Neer Dose Karnataka
Take a fresh look at your lifestyle.

ದರ್ಶನ್ ಗೆ ಬಿಗ್ ಶಾಕ್, ಕೊನೆ ಕ್ಷಣದಲ್ಲಿ ಕೈ ಕೊಟ್ಟ ಉಮಾಪತಿ, ಡಿ ಬಾಸ್ ಮುಂದಿನ ಹಾದಿ ಏನಿರಬಹುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ನಿರ್ಮಾಪಕರು ಕನ್ನಡ ಚಿತ್ರರಂಗದಲ್ಲಿ ಉತ್ತಮ ಚಿತ್ರಗಳನ್ನು ನೀಡಬೇಕೆಂಬ ಹಂಬಲದಿಂದ ಚಿತ್ರಗಳನ್ನು ಮಾಡುತ್ತಿದ್ದಾರೆ. ಅವರಲ್ಲಿ ಉಮಾಪತಿ ಶ್ರೀನಿವಾಸಗೌಡ ಕೂಡ ಒಬ್ಬರು. ಹೌದು ಗೆಳೆಯರೇ ಉಮಾಪತಿ ಶ್ರೀನಿವಾಸಗೌಡ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕನಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಸೂಪರ್ ಹಿಟ್ ಚಿತ್ರ ಹೆಬ್ಬುಲಿ ಮೂಲಕ ಪಾದರ್ಪಣೆ ಮಾಡುತ್ತಾರೆ.

ಮೊದಲ ಚಿತ್ರದಲ್ಲಿ ನಿರ್ಮಾಪಕನಾಗಿ ಯಶಸ್ಸನ್ನು ಸಾಧಿಸುತ್ತಾರೆ. ಇದಾದನಂತರ ಉಮಾಪತಿ ಶ್ರೀನಿವಾಸ ಗೌಡ ರವರು ಒಂದಲ್ಲ ಎರಡಲ್ಲ ಎಂಬ ಚಿತ್ರವನ್ನು ನಿರ್ಮಿಸಿ ರಾಷ್ಟ್ರಪ್ರಶಸ್ತಿಯನ್ನು ಕೂಡ ಗಳಿಸಿಕೊಳ್ಳುತ್ತಾರೆ. ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರವನ್ನು ಕೂಡ ನಿರ್ಮಿಸಿ ಯಶಸ್ವಿ ನಿರ್ಮಾಪಕನಾಗಿ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಳ್ಳುತ್ತಾರೆ. ಇಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಉಮಾಪತಿ ಶ್ರೀನಿವಾಸಗೌಡ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೊಂದಿಗೆ ಸಿಂಧೂರ ಲಕ್ಷ್ಮಣ ಎಂಬ ಚಿತ್ರವನ್ನು ನಿರ್ಮಿಸುತ್ತೇನೆ ಎಂಬುದಾಗಿ ಕೂಡ ಹೇಳಿಕೊಂಡಿದ್ದರು.

ಆದರೆ ಈಗ ಉಮಾಪತಿ ಶ್ರೀನಿವಾಸ್ ಗೌಡರವರು ಉಲ್ಟಾ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಶುರುವಾಗಿವೆ. ಹೌದು ಸ್ನೇಹಿತರೆ ಉಮಾಪತಿ ಶ್ರೀನಿವಾಸಗೌಡ ಅವರು ತಮ್ಮ ಮುಂದಿನ ಚಿತ್ರವನ್ನು ರಾಕಿಂಗ್ ಸ್ಟಾರ್ ಯಶ್ ರವರೊಂದಿಗೆ ಮಾಡುವ ಎಲ್ಲ ಸುದ್ದಿಗಳು ಈಗ ಸ್ಯಾಂಡಲ್ ವುಡ್ ನಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ದರ್ಶನ್ ರವರೊಂದಿಗೆ ಮಾಡಬೇಕೆಂದಿದ್ದ ಸಿನಿಮಾವನ್ನು ಕೈಬಿಟ್ಟರು ಎಂಬ ಮಾತುಗಳು ಕೂಡ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಈ ಕುರಿತಂತೆ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಹೊರಬರಬೇಕಾಗಿದೆ ಅಲ್ಲಿವರೆಗೂ ಕಾದುನೋಡೋಣ ಸ್ನೇಹಿತರೇ. ಒಂದು ವೇಳೆ ಈ ಸುದ್ದಿ ನಿಜವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.