Neer Dose Karnataka
Take a fresh look at your lifestyle.

ಇದ್ದಕ್ಕಿದ್ದಂತೆ ಲೈವ್ ಗೆ ಬಂದ ಅರವಿಂದ್, ಆದರೆ ದಿವ್ಯಾ ಬಗ್ಗೆ ಆ ವಿಚಾರ ಬೇಡ ಎಂದ ಅರವಿಂದ್, ಪ್ರೇಮ ಪಕ್ಷಿಗಳ ಮದುವೆ ಕತ್ತೆ ಏನಾಯ್ತು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ರವರು ಶಿವಣ್ಣನ ಮನೆಗೆ ಹೋಗಿ ಬಂದರೂ ನಂತರ ತಮ್ಮ ಸ್ನೇಹಿತರೊಂದಿಗೆ ದೇವಸ್ಥಾನಗಳ ಪರ್ಯಟನೆ ಕೂಡ ಮಾಡಿದರು. ನಂತರ ಸಾಲು ಸಾಲು ಸಂದರ್ಶನಗಳನ್ನು ನೀಡಿದರು. ಇತ್ತ ಉಳಿದೆಲ್ಲ ಅಭ್ಯರ್ಥಿಗಳು ಕೂಡ ಟಿವಿ ಮಾಧ್ಯಮಗಳಿಗೆ ಸಂದರ್ಶನ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ.

ಆದರೆ ಇತ್ತ ಅರವಿಂದ್ ರವರು ಎರಡನೇ ಸ್ಥಾನವನ್ನು ಗೆದ್ದರೂ ಕೂಡ ಯಾವುದೇ ಸುದ್ದಿ ಮಾಧ್ಯಮಗಳಲ್ಲಿ ಸಂದರ್ಶನಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಪ್ರಬಲ ಅಭ್ಯರ್ಥಿಯಾಗಿದ್ದಂತಹ ಅರವಿಂದ್ ರವರು ಗೆಲ್ಲಲು ಫೇವರಿಟ್ ಆಗಿದ್ದರು. ಇನ್ನು ಇವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಖ್ಯಾತಿಯಾಗಿದ್ದು ದಿವ್ಯ ರವರ ರೊಂದಿಗಿನ ಪ್ರೇಮ್ ಪುರಾಣಕ್ಕೆ. ಇವರಿಬ್ಬರ ಪ್ರೇಮ ಕಹಾನಿ ಬಿಗ್ ಬಾಸ್ ನಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಇನ್ನು ಬಿಗ್ ಬಾಸ್ ಗೆದ್ದ ನಂತರ 11 ಲಕ್ಷ ಬಹುಮಾನ ಹಾಗೂ ದೊಡ್ಡಮೊತ್ತದ ಸಂಭಾವನೆ ಕೂಡ ಪಡೆದುಕೊಂಡಿದ್ದರು. ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ವಾರಗಳ ಕಾಲ ಕಾಣೆಯಾಗಿದ್ದಾರೆ ಅವರು ಕೊನೆಗೂ ಕೂಡ ಪತ್ತೆಯಾಗಿದ್ದಾರೆ.

ಹೌದು ಸ್ನೇಹಿತರೆ ಅರವಿಂದ ಕೆಪಿ ರವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಸೈಲೆಂಟಾಗಿದ್ದ ಕಾರಣ ಅವರ ಅಭಿಮಾನಿಗಳು ಹಾಗೂ ಬಿಗ್ಬಾಸ್ ಪ್ರೇಕ್ಷಕರು ಅವರು ಎಲ್ಲಿದ್ದಾರೆ ಎಂಬುದಾಗಿ ಕಾತರರಾಗಿದ್ದರು. ಈಗ ನೆನ್ನೆಯಷ್ಟೇ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಬರುವುದರ ಮೂಲಕ ಪ್ರೇಕ್ಷಕರ ಕುತೂಹಲಕ್ಕೆ ಪ್ರತಿಕ್ರಿಯಿಸಿದ್ದಾರೆ‌. ಇನ್ನು ನೆನ್ನೆ ಮಾತನಾಡಬೇಕಾದರೆ ಇಂಗ್ಲಿಷ್ನಲ್ಲಿ ಮಾತನಾಡಿದ್ದಕ್ಕಾಗಿ ಕನ್ನಡ ಪ್ರೇಕ್ಷಕರು ಕನ್ನಡದಲ್ಲಿ ಮಾತನಾಡಿ ಎಂದು ಹೇಳುತ್ತಿದ್ದರಿಂದ ಅವರು ಇದು ಮೋಟಾರ್ ಬೈಕ್ ರೇಸಿನ ಪೇಜ್ ಹಾಗಾಗಿ ಎಲ್ಲಾ ಭಾಷೆಯ ಪ್ರೇಕ್ಷಕರು ಇಲ್ಲಿರುವುದರಿಂದ ಅಕ್ಕ ಇಂಗ್ಲಿಷ್ನಲ್ಲಿ ಮಾತನಾಡಿದೆ ನನ್ನನ್ನು ಕ್ಷಮಿಸಿ ಎಂಬುದಾಗಿ ಕೂಡ ಹೇಳಿಕೊಂಡಿದ್ದರು. ಈ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಅವರ ಅಭಿಮಾನಿಗಳು ದಿವ್ಯ ಅವರೊಂದಿಗಿನ ಮದುವೆಯ ಕುರಿತಂತೆ ಸಾಕಷ್ಟು ಬಾರಿ ಕೇಳಿದರೂ ಯಾವುದಕ್ಕೂ ಸಮಂಜಸವಾಗಿ ಉತ್ತರ ನೀಡಿಲ್ಲ ಮುಂದಿನ ದಿನಗಳಲ್ಲಿ ಇದಕ್ಕೆ ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬುದಾಗಿ ನೋಡಬೇಕಾಗಿದೆ.

Comments are closed.