Neer Dose Karnataka
Take a fresh look at your lifestyle.

ವಿಷ್ಣು ಸರ್ ಜೊತೆ ಶಿವಣ್ಣ ನಟಿಸಬೇಕಿದ್ದ ಸಿನಿಮಾ ಇನ್ನೇನು ಸೆಟ್ಟೇರಿತು ಎನ್ನುವಷ್ಟರಲ್ಲಿ ತಡೆದವರು ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಹಲವಾರು ಕಾಂಬಿನೇಷನ್ ಗಳು ನಡೆಯಬೇಕಿತ್ತು ಎಂದು ಕನ್ನಡ ವೀಕ್ಷಕರಿಗೆ ಮೊದಲಿನಿಂದಲೂ ಆಸೆ ಇತ್ತು. ಅದರಲ್ಲಿ ವಿಷ್ಣುವರ್ಧನ್ ಹಾಗೂ ಶಿವಣ್ಣ ಕಾಂಬಿನೇಷನ್ ಕೂಡ ಒಂದು ಹೌದು. ಹೌದು ಸ್ನೇಹಿತರೆ ಶಿವಣ್ಣ ಹಾಗೂ ವಿಷ್ಣುವರ್ಧನ್ ರವರು ಒಂದೇ ಚಿತ್ರದಲ್ಲಿ ನಡೆಸಬೇಕೆಂಬುದು ಅವರಿಬ್ಬರಿಗೂ ಕೂಡ ಆಸೆ ಇತ್ತು. ಆದರೆ ಅದು ಕೊನೆಗೂ ಕೂಡ ಅಂದುಕೊಂಡಂತೆ ನಡೆಯಲಿಲ್ಲ ಎಂಬುದು ಶಿವಣ್ಣನವರಿಗೆ ಇಂದೂ ಕೂಡ ಬೇಸರದ ಸಂಗತಿ.

ಹೌದು ಸ್ನೇಹಿತರೆ ಹಿಂದೆ ಶಿವಣ್ಣನವರ ತಂದೆ ಆದಂತಹ ರಾಜಕುಮಾರ್ ಅವರೊಂದಿಗೆ ಗಂಧದಗುಡಿ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರು ನಟಿಸಿದ್ದರು. ಆದರೆ ಅವರ ಮಗನೊಂದಿಗೆ ನಟಿಸುವ ಮನಸ್ಸು ಮಾಡಿದ್ದರು ಕೂಡ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂಬುದೇ ವಿಪರ್ಯಾಸ. ಹೌದು ಸ್ನೇಹಿತರೆ ಇವರಿಬ್ಬರನ್ನು ಹಾಕಿಕೊಂಡು ಚಿ ಉದಯಶಂಕರ್ ಅವರು ಸಿನಿಮಾ ಮಾಡಬೇಕೆಂದು ಕತೆಯನ್ನು ಬರೆದು ಅದಕ್ಕೆ ಕೃಷ್ಣಾರ್ಜುನ ಎಂಬ ಹೆಸರನ್ನು ಕೂಡ ಇಟ್ಟಿದ್ದರಂತೆ ಸ್ನೇಹಿತರೆ.

ಹೌದು ಸ್ನೇಹಿತರೆ ಕೃಷ್ಣ ಅರ್ಜುನ ಎಂಬ ಸಿನಿಮಾಗೆ ಅವರ ಪುತ್ರನಾಗಿರುವ ಚಿ ಗುರುದತ್ ರವರು ನಿರ್ದೇಶನ ಕೂಡ ಮಾಡುವುದು ನಿಗದಿಯಾಗಿತ್ತು. ಅಣ್ಣಾವ್ರು ಕೂಡಾ ಕತೆಯನ್ನು ಒಪ್ಪಿ ಸಮ್ಮತಿಯನ್ನು ಸೂಚಿಸಿದರು. ಇತ್ತ ಶಿವಣ್ಣ ಹಾಗೂ ವಿಷ್ಣುವರ್ಧನ್ ರವರು ಕೂಡ ಕಥೆಯನ್ನು ಒಪ್ಪಿ ಒಟ್ಟಿಗೆ ನಟಿಸಲು ಒಪ್ಪಿಗೆ ನೀಡಿದ್ದರಂತೆ ಆದರೆ ಏನಾಯಿತು ಗೊತ್ತಿಲ್ಲ ಕೊನೆಯ ಗಳಿಗೆಯಲ್ಲಿ ಈ ಚಿತ್ರ ರದ್ದಾಯಿತು. ಇಂದಿಗೂ ಕೂಡ ಈ ಚಿತ್ರದ ಪೋಸ್ಟರ್ ಎಲ್ಲರ ಮನಸ್ಸಿಗೆ ಒಂದು ಕ್ಷಣ ನೋ’ವನ್ನುಂಟು ಮಾಡುವುದಂತೂ ಖಂಡಿತ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಂದಿಗೆ ನಾವು ವಿಷ್ಣುವರ್ಧನ್ ಹಾಗೂ ಶಿವರಾಜ್ಕುಮಾರ್ ಒಂದೇ ಚಿತ್ರದಲ್ಲಿ ನಟಿಸಿದ ಕೃಷ್ಣಾರ್ಜುನ ಚಿತ್ರವನ್ನು ನೋಡಲು ಸಾಧ್ಯವಾಗುತ್ತಿತ್ತು. ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.