Neer Dose Karnataka
Take a fresh look at your lifestyle.

ಬಿಗ್ ಬಾಸ್ ಗೆದ್ದ ಮೇಲೆ ಮತ್ತೊಮ್ಮೆ ಸದ್ದು ಮಾಡಿದ ಮಂಜು, ವಿಡಿಯೋ ಮಾಡಿ ಹಣ ಕೇಳಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಸಾಕಷ್ಟು ಜನಪ್ರಿಯತೆ ಗಳಿಸಿ ಮಂಜು ಪಾವಗಡ ರವರು ಗೆದ್ದಿರುವುದು ಕೂಡ ಈಗಾಗಲೇ ನಿಮಗೆ ಗೊತ್ತಿದೆ. ಹೌದು ಸ್ನೇಹಿತರೆ ಮಜಾಭಾರತ ಜನಪ್ರಿಯತೆಯಿಂದಾಗಿ ಬಿಗ್ ಬಾಸ್ ಗೆ ಕಾಲಿಟ್ಟಂತೆ ಮಂಜು ಪಾವಗಡದ ಅವರು ಸಾಕಷ್ಟು ಟಾಸ್ಕ್ ಗಳಲ್ಲಿ ಗೆಲ್ಲುವುದರ ಮೂಲಕ ಹಾಗೂ ಎಲ್ಲರಿಗೂ ಮನರಂಜನೆ ನೀಡುವ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಈ ಬಿಗ್ ಬಾಸ್ ನಲ್ಲಿ ಗೆದ್ದು ಬರೋಬ್ಬರಿ ಸರಿಸುಮಾರು 60 ಲಕ್ಷಕ್ಕೂ ಅಧಿಕ ನಗದು ಬಹುಮಾನಗಳನ್ನು ಎಲ್ಲಾಕಡೆಯಿಂದ ಗೆದ್ದಿದ್ದರು.

ಆದರೆ ಈಗ ಮಂಜು ಪಾವಗಡ ರವರು ಮತ್ತೆ ಹಣವನ್ನು ಕೇಳುತ್ತಿದ್ದಾರೆ ಹಾಗೂ ಸಹಾಯವನ್ನು ಕೂಡ ಬೇಡುತ್ತಿದ್ದಾರೆ ಯಾಕೆ ಮತ್ತು ಯಾವ ಕಾರಣಕ್ಕಾಗಿ ಹಣವನ್ನು ಕೇಳುತ್ತಿದ್ದಾರೆ ಎಂಬುದನ್ನು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಹೌದು ಸ್ನೇಹಿತರೆ ತುಮಕೂರು ಮೂಲದ ನವೀನ ಹಾಗೂ ಜ್ಯೋತಿ ದಂಪತಿಗಳ ಪುತ್ರನಾಗಿರುವ ಜನಿಷ್ ರವರಿಗೆ ಇಡೀ ಪ್ರಪಂಚದಲ್ಲೇ ಬರುವ ಅತ್ಯಂತ ಅಪರೂಪದ ಕಾಯಿಲೆ ಬಂದಿದ್ದು ಈ ಕಾರಣಕ್ಕಾಗಿ ಮಂಜು ಪಾವಗಡ ರವರ ವೀಡಿಯೋ ಮೂಲಕ ಮಗುವಿಗೆ ಸಹಾಯ ಮಾಡಬೇಕು ಹಾಗೂ ಹಣವನ್ನು ನೀಡಿ ಎಂಬುದಾಗಿ ಬೇಡಿಕೊಂಡಿದ್ದಾರೆ.

ಹೌದು ಸ್ನೇಹಿತರೆ ಈ ಕಾಯಿಲೆ ಹೋಗಬೇಕೆಂದರೆ 16 ಕೋಟಿ ಮೌಲ್ಯದ ಇಂಜೆಕ್ಷನ್ನು ಈ ಮಗುವಿಗೆ ನೀಡಬೇಕಾಗುತ್ತದೆ. ಆದರೆ ಈ ದಂಪತಿಗಳು ಸಾಕಷ್ಟು ಬಡವರಾಗಿ ಇರುವುದರಿಂದಾಗಿ ಅಷ್ಟು ಹಣವಿಲ್ಲ ಈಗಾಗಲೇ ಎಂಟು ಕೋಟಿ ರೂಪಾಯಿ ಸಂಗ್ರಹವಾಗಿದೆ ಇನ್ನೂ ಕೂಡ ಮೂರು ತಿಂಗಳ ಒಳಗಾಗಿ ಎಂಟು ಕೋಟಿ ರೂಪಾಯಿ ಸಂಗ್ರಹವಾಗಬೇಕು. ಹೀಗಾಗಿ ದಂಪತಿಗಳು ಹಾಗೂ ಮಂಜು ಪಾವಗಡ ರವರು ಸಹಾಯ ಮಾಡಿರಿ ಎಂಬುದಾಗಿ ವೀಡಿಯೋ ಮೂಲಕ ಕನ್ನಡಿಗರಲ್ಲಿ ಕೇಳಿಕೊಂಡಿದ್ದಾರೆ. ನೀವು ಮಾಡುವ ಸಹಾಯ ಈ ಮಗುವಿನ ಮುಂದಿನ ಜೀವನಕ್ಕೆ ದಾರಿಯಾಗಬಹುದು ಸ್ನೇಹಿತರೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ.

Comments are closed.