Neer Dose Karnataka
Take a fresh look at your lifestyle.

ಅಂದು ಶಿವಣ್ಣ ಇಂದು ವಿಜಯ್ ಸೇತುಪತಿ, ಕನ್ನಡ ಮೂಲದ ಖ್ಯಾತ ನಟಿಯ ಜೊತೆಗೆ ನಟಿಸಲು ಒಪ್ಪದಿದ್ದಕ್ಕೆ ಕಾರಣ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ವಿಜಯ್ ಸೇತುಪತಿ ಅವರ ನಟನೆಯ ಜನಪ್ರಿಯತೆ ಕುರಿತಂತೆ ನಿಮಗೆಲ್ಲಾ ಗೊತ್ತೇ ಇದೆ. ಹೌದು ಇವರು ನಟನೆಯನ್ನು ತಮಿಳು ಚಿತ್ರರಂಗದಿಂದ ಪ್ರಾರಂಭಿಸಿದ್ದರು ಕೂಡ ಇವರ ನಟನೆ ಈಗ ದೇಶ-ವಿದೇಶದಾದ್ಯಂತ ಕೂಡಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಹೌದು ಸ್ನೇಹಿತರೆ ಎಂತಹದೇ ಪಾತ್ರವನ್ನು ನೀಡಲಿ ಅದಕ್ಕೆ 100% ನ್ಯಾಯವನ್ನು ಒದಗಿಸಬಲ್ಲ ಅಂತಹ ನಟ ವಿಜಯ್ ಸೇತುಪತಿ. ನಮ್ಮ ಭಾರತೀಯ ಚಿತ್ರರಂಗದಲ್ಲಿ ಉನ್ನತಮಟ್ಟದ ನಟನೆಯನ್ನು ತೋರಿಸಬಲ್ಲಂತಹ ನಟರಲ್ಲಿ ವಿಜಯ್ ಸೇತುಪತಿ ಅವರು ಅಗ್ರಗಣ್ಯ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಅವರನ್ನು ಭಾಷೆಯ ಎಲ್ಲೆಯನ್ನು ಮೀರಿ ಪ್ರೇಕ್ಷಕರು ಪ್ರೀತಿಸುತ್ತಾರೆ.

ಇದಕ್ಕಾಗಿಯೇ ತಮಿಳು ಚಿತ್ರರಂಗದಲ್ಲಿ ಅವರನ್ನು ಮಕ್ಕಳ್ ಸೆಲ್ವನ್ ಎಂಬುದಾಗಿ ಕರೆಯುತ್ತಾರೆ. ಇತ್ತೀಚಿಗೆ ಬಾಲಿವುಡ್ ನಲ್ಲಿ ಕೂಡ ಇವರು ಕಾಲಿಟ್ಟಿದ್ದು ಅಮೀರ್ ಖಾನ್ ರವರ ಲಾಲ್ ಸಿಂಗ್ ಛಡ್ಡ ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಇವರ ನಟನೆಗೆ ಹಲವಾರು ದೊಡ್ಡ ದೊಡ್ಡ ಸೂಪರ್ ಸ್ಟಾರ್ ಗಳು ಕೂಡ ಫಿದಾ ಆಗಿರುವುದು ತಮ್ಮ ಚಿತ್ರಗಳಲ್ಲಿ ಇವರು ನಟಿಸಲೇ ಬೇಕೆಂಬ ಬೇಡಿಕೆ ಯನ್ನು ಕೂಡ ಇಡುತ್ತಿದ್ದಾರೆ. ಆದರೆ ಇವರು ಇತ್ತೀಚಿಗಷ್ಟೇ ಶಿವಣ್ಣರವರ ದಾರಿಯನ್ನು ಅನುಸರಿಸುತ್ತಿದ್ದು ಕನ್ನಡದ ಖ್ಯಾತ ನಟಿಯರೊಂದಿಗೆ ಹೀರೋ ಪಾತ್ರದಲ್ಲಿ ನಟಿಸಲು ತಿರಸ್ಕರಿಸಿದ್ದಾರೆ.

ಹೌದು ಸ್ನೇಹಿತರೆ ಹಿಂದೆ ಕರುನಾಡ ಚಕ್ರವರ್ತಿ ಶಿವಣ್ಣನವರು ರಾಧಿಕಾ ರವರೊಂದಿಗೆ ಅಣ್ಣನ ಪಾತ್ರದಲ್ಲಿ ನಟಿಸಿದ ಮೇಲೆ ಅವರೊಂದಿಗೆ ಹೀರೋ ಪಾತ್ರದಲ್ಲಿ ನಟಿಸಲು ತಿರಸ್ಕರಿಸಿದ್ದರು. ಇದೇ ತರ ಈಗ ವಿಜಯ್ ಸೇತುಪತಿ ಅವರು ಕನ್ನಡ ಮೂಲದ ತೆಲುಗು ಚಿತ್ರರಂಗದ ಖ್ಯಾತ ನಟಿ ಕೃತಿ ಶೆಟ್ಟಿಯವರೊಂದಿಗೆ ಅಪ್ಪನ ಪಾತ್ರದಲ್ಲಿ ನಟನೆ ಮಾಡಿದ ನಂತರ ಈಗ ಅವರೊಂದಿಗೆ ಹೀರೋ ಪಾತ್ರವನ್ನು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಹಾಗೂ ಈಗಾಗಲೇ ಬಂದಿರುವ ಅವರೊಟ್ಟಿಗೆ ನಡೆಸಬಲ್ಲಂತಹ ಹೊಸ ಚಿತ್ರದ ಆಫರನ್ನು ಕೂಡ ತಿರಸ್ಕರಿಸಿದ್ದಾರೆ. ಇದು ವಿಜಯ್ ಸೇತುಪತಿ ಅವರ ವ್ಯಕ್ತಿತ್ವವನ್ನು ನಮ್ಮೆಲ್ಲರಿಗೆ ತೋರಿಸುತ್ತದೆ.

Comments are closed.