Neer Dose Karnataka
Take a fresh look at your lifestyle.

ಮಂಜು ಪಾವಗಡ ಬಿಗ್ ಬಾಸ್ ಗೆಲ್ಲಲು ಕಾರಣವಾದ ಆ ಹಿಂದಿನ ಕೈ ಯಾರದ್ದು ಗೊತ್ತಾ?? ಮಂಜು ಗೆಲ್ಲಲು ಸ್ಫೂರ್ತಿ ನೀಡಿದ್ದು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂತೂ ಇಂತೂ ತಿಂಗಳಾನುಗಟ್ಟಲೆಯಿಂದ ಕಾಯುತ್ತಿದ್ದಂತಹ ಗಳಿಗೆ ಎಲ್ಲರಿಗೂ ಗೊತ್ತಾಗಿಬಿಟ್ಟಿದೆ. ಹೌದು ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಡೆಸಿಕೊಡುತ್ತಿದ್ದಂತಹ ಕನ್ನಡದ ಅತ್ಯಂತ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 8ರ ವಿನ್ನರ್ ಯಾರೆಂಬುದು ನಿನ್ನೆಯಷ್ಟೇ ಘೋಷಣೆಯಾಗಿದೆ.

ಹೌದು ಸ್ನೇಹಿತರೆ ಲಾಕ್ಡೌನ್ ಮಧ್ಯದಲ್ಲಿ ಪ್ರಾರಂಭ ವಾದಂತಹ ಈ ರಿಯಾಲಿಟಿ ಶೋ ಕಾರಣಾಂತರಗಳಿಂದ ಮಧ್ಯದಲ್ಲಿ ಸ್ಥಗಿತಗೊಂಡು ಮತ್ತೆ ಸೆಕೆಂಡ್ ಇನ್ನಿಂಗ್ಸ್ ನ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡಿ ಕನ್ನಡ ಪ್ರೇಕ್ಷಕರ ಮನವನ್ನು ರಂಜಿಸಿತು. ಇನ್ನು ಟಾಪ್ 2 ಅಭ್ಯರ್ಥಿಗಳಾದ ಮಂಜು ಪಾವಗಡ ಹಾಗೂ ಅರವಿಂದ ಕೆಪಿ ನಡುವೆ ಸಾಕಷ್ಟು ಪೈಪೋಟಿ ಇತ್ತು. ಆದರೆ ಮಜಾಭಾರತ ಖ್ಯಾತಿಯ ಮಂಜು ಪಾವಗಡ 45 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ವಿನ್ನರ್ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಘೋಷಿಸಿದ್ದಾರೆ.

ಇನ್ನು ಮಂಜು ಪಾವಗಡ ರವರು ಮೊದಲನೆಯ ಸ್ಥಾನಕ್ಕಾಗಿ 53 ಲಕ್ಷ ರೂಪಾಯಿ ಬಹುಮಾನವನ್ನು ಪಡೆದುಕೊಂಡರೇ ಇತ್ತ ಎರಡನೇ ಸ್ಥಾನ ಪಡೆದ ಅರವಿಂದ್ ಕೆಪಿ ರವರು 11 ಲಕ್ಷ ರೂಪಾಯಿ ಬಹುಮಾನವನ್ನು ಪಡೆದರು. ಇನ್ನು ಮಂಜು ಪಾವಗಡ ರವರು ತಾನು ಬಿಗ್ ಬಾಸ್ ಗೆಲ್ಲುವುದಕ್ಕೆ ಯಾರು ಸ್ಪೂರ್ತಿ ಎಂಬುದನ್ನು ಕೂಡ ಬಿಗ್ ಬಾಸ್ ವೇದಿಕೆಯಲ್ಲಿ ತಿಳಿಸಿದ್ದಾರೆ. ಹೌದು ಸ್ನೇಹಿತರೆ ಮಂಜು ಪಾವಗಡ ರವರು ಬಿಗ್ ಬಾಸ್ ಗೆಲ್ಲುವುದಕ್ಕೆ ಮುಖ್ಯ ಸ್ಪೂರ್ತಿ ಅರವಿಂದ್ ಕೆಪಿ ಅವರಂತೆ. ಇನ್ನು ಅರವಿಂದ್ ಕೆಪಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ತಮ್ಮ ಜಾಕೆಟ್ ನ್ನು ವೇದಿಕೆಯಲ್ಲಿ ಕೊಟ್ಟಿದ್ದಾರೆ.

Comments are closed.