Neer Dose Karnataka
Take a fresh look at your lifestyle.

ಅರವಿಂದ್ ಸೋಲಲು ಕೊನೆಕ್ಷಣದಲ್ಲಿ ಕಾರಣವಾದ ಟಾಪ್ ನಟ ಯಾರು ಗೊತ್ತಾ?? ಅಭಿಮಾನಿಗಳು ಹೀಗೆ ಹೇಳಿದ್ಯಾಕೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಂಜು ಪಾವಗಡ ಹಾಗೂ ಅರವಿಂದ್ ಅವರು ಬಹಳ ಕಡಿಮೆ ಅಂತರದಲ್ಲಿ ಕ್ರಮವಾಗಿ ಮೊದಲನೇ ಸ್ಥಾನ ಹಾಗೂ ಎರಡನೇ ಸ್ಥಾನವನ್ನು ಪಡೆದು ಕೊಂಡಿದ್ದಾರೆ. ಇನ್ನು ಕೆಲವೇ ಕೆಲವು ಪ್ರೇಕ್ಷಕರ ಮನ ಗೆದ್ದಿದ್ದರೂ ಕೂಡ ಅರವಿಂದ್ ರವರು ಕಿರೀಟವನ್ನು ಬಹಳ ಸುಲಭವಾಗಿ ಮುಡಿಗೇರಿಸಿಕೊಳ್ಳ ಬಹುದಾಗಿತ್ತು, ಆದರೆ ಮಂಜು ಪಾವಗಡ ರವರು ಈ ಬಾರಿಯ ಬಿಗ್ ಬಾಸ್ ಫಿನಾಲೆಯಲ್ಲಿ ಗೆಲ್ಲುವ ಮೂಲಕ ವಿನ್ನರ್ ಆದರು.

ಆದರೆ ಈ ಸಮಯದಲ್ಲಿ ಅರವಿಂದ್ ಅವರ ಸೋಲಿಗೆ ಕಾರಣಗಳನ್ನು ಹುಡುಕುವ ಕೆಲಸ ಮಾತ್ರ ಜೋರಾಗಿ ನಡೆಯುತ್ತಿದೆ, ಹಲವಾರು ಜನ ವಿವಿಧ ಕಾರಣಗಳನ್ನು ನೀಡುತ್ತಿದ್ದು ಒಬ್ಬೊಬ್ಬರದ್ದು ಒಂದೊಂದು ಅಭಿಪ್ರಾಯವಾಗಿದೆ, ಕೆಲವರು ಅರವಿಂದ್ ರವರ ಫೋಟೋ ಬಿಡುಗಡೆಯಾಗಿದ್ದು ಕಾರಣ ಎಂದರೆ ಮತ್ತೊಬ್ಬರು ದಿವ್ಯ ಉರುಡುಗ ರವರ ಜೊತೆ ಹೆಚ್ಚು ಸಮಯ ಕಳೆದ ಕಾರಣ ಸೋತಿರಬಹುದು ಎನ್ನುತ್ತಿದ್ದಾರೆ ಇನ್ನೂ ಕೆಲವರು ಸುದೀಪ್ ರ ಬರಬೇಕು ಎಂದು ಅರವಿಂದ್ ರವರನ್ನು ಸೋಲಿಸಿದ್ದಾರೆ ಎಂದು ಕೂಡ ಹೇಳುತ್ತಿದ್ದಾರೆ ಅದೇ ಸಮಯದಲ್ಲಿ ಇದೀಗ ಹೊಸ ಕಾರಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ.

ಹೌದು ಸ್ನೇಹಿತರೇ ಕಳೆದ ಫಿನಾಲಿ ಕಾರ್ಯಕ್ರಮ ನಡೆಯುವ ಮುನ್ನ ಅರವಿಂದ್ ರವರ ಕೆಲವು ವೈಯಕ್ತಿಕ ಫೋಟೋಗಳು ಬಿಡುಗಡೆ ಯಾಗಿದ್ದವು ಅದರಲ್ಲಿ ಅರವಿಂದ್ ರವರು ದರ್ಶನ್ ಅವರ ಜೊತೆಗಿದ್ದ ಕೆಲವೊಂದು ಫೋಟೋಗಳು ಬಿಡುಗಡೆಯಾಗಿದ್ದವು, ಅದೇ ಕಾರಣಕ್ಕಾಗಿ ಕೆಲವು ಸುದೀಪ್ ಅಭಿಮಾನಿಗಳು ಮಂಜು ಪಾವಗಡ ರವರನ್ನು ಬೆಂಬಲಿಸಿದ್ದಾರೆ ಹಾಗೂ ಈ ಸಮಯದಲ್ಲಿ ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ಗಳು ಕಂಡುಬಂದಿದ್ದು ಅರವಿಂದ್ ರವರು ದರ್ಶನ್ ರವರ ಆಪ್ತ ಎಂಬಂತೆ ಪೋಸ್ಟರ್ಗಳನ್ನು ಸೃಷ್ಟಿಸಲಾಗಿದೆ. ಆದರೆ ಅರವಿಂದ್ ಅವರು ದರ್ಶನ್ ಜೊತೆ ತೆಗೆಸಿಕೊಂಡಿರುವ ಫೋಟೋ ಕೇವಲ ಒಂದು ಚಿತ್ರೀಕರಣದ ಸಮಯದಲ್ಲಿ ಆಗಿತ್ತು ಅವರ ನಡುವೆ ಯಾವುದೇ ವಯಕ್ತಿಕ ವ್ಯವಹಾರಗಳು ಇಲ್ಲ ಎಂಬುದು ತಿಳಿದುಬಂದಿದೆ. ಆದರೂ ಕೂಡ ದರ್ಶನ್ ಅವರ ಆಪ್ತ ಎಂಬ ಕಾರಣಕ್ಕಾಗಿ ಹಲವಾರು ಜನ ಅರವಿಂದ್ ರವರ ಬದಲಾಗಿ ಮಂಜು ಪಾವಗಡ ರವರಿಗೆ ಬೆಂಬಲ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Comments are closed.