Neer Dose Karnataka
Take a fresh look at your lifestyle.

ಬಿಗ್ ಬಾಸ್ ಖ್ಯಾತಿಯ ಶುಭಪೂಂಜ ಮದುವೆಯಾಗುತ್ತಿರುವ ಹುಡುಗ ಅಸಲಿಗೆ ಯಾರು ಗೊತ್ತೇ?? ಇವರ ಬ್ಯಾಕ್ಗ್ರೌಂಡ್ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹಿಂದೆ ಕನ್ನಡ ಚಿತ್ರರಂಗದಲ್ಲಿ ಮೊಗ್ಗಿನ ಮನಸ್ಸಿನ ಮೂಲಕ ಸಕ್ಕತ್ ಇನೋಸೆಂಟ್ ನಟಿಯಾಗಿ ಬಂದು ನಂತರದ ದಿನಗಳಲ್ಲಿ ಗ್ಲಾಮರಸ್ ನಟಿಯಾಗಿ ರೂಪಗೊಂಡ ಅಂತಹ ನಟಿಯ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಗ್ಲಾಮರಸ್ ನಟಿಯರಲ್ಲಿ ಒಬ್ಬರು ಆದಂತಹ ಶುಭಪುಂಜ ರವರ ಕುರಿತಂತೆ.

ಮೂಲತಹ ಕರಾವಳಿ ಭಾಗದ ಮಂಗಳೂರಿನ ಮೂಲದವರಾದ ಇವರು ಮೊದಲ ಸಾಧನೆಯಾಗಿ ಗುರುತಿಸಿಕೊಂಡಿದ್ದು ಮಾತ್ರ 2003 ರಲ್ಲಿ ನಡೆದ ಮಿಸ್ ಚೆನ್ನೈಯನ್ನು ಗೆಲ್ಲುವ ಮೂಲಕ. ಅಲ್ಲದೇ ಅವರು ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದು ಕೂಡ ತಮಿಳುನಾಡಿನ ಭಾಷೆ ತಮಿಳಿನಲ್ಲಿ ಅದು ಕೂಡ ಮಚ್ಚಿ ಚಿತ್ರದ ಮೂಲಕ. ಇದಾದ ನಂತರ ಹಲವಾರು ತಮಿಳು ಚಿತ್ರಗಳಲ್ಲಿ ಶುಭಪುಂಜ ರವರು ನಟಿಸಿದ ನಂತರ 2006 ರಲ್ಲಿ ಕನ್ನಡ ಚಿತ್ರರಂಗಕ್ಕೆ ಜಾಕ್ ಪಾಟ್ ಚಿತ್ರದ ಮೂಲಕ ಎಂಟ್ರಿ ನೀಡಿದರು.

ಆದರೆ ಅವರಿಗೆ ಹೆಸರು ನೀಡಿದ್ದು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮುಖ್ಯಪಾತ್ರದಲ್ಲಿ ನಟಿಸಿದ್ದ ಮೊಗ್ಗಿನ ಮನಸ್ಸು ಚಿತ್ರದಲ್ಲಿ. ಈ ಚಿತ್ರದಲ್ಲಿ ಇವರು ನಟಿಸಿದ ಪಾತ್ರಕ್ಕೆ ಬೆಸ್ಟ್ ಸಪೋರ್ಟಿಂಗ್ ಕ್ಯಾರೆಕ್ಟರ್ ಫಿಲಂಫೇರ್ ಅವಾರ್ಡ್ ಕೂಡಾ ಸಿಕ್ಕಿತು. ಇದಾದನಂತರ ಇವರು ದುನಿಯಾ ವಿಜಯ ರವರೊಂದಿಗೆ ಹಲವಾರು ಚಿತ್ರಗಳಲ್ಲಿ ನಟಿಸಿದರು. ಇದೇ ಸಮಯದಲ್ಲಿ ಮಾಧ್ಯಮದಲ್ಲಿ ಇವರಿಬ್ಬರು ಮದುವೆಯಾಗಿರುವ ಕುರಿತಂತೆ ಹಲವಾರು ಸುದ್ದಿಗಳು ಹಾಗೂ ಫೋಟೋಗಳು ಹರಿದಾಡಿದವು.

ಈ ಕುರಿತಂತೆ ಸಾಕಷ್ಟು ಸುದ್ದಿಗಳು ಕೂಡ ಎಲ್ಲೆಡೆ ಹರಿದಾಡಿದ್ದವು ಹಾಗೂ ಇದಾದ ಸ್ವಲ್ಪ ವರ್ಷಗಳವರೆಗೆ ಶುಭಪೂಂಜ ರವರು ಯಾವ ಚಿತ್ರದಲ್ಲಿ ಹಾಗೂ ಹೊರಗಡೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ನಂತರ ಕೆಲ ವರ್ಷಗಳಲ್ಲೇ ಮತ್ತೊಮ್ಮೆ ಸ್ಯಾಂಡಲ್ವುಡ್ಗೆ ಕಂಬ್ಯಾಕ್ ಮಾಡಿ ಈ ಬಾರಿ ಗ್ಲಾಮರಸ್ ಪಾತ್ರದ ಮೂಲಕ ಪಡ್ಡೆ ಹುಡುಗರ ಮನ ಗೆದ್ದರು. ಇತ್ತೀಚಿಗಷ್ಟೇ ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಕೂಡ ಹೋಗಿದ್ದರು. ಅಲ್ಲಿ ತಮ್ಮ ಮುಗ್ದತೆಯ ಮೂಲಕ ಶುಭ ಪೂಂಜಾರವರು ಇಡೀ ಕರ್ನಾಟಕದ ಜನತೆಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಫೈನಲ್ ಸ್ಥಾನವನ್ನು ತಲುಪುವ ಪಕ್ಕ ಸ್ಪರ್ದಿಯಾಗಿದ್ದರೆ.

ಇನ್ನು ನಟಿ ಶುಭಾ ಪೂಂಜಾ ರವರ ಮದುವೆ ಬಗ್ಗೆ ಹೇಳೋದಾದರೆ ಅವರನ್ನು ಮದುವೆಯಾಗಲು ಹೊರಟಿರುವ ಹುಡುಗ ಹಾಗೂ ಅವರ ಸಂಪೂರ್ಣ ಮಾಹಿತಿಯನ್ನು ನಿಮಗೆ ಹೇಳುತ್ತೇವೆ ಬನ್ನಿ. ಹೌದು ಸ್ನೇಹಿತರೆ ಈಗಾಗಲೇ ಶುಭಪೂಂಜಾ ರವರ ಮದುವೆ ತಯಾರಿಯ ಹಂತದಲ್ಲಿದ್ದು ಲಾಕ್ಡೌನ್ ಕಾರಣದಿಂದಾಗಿ ಇನ್ನೂ ಪೂರ್ಣಗೊಂಡಿಲ್ಲ. ಶುಭಪುಂಜ ರವರು ಹಲವಾರು ವರ್ಷಗಳಿಂದ ಡೇಟಿಂಗ್ ನಡೆಸಿ ಈಗ ಮದುವೆಯಾಗಲು ಹೊರಟಿರುವ ಹುಡುಗ ಯಾರು ಗೊತ್ತಾ ಸ್ನೇಹಿತರೆ ಅವರ ಹೆಸರು ಸುಮಂತ್ ಬಿಲ್ಲವ.

ಹೌದು ಸ್ನೇಹಿತರೆ ಇವರು ಕೂಡ ಕರಾವಳಿ ಭಾಗದವರೇ ಬೆಂಗಳೂರಿನಲ್ಲಿ ಗ್ಯಾಸ್ ಏಜೆನ್ಸಿ ಯನ್ನು ನಡೆಸುತ್ತಿದ್ದು ಜಯಕರ್ನಾಟಕ ಸಂಘಟನೆಯಲ್ಲಿ ಕೂಡ ಪ್ರಮುಖರಾಗಿದ್ದಾರೆ. ಇನ್ನು ಮುತ್ತಪ್ಪ ರೈ ಅವರ ಆಪ್ತ ಬಳಗದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಇವರ ಮದುವೆ ಪೂರ್ಣಗೊಳ್ಳಬೇಕಿತ್ತು. ಈ ಮಹಾಮಾರಿಯ ಕಾರಣದಿಂದಾಗಿ ಇವರ ಮದುವೆಯನ್ನು ಮುಂದೂಡಲಾಗಿದೆ. ಪರಿಸ್ಥಿತಿ ತಿಳಿಗೊಂಡ ಮೇಲೆ ಎಲ್ಲಾ ಅಭಿಮಾನಿಗಳ ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗ ಬೇಕೆಂಬುದು ನಟಿ ಶುಭಾ ಪೂಂಜಾ ಹಾಗೂ ಸುಮಂತ್ ಬಿಲ್ಲವ ರವರ ಮಹದಾಸೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.