Neer Dose Karnataka
Take a fresh look at your lifestyle.

ಅನುಶ್ರೀ ಹಾಗೂ ಚಿಕ್ಕಣ್ಣ ಲವ್ ಸ್ಟೋರಿಯ ಕುರಿತು ಕೊನೆಗೂ ಮೌನ ಮುರಿದ ನಿರೂಪಕಿ ಅನುಶ್ರೀ, ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಗಾಂಧಿನಗರದಲ್ಲಿ ಹೀಗೊಂದು ದೊಡ್ದ ಸುದ್ದಿ ಹರಿದಾಡುತ್ತಿದೆ ಅದುವೆ ನಿರೂಪಕಿ ಹಾಗೂ ನಟಿ ಅನುಶ್ರೀ ಹಾಗೂ ಸಿನಿಮಾದ ಬಹು ಬೇಡಿಕೆಯ ಹಾಸ್ಯ ನಟ ಚಿಕ್ಕಣ್ಣ ಅವರ ಲವ್ ಸ್ಟೋರಿ ಬಗ್ಗೆ. ಏನುದು ಸುದ್ದಿ ಮುಂದೆ ಓದಿ. ಜೀ ಕನ್ನಡದಲ್ಲಿ ಪ್ರಸಾರವಾಗುವ ಸರೆಗಮಪ ಕಾರ್ಯಕ್ರಮ ಎಂದರೆ ಮೊದಲು ನೆನಪಿಗೆ ಬರುವುದು ಅನುಶ್ರೀ ಅವರ ನಿರೂಪಣೆ. ಅದರಲ್ಲೂ ಅರ್ಜುನ್ ಜನ್ಯಾ ಹಾಗೂ ಅನುಶ್ರೀಯ ತಮಾಷೆ ಗಟನೆಗಳೇ ಜನರಿಗೆ ಅಚ್ಚುಮೆಚ್ಚು.

ಇನ್ನು ಕೆಲವು ಚಿತ್ರಗಳಲ್ಲಿಯೂ ನಟಿಸಿರುವ ಅನುಶ್ರೀ ಸದ್ಯ ನಿರೂಪಣೆಯಲ್ಲಿಯೇ ಬ್ಯುಸಿಯಾಗಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಇರುವ ಈಕೆ ಸೆಲಿಬ್ರೆಟಿಗಳ ಸಂದರ್ಶನ ಮಾಡುವ ಶೋ ಮಾಡಿ ಫೇಮಸ್ ಕೂಡ ಆಗಿದ್ದಾರೆ. ಇನ್ನು ಸಿನಿಮಾಗಳ ನಟನೆಯಲ್ಲಿ ಬ್ಯುಸಿಯಿರುವ ಚಿಕ್ಕಣ್ಣ ಹಾಗೂ ನಿರೂಪಕಿ ಅನುಶ್ರೀಯವರ ಲವ್ ಸ್ಟೋರಿ ಬಗ್ಗೆ ಮಾತುಗಳು ಕೇಳಿ ಬರ್ತಾ ಇದೆ. ಚಿಕ್ಕಣ್ಣ ಅನುಶ್ರೀಯವರಿಗೆ ಪ್ರಪೋಸ್ ಮಾಡಿದ್ದಾರೆ ಎಂಬ ಸುದ್ದಿ. ಆದರ ಇದರ ಹಿನ್ನೆಲೆ ಬೇರೆಯೇ ಇದೆ. ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಚಿಕ್ಕಣ್ಣ ಅನುಶ್ರೀಯವರಿಗೆ ಪ್ರಪೋಸ್ ಮಾಡಿದ್ರು.

ಇದನ್ನ ಸಾಕಷ್ಟು ಜನ ನಿಜ ಅಂತ ನಂಬಿ ವಿಶ್ ಕೂಡ ಮಾಡಿದ್ರು. ಆದರೆ ನಡೆದಿದ್ದೇ ಬೇರೆ. ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಕಿಚ್ಚ ಸುದೀಪ್ ಚಿಕ್ಕಣ್ಣ ಅವರಿಗೆ ಹುಡುಗಿಯರಿಗೆ ಪ್ರಪೋಸ್ ಮಾಡೋದು ಹೇಗೆ ತೋರಿಸಿ ಎಂದು ಸವಾಲು ಹಾಕುತ್ತಾರೆ. ಇದಕ್ಕೆ ಚಿಕ್ಕಣ್ಣ ವೇದಿಕೆಯ ಮೇಲೆ ನಿರೂಪಣೆ ಮಾಡುತ್ತಿದ್ದ ಅನುಶ್ರೀಯವರಿಗೆ ಪ್ರಪೋಸ್ ಮಾಡುತ್ತಾರೆ. ಇದು ತಮಾಷೆಗೆ ಅಷ್ಟೆ. ಇನ್ನು ಈ ವಿಷಯಕ್ಕೆ ಪ್ರತಿಕ್ರಿಯಿಸಿದ ನಿರೂಪಕಿ ಅನುಶ್ರೀ, ಅದು ಕೇವಲ ತಮಾಷೆಯಷ್ಟೇ. ಚಿಕ್ಕಣ್ಣ ಅವರ ಫೋನ್ ನಂ ಕೂಡ ನನ್ನ ಹತ್ರ ಇಲ್ಲ ಎಂದು ನಕ್ಕ ಅನುಶ್ರೀ ಸರೆಗಮಪದಲ್ಲಿ ಅರ್ಜುನ್ ಜನ್ಯಾ ಜೊತೆ ತಮಾಷೆ ಮಾಡಿದ ಹಾಗೆ ಇದೂ ಕೂಡ ಎಂದು ಸ್ಪಷ್ಟನೆ ನೀಡಿದ್ದಾರೆ.

Comments are closed.