Neer Dose Karnataka
Take a fresh look at your lifestyle.

ಕೊನೆಯಲ್ಲಿ ಮಾತನಾಡಿ ದಿವ್ಯ ಹಾಗೂ ಅರವಿಂದ ಮದುವೆಗೆ ಮಹಾ ತಿರುವು ನೀಡಿದ ದಿವ್ಯ ತಂದೆ, ಏನು ಹೇಳಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರೇಮ ಪಕ್ಷಿಗಳು ಎಂದ ತಕ್ಷಣ ನಿಮಗೆಲ್ಲರಿಗೂ ನೆನಪಾಗುವುದು ಅರವಿಂದ್ ಹಾಗೂ ದಿವ್ಯ, ಈ ಜೋಡಿಯನ್ನು ನೋಡಿದ ಅದೆಷ್ಟೋ ಲಕ್ಷಾಂತರ ಜನ ಮನೆಯಲ್ಲಿರುವಾಗಲೇ ಅಭಿಮಾನಿಗಳಾಗಿ ಇವರಿಬ್ಬರನ್ನು ಫೈನಲ್ ನವರಿಗೆ ಕರೆ ತಂದಿದ್ದರು. ಮಂಜು ಪಾವಗಡ ರವರು ಮೊದಲನೇ ಸ್ಥಾನವನ್ನು ಪಡೆದುಕೊಂಡರೆ ಮುಂದಿನ ಎರಡು ಸ್ಥಾನಗಳನ್ನು ಅರವಿಂದ್ ಹಾಗೂ ದಿವ್ಯ ರವರು ಪಡೆದು ಕೊಂಡಿದ್ದರು ಎಂದರೇ ಲೆಕ್ಕಹಾಕಿ ಅರವಿಂದ್ ಹಾಗೂ ದಿವ್ಯ ರವರ ಜೋಡಿಯನ್ನು ಎಷ್ಟು ಜನ ಮೆಚ್ಚಿಕೊಂಡಿದ್ದಾರೆ ಎಂದು

ಹೀಗೆ ಮನೆಯಲ್ಲಿ ಇರುವ ಪ್ರತಿ ಕ್ಷಣವೂ ಕೂಡ ಒಟ್ಟಾಗಿದ್ದ ಅರವಿಂದ್ ಹಾಗೂ ದಿವ್ಯ ರವರು ಮನೆಯಿಂದ ಹೊರಬಂದ ಮೇಲೂ ಕೂಡ ಆಸ್ತಿ ಕ್ಲೋಸ್ ಆಗಿ ಇದ್ದಾರೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಯಾಕೆಂದರೆ ಬಹುತೇಕ ಸಂದರ್ಶನಗಳಲ್ಲಿ ಮಾತನಾಡಿರುವ ಇಬ್ಬರೂ ಪರಸ್ಪರ ಹಲವಾರು ಮಾಹಿತಿಗಳನ್ನು ಹಂಚಿ ಕೊಂಡಿದ್ದಾರೆ, ಇನ್ನು ಇವರ ಮದುವೆಯ ವಿಚಾರವಂತೂ ಬಿಗ್ ಬಾಸ್ ಮುಗಿದ ದಿನದಿಂದಲೂ ಕೂಡ ಚರ್ಚೆಯ ವಿಷಯವಾಗಿ ಬಿಟ್ಟಿದೆ.

ಇನ್ನು ಈ ಕುರಿತು ದಿವ್ಯ ಉರುಡುಗ ರವರ ಪೋಷಕರು ಏನು ಹೇಳುತ್ತಾರೆ ಎಂಬುದನ್ನು ನಾವು ನೋಡುವುದಾದರೆ ಇದೀಗ ಮಾತನಾಡಿರುವ ದಿವ್ಯ ಉರುಡುಗ ರವರ ತಂದೆ, ಅರವಿಂದ್ ರವರ ಜೊತೆ ಮದುವೆಯ ವಿಚಾರದಲ್ಲಿ ನಮ್ಮ ಅಭಿಪ್ರಾಯ ಮುಖ್ಯವಲ್ಲ, ನನ್ನ ಮಗಳು ಯಾರನ್ನು ಇಷ್ಟಪಡುತ್ತಾಳೋ ಅವರಿಗೆ ಕೊಟ್ಟು ಮದುವೆ ಮಾಡಿ ಕೊಡುತ್ತೇವೆ ಎಂದು ಮದುವೆಗೆ ಯಾವುದೇ ತಕರಾರಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ರೋಗಿ ಬಯಸಿದ್ದು ಕೂಡ ಹಾಲು ಅನ್ನ, ವೈದ್ಯರು ಹೇಳಿದ್ದು ಕೂಡ ಹಾಲು-ಅನ್ನ ಎಂಬ ಗಾದೆ ಮಾತು ಇಲ್ಲಿ ಕೂಡ ಸತ್ಯವಾಗಿದೆ. ಈ ಮೂಲಕ ದಿವ್ಯ ಹಾಗೂ ಅರವಿಂದ್ ರವರ ಮದುವೆಯ ವಿಚಾರ ಬಹುತೇಕ ಖಚಿತವಾಗಿದ್ದು ಮುಂದೆ ಅರವಿಂದ್ ಹಾಗೂ ದಿವ್ಯ ಯಾವ ರೀತಿ ಹೆಜ್ಜೆ ಇಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

Comments are closed.