Neer Dose Karnataka
Take a fresh look at your lifestyle.

ನಿಖಿಲ್ ಹಾಗೂ ರೇವತಿ ರವರು ಖುಷಿ ವಿಷಯ ನೀಡಿದ ಬೆನ್ನಲ್ಲೇ ರಾಧಿಕಾ ರವರು ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅಂದೊಮ್ಮೆ ತಮ್ಮ ಸಿನಿ ಜೀವನದ ಉತ್ತುಂಗಕ್ಕೆ ಏರಿದ್ದ ನಟಿ ನಂತರದ ದಿನಗಳಲ್ಲಿ ಯಾರೊಬ್ಬರನ್ನು ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದು ನಂತರ ನಿರ್ಮಾಪಕಿಯಾಗಿ ವಾಪಸಾಗಿ ಬಂದಂತಹ ಕತೆ ನಿಮಗೆ ಗೊತ್ತೇ ಇದೆ. ಹೌದು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗ ಕಂಡ ಖ್ಯಾತ ನಟಿ ರಾಧಿಕಾ ಕುಮಾ’ರಸ್ವಾಮಿ ಅವರ ಬಗ್ಗೆ.

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಉಜ್ವಲ ಭವಿಷ್ಯವನ್ನು ಹೊಂದಿದ್ದ ರಾಧಿಕಾ ರವರು ಕುಮಾರ’ಸ್ವಾಮಿ ಅವರನ್ನು ಮದುವೆಯಾದ ನಂತರ ಚಿತ್ರರಂಗದಿಂದ ದೂರವೇ ಉಳಿದರು. ಎಲ್ಲರಿಗೂ ಗೊತ್ತಿದ್ದದ್ದೆ. ರಾಧಿಕಾ ರವರು ತಮ್ಮ 9ನೇ ಕ್ಲಾಸಲ್ಲಿ ಇರಬೇಕಾದರೆ 2002 ರಲ್ಲಿ ನೀಲ ಮೇಘ ಶಾಮ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ರಾಘವೇಂದ್ರ ರಾಜಕುಮಾರ್ ನಟನೆಯ ನಿನಗಾಗಿ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಚಿತ್ರ ಮೊದಲ ಬಿಡುಗಡೆಯಾದ ಚಿತ್ರವಾಗಿದೆ.

2000 ಇಸವಿಯ ಆಸುಪಾಸಿನಲ್ಲಿ ಕನ್ನಡ ಚಿತ್ರರಂಗದ ಏಕೈಕ ಅನಭಿಷಕ್ತ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಮೆರೆದರು. ಎಲ್ಲಾ ಟಾಪ್ ಸ್ಟಾರ್ಗಳ ಚಿತ್ರದಲ್ಲಿ ನಟಿಸಿ ಸೂಪರ್ಸ್ಟಾರ್ ನಟಿಯಾಗಿ ಮೆರೆದರು. ಅದರಲ್ಲೂ ಸೆಂಚುರಿಸ್ಟಾರ್ ಶಿವಣ್ಣನ ಜೊತೆಗೆ ನಟಿಸಿದ ಅಣ್ಣ-ತಂಗಿ ಸೆಂಟಿಮೆಂಟಿನ ಚಿತ್ರಗಳಂತೂ ಕನ್ನಡ ಚಿತ್ರರಂಗದ ಇಂದಿಗೂ ಕೂಡ ಎಲ್ಲವನ್ನೂ ಮೀರಿಸುವಂಥ ಚಿತ್ರವಾಗಿ ಮೂಡಿಬಂದಿವೆ.

ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿತ್ತೆಂದರೆ ಇಂದಿಗೂ ಸಹ ಶಿವರಾಜಕುಮಾರ್ ಅವರ ಮನೆಗೆ ನಟಿ ರಾಧಿಕಾ ರವರು ಚಿನ್ನದ ರಾಖಿಯನ್ನು ಕಳಿಸುತ್ತಾರೆ. ಇನ್ನು 2006 ರಲ್ಲಿ ಸಡನ್ನಾಗಿ ರಾಧಿಕಾ ರವರು ಕುಮಾ’ರಸ್ವಾಮಿಯವರನ್ನು ವಿವಾಹವಾಗುತ್ತಾರೆ. ನಂತರ ಇವರಿಗೆ ಶಮಿಕಾ ಎಂಬ ಮಗಳೂ ಕೂಡ ಜನಿಸುತ್ತಾಳೆ. ನಟಿ ರಾಧಿಕಾ ರವರು ಚಿತ್ರರಂಗದಿಂದ ಬಹಳಷ್ಟು ಕಾಲ ನಟಿಯಾಗಿ ದೂರವಿದ್ದರೂ. ನಂತರದ ದಿನಗಳಲ್ಲಿ ತನ್ನ ಮಗಳ ಹೆಸರಿನಲ್ಲಿ ಶಮಿಕಾ ಎಂಟರ್ ಪ್ರೈಸಸ್ ಎಂಬ ಸಿನಿ ನಿರ್ಮಾಣ ಸಂಸ್ಥೆಯನ್ನು ನಿರ್ಮಿಸಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಮ್ಯಾ ನಟನೆಯ ಲಕ್ಕಿ ಎಂಬ ಸೂಪರ್ ಹಿಟ್ ಚಿತ್ರವನ್ನು ನಿರ್ಮಿಸಿ ನಿರ್ಮಾಪಕಿಯಾಗಿ ಯಶಸ್ವಿಯಾದರು.

ಇನ್ನು ಒಂದು ಸಮಯದಲ್ಲಿ ನಿಖಿಲ್ ಅವರು ರಾಧಿಕಾ ರವರ ಮಗಳಾದ ಶ್ರಮಿಕ ನನ್ನ ತಂಗಿಯ ಅಲ್ಲವೆಂದು ಖಡಾಖಂಡಿತವಾಗಿ ಕಡ್ಡಿ ಮುರಿದಂತೆ ಹೇಳಿಬಿಟ್ಟರು. ಇದರಿಂದಾಗಿ ಕುಮಾ’ರಸ್ವಾಮಿ ಅವರ ಕುಟುಂಬ ಹಾಗೂ ರಾಧಿಕಾ ರವರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ನಿಶ್ಚಯವಾಗಿತ್ತು. ಆದರೆ ಇತ್ತೀಚಿಗೆ ನಿಖಿಲ್ ಕುಮಾರ್ ಹಾಗೂ ಅವರ ಪತ್ನಿ ರೇವತಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷದ ಸುದ್ದಿಯೊಂದು ಹಂಚಿಕೊಂಡಿದ್ದರು. ಹೌದು ರೇವತಿ ಅವರು ಗರ್ಭಿಣಿಯಾಗಿದ್ದು ಸದ್ಯದಲ್ಲೇ ನಿಖಿಲ್ ಕುಮಾರ್ ರವರು ತಂದೆಯಾಗಲಿದ್ದಾರೆ ಎಂಬ ಸಂತೋಷದ ಸುದ್ದಿ. ಅದಕ್ಕೆ ರಾಧಿಕಾ ರವರು ಏನೆಂದು ಪ್ರತಿಕ್ರಿಯಿಸಿದ್ದಾರೆ ಗೊತ್ತಾ ನಿಮಗೆ.

ಬನ್ನಿ ಸ್ನೇಹಿತರೆ ನಿಖಿಲ್ ಕುಮಾರ್ ಹಾಗೂ ರೇವತಿ ಅವರು ಸದ್ಯದಲ್ಲೇ ಮಗುವನ್ನು ಪಡೆಯಲಿದ್ದಾರೆ ಎಂಬ ಸಂತೋಷದ ಸುದ್ದಿಯನ್ನು ಕೇಳಿದ ನಂತರ ರಾಧಿಕಾ ರವರು ಏನೆಂದು ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ. ಹೌದು ಸ್ನೇಹಿತರೆ ಈ ಸುದ್ದಿ ಕೇಳಿದ ಕ್ಷಣ ರಾಧಿಕಾ ರವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ನಿಖಿಲ್ ರೇವತಿ ನನಗೆ ಒಳ್ಳೆಯ ಸ್ನೇಹಿತರು ಅವರಿಬ್ಬರು ಈಗ ಮಗು ಹೊಂದುತ್ತಿರುವ ಬಗ್ಗೆ ನನಗೆ ತುಂಬಾ ಖುಷಿ ಇದೆ ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂಬುದಾಗಿ ಬರೆದುಕೊಂಡಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಮೆಂಟ್ ಮಾಡುವ ಮೂಲಕ ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.