Neer Dose Karnataka
Take a fresh look at your lifestyle.

ನೇರವಾಗಿ ಅನಿರುದ್ ರವರನ್ನು ಮಾವನ ಹಂಗಿನಲ್ಲಿ ಬದುಕುತ್ತಿದೀಯಾ, ನೀನು ದತ್ತು ಅಳಿಯ ಎಂದು ಒಬ್ಬರು ಹೇಳಿದ ನಂತರ ಅನಿರುದ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಬೆಳ್ಳಿತೆರೆಯಿಂದ ಜರ್ನಿ ಆರಂಭಿಸಿ ಇದೀಗ ಕಿರುತೆರೆಯಲ್ಲಿ ನಟಿಸಿ ಕನ್ನಡಿಗರ ಮನೆ ಮನ ಗೆದ್ದ ಪ್ರಭಾವಿ ನಟ, ಅನಿರುದ್ಧ್ ಅವರು. ಅನಿರುದ್ಧ್ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ಆರ್ಯವರ್ಧನ್ ಆಗಿ ಪಾತ್ರ ನಿಭಾಯಿಸುತ್ತಿದ್ದಾರೆ. ಅನಿರುದ್ದ್ ಅವರಿಗೆ ಈಗ ಇರುವ ಅಭಿಮಾನಿಗಳ ಸಂಖ್ಯೆ ಅಪಾರ. ಅದರಲ್ಲೂ ಎಲ್ಲಾ ವಯೋಮಿತಿ, ವರ್ಗದ ಜನರೂ ಕೂಡ ಅನಿರುದ್ಧ್ ಅವರನ್ನು ನೆಚ್ಚಿಕೊಂಡಿದ್ದಾರೆ ಎನ್ನುವುದು ವಿಶೇಷ. ಅನಿರುದ್ಧ್ ಅವರ ಮುಖದಲ್ಲಿರುವ ಮುಗ್ದತೆ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಯಾಕೆಂದರೆ ತೆರೆಯ ಮೇಲೆ ಮಾತ್ರವಲ್ಲದೇ ತೆರೆಯ ಹಿಂದೆಯೂ ಕೂಡ ಅನಿರುದ್ದ್ ಒಬ್ಬ ಸಾಮಾಜಿಕ ಕಳಕಳಿ ಇರುವ ವ್ಯಕ್ತಿ.

ಹೌದು ಸ್ನೇಹಿತರೆ, ಕನ್ನಡದ ಮೇರು ನಟ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್. ವಿಷ್ಣುಅವರಂತೆಯೇ ಸಾಮಾಜಿಕ ಚಟುಚಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅನಿರುದ್ದ್, ವಿಷ್ಣು ದಾದಾರ ಹೆಸರನ್ನು ಉಳಿಸುತ್ತಿರುವುದರಲ್ಲಿ ಎರಡು ಮಾತಿಲ್ಲ. ಇತ್ತೀಚಿಗೆ ಸ್ವಚ್ಛತೆಯ ವಿಷಯದಲ್ಲಿ ಅನಿರುದ್ದ್ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಸ್ವಚ್ಛವಾಗಿಲ್ಲದ ಪ್ರದೇಶಗಳ ಪೋಟೋಗಳನ್ನು ತೆಗೆದು ಆಯಾ ಭಾಗದ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಆ ಭಾಗ ಸ್ವಚ್ಫವಾಗುವಂತೆ ನೋಡಿಕೊಳ್ಳುತ್ತಾರೆ. ನಂತರ ಅಧಿಕಾರಿಗಳ ಕಾರ್ಯಕ್ಕೆ ಕೃತಜ್ಞತೆಯನ್ನು ಹೇಳುವುದನ್ನೂ ಕೂಡ ಮರೆಯುವುದಿಲ್ಲ ನಟ ಅನಿರುದ್ಧ್.

ಇಷ್ಟು ಉತ್ತಮ ಸಾಮಾಜಿ ಕಾರ್ಯಗಳನ್ನು ಮಾಡುತ್ತಿರುವ ಅನಿರುದ್ಧ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್. ತಾವು ಪೋಸ್ಟ್ ಗಳನ್ನು ಹಾಕುವುದು ಮಾತ್ರವಲ್ಲದೇ ಅಭಿಮಾನಿಗಳ ಕಮೆಂಟ್ ಗೆ ಉತ್ತರಿಸುವುದೂ ಕೂಡ ಅನಿರುದ್ಧ್ ಅವರ ಉತ್ತಮ ಗುಣ. ಆದರೆ ಇದೀಗ ಇಂಥ ವ್ಯಕ್ತಿಯೂ ಕೂಡ ಬೇಡದ ಮಾತುಗಳಿಗೆ ಗುರಿಯಾಗಬೇಕಾಗಿದೆ. ಅನಿರುದ್ದ್ ಅವರ ಬಗ್ಗೆ ನಂದೀಶ್ ಸಂಪತ್ ಕುಮಾರ್ ಎಂಬ ವ್ಯಕ್ತಿ ಕಮೆಂಟ್ ಮಾಡಿದ್ದು, ವಿಷ್ಣುಅವರ ಹೆಸರನ್ನು ನೀನು ಉಳಿಸಬೇಕಿಲ್ಲ, ನಿಮ್ಮ ಅಪ್ಪನ ಹೆಸರು ಉಳಿಸು, ಮಾವನ ಹಂಗಿನಲ್ಲಿ ಬದುಕಬೇಡ ಎಂಬಂತೆ ಕಮೆಂಟ್ ಮಾಡಿದ್ದಾರೆ. ಇದಕ್ಕೆ ಅನಿರುದ್ಧ್ ಕೂಡ ನಯವಾಗಿಯೇ ಉತ್ತರಿಸಿದ್ದು, ನಿಮ್ಮ ಮಾತುಗಳು ನಿಮ್ಮ ತಂದೆ ತಾಯಿಯ ಹೆಸರನ್ನು ಹಾಳು ಮಾಡುವಂಥದ್ದು ಎಂದು ಖಾರವಾಗಿಯೇ ಉತ್ತರಿಸಿದ್ದಾರೆ. ಯಾರು ಏನೆ ಮಾಡಿದರೂ ಜನ ಮಾತನಾಡಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಅನಿರುದ್ದ್ ಹಾಗೂ ವಿಷ್ಣುವರ್ಧನ್ ಅಭಿಮಾನಿಗಳು ಆ ವ್ಯಕ್ತಿಯ ಕಮೆಂಟ್ ಗೆ ಕಮೆಂಟ್ ಮೂಲಕವೇ ಹಿಗ್ಗಾ ಮುಗ್ಗಾ ಝಾಡಿಸಿದ್ದಾರೆ.

Comments are closed.