Neer Dose Karnataka
Take a fresh look at your lifestyle.

51 ವರ್ಷದವರಾಗಿದ್ದಾಗ ಎರಡನೇ ಮದುವೆಯಾಗಿದ್ದರು ದ್ವಾರಕೀಶ್, ಅಂದು ಚಾನ್ಸ್ ಕೇಳಿ ಬಂದಿದ್ದ ಹುಡುಗಿಗೆ ಕೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಪ್ರಚಂಡಕುಳ್ಳ ಎಂದಾಗ ನಮಗೆ ನೆನಪಾಗುವುದು ನಮ್ಮ ದ್ವಾರಕೀಶರವರು. ಕನ್ನಡ ಚಿತ್ರರಂಗದಲ್ಲಿ ಅವರು ಮಾಡಿದಂತಹ ಸಾಧನೆ ಕಂಡಿತವಾಗಿಯೂ ಗಮನಾರ್ಹವಾದದ್ದು ಹಾಗೂ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಕನ್ನಡ ಚಿತ್ರರಂಗದ ಇತಿಹಾಸಗಳ ಪುಟದಲ್ಲಿ ಖಂಡಿತವಾಗಿ ದ್ವಾರಕೀಶರವರ ಜೀವನ ಓದಲೇಬೇಕಾದಂತಹ ಪುಟ ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ಕನ್ನಡ ಚಿತ್ರರಂಗದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ದ್ವಾರಕೀಶರವರು ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕಾಮಿಡಿ ಕಲಾವಿದನಾಗಿ ಕಾಣಿಸಿಕೊಳ್ಳುತ್ತಾರೆ. ನಂತರ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಪ್ರೋತ್ಸಾಹದಿಂದ ಮೇಯರ್ ಮುತ್ತಣ್ಣ ಚಿತ್ರದ ಮೂಲಕ ನಿರ್ಮಾಪಕನಾಗಿ ಕೂಡ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಕನ್ನಡ ಚಿತ್ರರಂಗದಲ್ಲಿ 50ಕ್ಕೂ ಅಧಿಕ ಚಿತ್ರಗಳನ್ನು ನಿರ್ಮಾಣ ಮಾಡುವ ಮೂಲಕ ಯಶಸ್ವಿ ನಿರ್ಮಾಪಕರಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ ಮಾತ್ರವಲ್ಲದೆ ಅವರ ನಿರ್ಮಾಣ ಸಂಸ್ಥೆ ಈಗಿನ ಚಿತ್ರರಂಗದಲ್ಲಿ ಅತ್ಯಂತ ಹಳೆಯದು ಎಂದರು ತಪ್ಪಾಗಲಾರದು. ಇನ್ನು ದ್ವಾರಕೀಶ್ ಅವರು ಕನ್ನಡ ಚಿತ್ರರಂಗದಲ್ಲಿ ನಟ ನಿರ್ಮಾಪಕ ನಿರ್ದೇಶಕ ಹಾಗೂ ವಿತರಕ ನಾಗಿ ಕೂಡ ಹೆಸರನ್ನು ಗಳಿಸಿ ದಂತಹ ವ್ಯಕ್ತಿತ್ವ.

ಇನ್ನು ದ್ವಾರಕೀಶರವರು ಚಿಕ್ಕವಯಸ್ಸಿನಲ್ಲೇ ಅಂಬುಜಾ ರವರನ್ನು ಮದುವೆಯಾಗಿ ಐದು ಜನ ಮಕ್ಕಳನ್ನು ಪಡೆದಿದ್ದರು. ನಂತರ ತಮ್ಮ ಬಳಿಗೆ 51 ನೇ ವಯಸ್ಸಿನಲ್ಲಿ ಕೆಲಸ ಕೇಳಿಕೊಂಡು ಬಂದಂತಹ ಶಾರದ ರವರನ್ನು ತನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿ ಅವರಿಂದ ಒಪ್ಪಿಗೆ ಪಡೆದು ಮದುವೆಯಾದವರು. ಇನ್ನು ಇವರಿಬ್ಬರ ನಡುವೆ ವಯಸ್ಸಿನ ಅಂತರವಿದ್ದರೂ ಕೂಡ ಅದು ಇವರಿಗೆ ಅಡ್ಡಿಯಾಗಲಿಲ್ಲ. ಇನ್ನು ಈ ಕುರಿತಂತೆ ಅಂಬುಜಾ ರವರು ಒಳಗೊಳಗೆ ಬೇಸರವನ್ನು ವ್ಯಕ್ತಪಡಿಸುತ್ತಿದ್ದರು ಕೂಡ ಅದನ್ನು ಹೊರಹಾಕಲಿಲ್ಲ. ಇನ್ನು ಇತ್ತೀಚಿಗಷ್ಟೇ ದ್ವಾರಕೇಶ್ ಅವರ ಮೊದಲ ಪತ್ನಿ ಅಂಬುಜಾ ರವರು 81ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಹೋಗಿರುವುದು ಸುದ್ದಿಮಾಧ್ಯಮಗಳನ್ನು ನೋಡಿರುತ್ತೀರಿ. ಇನ್ನು ದ್ವಾರ್ಕೀಶ್ ರವರ ಕುರಿತಂತೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.