Neer Dose Karnataka
Take a fresh look at your lifestyle.

ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರನ್ನು ಮನೆಗೆ ಕರೆಸಿಕೊಂಡು ಅಮೂಲ್ಯ ಜಗದೀಶ್ ಕೊಟ್ಟಂತಹ ಗಿಫ್ಟ್ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಅವರಿಗೆ ಸಾಕಷ್ಟು ಜನರಿಂದ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ. ಕಾರಣ ಮಂಜು ಪಾವಗಡ ರವರು ಬಡತನದಿಂದ ಬಂದ ಯುವಕರಿಗೆ ಖಂಡಿತವಾಗಿಯೂ ಸ್ಫೂರ್ತಿಯಾಗಿದ್ದಾರೆ. ಪೆಟ್ರೋಲ್ ಬಂಕ್ ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ ಬಿಗ್ ಬಾಸ್ ನಲ್ಲಿ ಅರ್ಧಕೋಟಿ ಗೆಲ್ಲುವರೆಗೆ ಕೂಡ ಮಂಜು ಪಾವಗಡ ರವರು ಪಟ್ಟಂತಹ ಕಷ್ಟ ಅವರಿಗೆ ಗೊತ್ತು. ಮಜಾಭಾರತ ಕಾರ್ಯಕ್ರಮದ ಮೂಲಕ ತಮ್ಮ ಪ್ರತಿಭೆಯನ್ನು ಕರ್ನಾಟಕದ ಉದ್ದಗಲಕ್ಕೂ ಪರಿಚಯಿಸಿದ ಅಂತಹ ಅತ್ಯುತ್ತಮ ಕಲಾವಿದ ಮಂಜು ಪಾವಗಡ.

ಈಗ ಬಿಗ್ ಬಾಸ್ ನಲ್ಲಿ 120 ದಿನ ಇರುವ ಮೂಲಕ ತನ್ನ ವ್ಯಕ್ತಿತ್ವವನ್ನು ಕರ್ನಾಟಕದ ಮನೆಮನೆಗೂ ಪರಿಚಯಿಸಿದಂತಹ ಮೇರುವ್ಯಕ್ತಿತ್ವ ಎಂದು ಹೇಳಬಹುದು. ಇನ್ನು ಇವರಿಗೆ ಈಗಾಗಲೇ ಕರುನಾಡ ಚಕ್ರವರ್ತಿ ಶಿವಣ್ಣರವರ ಕೂಡ ಮನೆಗೆ ಕರೆಸಿ ಸತ್ಕಾರ ಮಾಡಿ ಕಳಿಸಿಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಕೂಡ ತಮ್ಮೊಟ್ಟಿಗೆ ಮನೆಯಲ್ಲಿ ಕುಳಿತು ಊಟ ಮಾಡಿಸಿ ತಮ್ಮ ತಂದೆ ತಾಯಿಯರಿಂದ ಆಶೀರ್ವಾದವನ್ನು ಕೂಡ ಕೊಡಿಸಿದ್ದಾರೆ. ಈಗ ಕನ್ನಡ ಚಿತ್ರರಂಗದ ಮತ್ತೊಬ್ಬ ಸೆಲೆಬ್ರಿಟಿ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ಅವರನ್ನು ಮನೆಗೆ ಕರೆಸಿಕೊಂಡು ಸ್ಪೆಷಲ್ ಗಿಫ್ಟ್ ಒಂದನ್ನು ನೀಡಿದ್ದಾರೆ.

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ತಮ್ಮ ರಾಜರಾಜೇಶ್ವರಿನಗರದ ಮನೆಗೆ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ಅವರನ್ನು ಕರೆಸಿಕೊಂಡು ಅವರಿಗೆ ಔತಣಕೂಟವನ್ನು ಏರ್ಪಡಿಸಿದ್ದರು ಚಿತ್ರರಂಗದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ದೊರೆಯಲಿ ಎಂದು ಹರಿಸಿ ಕಳಿಸಿದ್ದಾರೆ. ಇದಕ್ಕಿಂತ ದೊಡ್ಡ ಗಿಫ್ಟ್ ಬೇಕಾ ಸ್ನೇಹಿತರೆ. ಒಟ್ಟಾರೆಯಾಗಿ ಈ ಮಂಜು ಪಾವಗಡ ರವರು ಈಗ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಓಡಾಡುತ್ತಿರುವ ಹೆಸರು ಎಂದು ಹೇಳಬಹುದು.

Comments are closed.