Neer Dose Karnataka
Take a fresh look at your lifestyle.

ನೂರಾರು ಜನ ವಿಷ್ಣು ಸರ್ ಕಟೌಟ್ ಬೀಳಿಸಲು ಬಂದಾಗ ಬಾಯಲ್ಲಿ ಬ್ಲೇಡ್ ಇಡಿದು, ತಡೆದ ಬಾಲ ಇಂದು ಕನ್ನಡದ ಸ್ಟಾರ್ ನಟ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲಿ ಬಹುಭಾಷಾ ಚಿತ್ರರಂಗಗಳ ಬಹುಬೇಡಿಕೆ ನಾಯಕನಾಗಿ ಕಾಣಿಸಿಕೊಂಡವರು ಎಂದರೆ ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆ ಎಂದೇ ಖ್ಯಾತರಾಗಿರುವ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ರವರು. ಹೌದು ಸ್ನೇಹಿತರೆ ಸಂಪತ್ಕುಮಾರ್ ಆಗಿದ್ದವರು ಅಭಿಮಾನಿಗಳ ಪ್ರೀತಿಯ ತೀವ್ರತೆಗೆ ಕನ್ನಡ ಚಿತ್ರರಂಗದ ಅನಿಶ್ಚಿತ ವಿಷ್ಣುವರ್ಧನ್ ಆಗಿ ಬದಲಾದರು.

ಇನ್ನು ಭಾರತೀಯ ಚಿತ್ರರಂಗದಲ್ಲಿ 200ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ದಂತಹ ಅನುಭವವನ್ನು ಹೊಂದಿರುವ ವಿಷ್ಣುವರ್ಧನ್ ರವರು ಕನ್ನಡ ಚಿತ್ರರಂಗದ ಹಲವಾರು ನಟರಿಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಇನ್ನು ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ದರ್ಶನ್ ಕಿಚ್ಚ ಸುದೀಪ್ ಯಶ್ ಹೀಗೆ ಹಲವಾರು ನಟರ ನೆಚ್ಚಿನ ನಟ ಎಂದರೆ ಅದು ವಿಷ್ಣುವರ್ಧನ್ ಸರ್. ಕೇವಲ ಚಿತ್ರರಂಗದಲ್ಲಿ ಪರದೆಯ ಮುಂದೆ ಮಾತ್ರವಲ್ಲದೆ ಹಿಂದೆ ಕೂಡ ದೇವತಾ ಮನುಷ್ಯನಂತೆ ಇದ್ದಂತಹ ವ್ಯಕ್ತಿತ್ವ ನಮ್ಮ ವಿಷ್ಣುವರ್ಧನ್ ರವರದ್ದು. ಇನ್ನು ಈ ಹಿಂದೆ ವಿಷ್ಣುವರ್ಧನ್ ರವರ ಕಟೌಟ್ ಅನ್ನು ಕೆಡವಲು ಬಂದಂತಹ ವಿರೋಧಿಗಳನ್ನು ತಡೆಯಲು ಬಂದಂತಹ ಹುಡುಗ ಇಂದು ಕನ್ನಡ ಚಿತ್ರರಂಗದ ಟಾಪ್ ನಟನಾಗಿ ಕಾಣಿಸಿಕೊಂಡಿದ್ದಾರೆ ಯಾರು ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ಅವರ ಕುರಿತಂತೆ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಹಾಗೂ ನೆನಪಿರಲಿ ಖ್ಯಾತಿಯ ಪ್ರೇಮ್ ಅವರು ಏಳನೇ ತರಗತಿಯಲ್ಲಿ ಇರಬೇಕಾದರೆ ಅವರ ಸಂಪಂಗಿರಾಮನಗರದ ಪಲ್ಲವಿ ಥಿಯೇಟರ್ ನಲ್ಲಿ ಕಲ್ಲುವೀಣೆ ನುಡಿಯಿತು ಎಂಬ ಚಿತ್ರಕ್ಕಾಗಿ ಚಿತ್ರಮಂದಿರದ ಎದುರು 100 ಅಡಿ ಕಟೌಟ್ ಅನ್ನು ನಿಲ್ಲಿಸಲಾಗಿತ್ತು. ಅದನ್ನು ಹಾಳುಗೆಡವಲು ಬಂದಂತಹ ವಿರೋಧಿಗಳಿಗೆ ಬಾಯಲ್ಲಿ ಬ್ಲೇಡ್ ಹಿಡಿದು ತಡೆದಿದ್ದವರು ಲವ್ಲಿ ಸ್ಟಾರ್ ಪ್ರೇಮ್ ರವರು. ವಿಷ್ಣುವರ್ಧನ್ ರವರಿಗೆ ಇದ್ದಂತಹ ಅಭಿಮಾನಿ ಬಳಗವೇ ಅಂತದ್ದು. ಅವರಿಗಾಗಿ ಪ್ರಾಣ ಕೂಡ ನೀಡಲು ಅವರ ಅಭಿಮಾನಿಗಳು ಹಿಂಜರಿಯುವುದಿಲ್ಲ ಎಂಬುದು ಇದರ ಮೂಲಕ ತಿಳಿಯುತ್ತದೆ.

Comments are closed.