Neer Dose Karnataka
Take a fresh look at your lifestyle.

ತನ್ನ ಹಳೆಯ ಫೋಟೋ ವೈರಲ್ ಬಗ್ಗೆ ದಿವ್ಯಾ ಉರುಡುಗ ಹೇಳಿದ್ದೇನು ಗೊತ್ತಾ?? ಅಸಲಿಗೆ ಆ ಹುಡುಗ ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಜರ್ನಿಯಲ್ಲಿ ಹೆಣ್ಣುಮಕ್ಕಳ ಪೈಕಿ ದಿವ್ಯ ಉರುಡುಗ ಅವರು ಸಾಕಷ್ಟು ಪ್ರಬಲ ಸ್ಪರ್ಧೆಯನ್ನು ನೀಡಿದ್ದರು. ಹೀಗಾಗಿ ಅವರು ಮೂರನೇ ಸ್ಥಾನವನ್ನು ಕೂಡ ಸಂಪಾದಿಸಿದರು. ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಪ್ರಾರಂಭದಿಂದಲೂ ಕೂಡ ಪ್ರೇಕ್ಷಕರಿಗೆ ದಿವ್ಯ ರವರ ಕುರಿತಂತೆ ಸಾಕಷ್ಟು ಬೆಂಬಲ ಖಂಡಿತವಾಗಿ ಇತ್ತು. ಬರಬರುತ್ತಾ ಬಿಗ್ ಬಾಸ್ ನಲ್ಲಿ ದಿವ್ಯ ಹಾಗೂ ಅರವಿಂದ್ ರವರ ನಡುವಿನ ಸ್ನೇಹ ಸಂಬಂಧ ಜಾಸ್ತಿಯಾದಂತೆ ಇವರಿಬ್ಬರ ಅಭಿಮಾನಿ ಬಳಗ ಗಳು ಕೂಡ ಹುಟ್ಟಿಕೊಂಡವು.

ಒಮ್ಮೆ ದಿವ್ಯ ಅವರು ತಮ್ಮ ತಂದೆಯ ಉಂಗುರವನ್ನು ಅರವಿಂದ್ ರವರ ಬೆರಳಿಗೆ ತೊಡಿಸಿದ ಮೇಲಂತೂ ಈ ಕುರಿತಂತೆ ಸುದ್ದಿಗಳು ಜಾಸ್ತಿಯಾಗಿ ಸದ್ದು ಮಾಡುತ್ತಿದ್ದವು. ಎಷ್ಟರಮಟ್ಟಿಗೆ ಎಂದರೆ ದಿವ್ಯ ರವರು ತಾವು ಮೂರನೇ ಸ್ಥಾನ ಪಡೆದಿದ್ದಕ್ಕೆ ಕೂಡ ಬೇಸರ ವ್ಯಕ್ತಪಡಿಸಿರಲಿಲ್ಲ ಪ್ರತಿಯೊಂದು ಸಂದರ್ಶನದಲ್ಲೂ ಅರವಿಂದ್ ರವರು ಗೆಲ್ಲಬೇಕಿತ್ತು ಎಂದು ಪುನರಾವರ್ತಿಸಿದ್ದಾರೆ. ಇದು ದಿವ್ಯ ರವರು ಅರವಿಂದ್ ಅವರ ಮೇಲೆ ಇಟ್ಟಂತಹ ಗೌರವ ಹಾಗೂ ಪ್ರೀತಿ. ಆದರೂ ಕೂಡ ದಿವ್ಯಾ ರವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಎಲ್ಲರ ಮನಗೆದ್ದಿದ್ದಾರೆ. ಇನ್ನು ದಿವ್ಯ ಉರುಡುಗ ಅವರ ಕುರಿತಂತೆ ಫೇಕ್ ಫೋಟೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದ್ದವು. ಈ ಕುರಿತಂತೆ ದಿವ್ಯ ರವರು ಏನು ಪ್ರತಿಕ್ರಿಯೆ ನೀಡಿದ್ದಾರೆ ಗೊತ್ತಾ.

ಹೌದು ಸ್ನೇಹಿತರೆ ಈ ಕುರಿತಂತೆ ದಿವ್ಯ ರವರು ಈ ತರಹದ ಟ್ರೋಲ್ ಗಳಿಗೆಲ್ಲ ನಾವು ತಲೆಕೆಡಿಸಿಕೊಳ್ಳುವುದಿಲ್ಲ ನಮ್ಮ ಕೆಲಸವನ್ನು ನಾವು ಮಾಡಿಕೊಳ್ಳುತ್ತಾ ಮುಂದೆ ಸಾಗಬೇಕು ಅಷ್ಟೇ ಎಂಬುದಾಗಿ ಹೇಳಿಕೊಂಡಿದ್ದಾರೆ. ಈ ಟ್ರೋಲ್ ಸಮಾಚಾರದಲ್ಲಿ ಪ್ರಶಾಂತ್ ಸಂಬರ್ಗಿ ಅವರ ಕೈವಾಡವಿದೆ ಎಂದು ಚಕ್ರವರ್ತಿ ಚಂದ್ರಚುಡ್ ರವರು ಆರೋಪ ಕೂಡ ಮಾಡಿದ್ದರು. ಇದು ಎಷ್ಟರ ಮಟ್ಟಿಗೆ ಸತ್ಯ ಎಷ್ಟರಮಟ್ಟಿಗೆ ಸುಳ್ಳು ಎಂಬುದು ಇದುವರೆಗೂ ಕೂಡ ಬಗೆಹರಿದಿಲ್ಲ.

Comments are closed.