆಬ್ರಿಟಿಗಳಂತೆ ಇವರಿಗೂ ಕೂಡ ಸಾಕಷ್ಟು ಅಭಿಮಾನಿಗಳಿದ್ದಾರೆ. ಇನ್ನು ಇಷ್ಟೆಲ್ಲಾ ಜನಪ್ರಿಯತೆ ಪಡೆದಿರುವ ರಾಧಾ ಅವರ ಪತಿ ಯಾರು? ಹೇಗಿದ್ದಾರೆ? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.

ರಾಧಾ ಅವರು ಚಿಕ್ಕವಯಸ್ಸಿನಿಂದಲೇ ನಿರೂಪಕಿ ಆಗಬೇಕೆಂಬ ಕನಸನ್ನು ಕಟ್ಟಿಕೊಂಡವರು. ಹೀಗಾಗಿ ಶಾಲಾ ದಿನಗಳಲ್ಲಿ ಹಾಗೂ ಕಾಲೇಜು ದಿನಗಳಲ್ಲಿ ಹಲವಾರು ಸಭೆ-ಸಮಾರಂಭಗಳಿಗೆ ಅವರ ನಿರೂಪಣೆ ಮಾಡುತ್ತಿದ್ದರಂತೆ. ನಂತರದಲ್ಲಿ ವಿದ್ಯಾಭ್ಯಾಸ ಮುಗಿಸಿ ಪತ್ರಿಕೋದ್ಯಮಕ್ಕೆ ಪಾದರ್ಪಣೆ ಮಾಡಿದ ರಾಧಾ ಅವರು ಸಾಕಷ್ಟು ಕಡೆ ಹಲವಾರು ಕೆಲಸಗಳನ್ನು ಮಾಡಿದ್ದಾರೆ. ಈ ಎಲ್ಲಾ ಅನುಭವಗಳನ್ನು ಸದುಪಯೋಗಪಡಿಸಿಕೊಂಡ ರಾಧಾ ರವರು,

ಪಬ್ಲಿಕ್ ಟಿವಿ ವಾಹಿನಿಯಲ್ಲಿ ರಂಗನಾಥ್ ಅವರೊಂದಿಗೆ ನಿರೂಪಣೆ ಮಾಡುವುದರ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡರು. ಇದಾದ ನಂತರ ಸಾಕಷ್ಟು ವಾಹಿನಿಗಳು ಅವರಿಗೆ ಹಲವಾರು ಅವಕಾಶಗಳನ್ನು ಕೂಡ ನೀಡಲು ಮುಂದಾದವು. ಇದೀಗ ರಾಧಾ ಅವರು ಬಿ ಟಿವಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ತಮ್ಮ ಮಾತಿನ ಮೂಲಕ ಹಾಗೂ ತಮ್ಮ ಧೈರ್ಯದ ಮೂಲಕ ಸಾಕಷ್ಟು ಕನ್ನಡಿಗರ ಮನಸ್ಸನ್ನು ಕೂಡ ಗೆದ್ದಿದ್ದಾರೆ.

ಇನ್ನು ರಾಧಾ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಇವರು ನಾಗರಾಜ್ ಎಂಬುವರನ್ನು ಮದುವೆಯಾಗಿದ್ದಾರೆ. ಈ ದಂಪತಿಗಳಿಗೆ ಒಬ್ಬ ಮಗ ಕೂಡ ಇದ್ದಾನೆ. ಇನ್ನು ತಮ್ಮ ಕೌಟುಂಬಿಕ ಜೀವನದಲ್ಲಿ ಕೂಡ ರಾಧಾ ಅವರು ಸಂತೋಷವಾಗಿದ್ದಾರೆ. ಇನ್ನು ಕನ್ನಡ ಸುದ್ದಿವಾಹಿನಿಯ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರಲ್ಲಿ ಇವರು ಮೊದಲಿಗರು. ಇನ್ನು ಇತ್ತೀಚಿಗಷ್ಟೇ ಪ್ರಾರಂಭವಾಗಿದ್ದ ಕನ್ನಡದ ಬಿಗ್ ಬಾಸ್ ಸೀಸನ್ ಎಂಟರಲ್ಲಿ ರಾಧಾ ಅವರು ಕೂಡ ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಆದರೆ ಅವಕಾಶ ಇವರಿಗೆ ದೊರೆಯಲಿಲ್ಲ. ಒಂದು ವೇಳೆ ಇವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಅಲ್ಲಿನ ವಾತಾವರಣವೇ ಬೇರೆಯಾಗಿರುತ್ತಿತ್ತು ಎಂದು ಸಾಕಷ್ಟು ಅಭಿಮಾನಿಗಳು ಹೇಳಿದ್ದಾರೆ. ಒಟ್ಟಾರೆಯಾಗಿ ಇತ್ತ ಸುದ್ದಿವಾಹಿನಿಯಲ್ಲಿ ಜನಪ್ರಿಯತೆ ಪಡೆದು ಮತ್ತೊಂದು ಕಡೆ ಜೀವನದಲ್ಲಿ ಕೂಡ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಇನ್ನು ಇವರಿಗೆ ಇದೇ ರೀತಿ ಯಶಸ್ಸು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಈ ಮೂಲಕ ನಾವು ಹಾರೈಸೋಣ.

Comments are closed.