Neer Dose Karnataka
Take a fresh look at your lifestyle.

ಕಷ್ಟದಲ್ಲಿದ್ದೀರಾ ಎಂದು ವಿಜಯಲಕ್ಷ್ಮಿಗೆ ಅಭಿಮಾನಿ ಉಚಿತ ಮನೆ ನೀಡಿದರೇ, ನಟಿ ಮಾಡಿದ್ದೇನು ಗೊತ್ತೇ?? ಅದುಕ್ಕೆ ಹೇಳೋದು ಸಹಾಯ ಮಾಡಬಾರದು ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಕನ್ನಡ ಚಿತ್ರರಂಗ, ಸಿನಿಮಾಗಿಂತಲೂ ಹೆಚ್ಚಾಗಿ ಇತರ ವಿಷಯಗಳಿಗೇ ಹೆಚ್ಚಾಗಿ ಸುದ್ದಿಮಾಡುತ್ತಿದೆ. ಒಂದಲ್ಲಾ ಒಂದು ನಟ ನಟಿಯರು ಗಾಸಿಪ್ ಗಳಿಂದಾಗಿ ಮಾಧ್ಯಮದ ಮುಂದೆ ಬರುತ್ತಿದ್ದಾರೆ. ಇದರಲ್ಲಿ ಕರೋನಾ ಬಂದಾಗಿನಿಂದ ನಟಿ ವಿಜಯಲಕ್ಷ್ಮಿ ದಿನಕ್ಕೊಂದು ವಿಡಿಯೋ ಹಾಕಿ ಸಾಕಷ್ಟು ಸಮಸ್ಯೆಗಳನ್ನೂ ಹುಟ್ಟುಹಾಕುತ್ತಿದ್ದಾರೆ. ಪ್ರತಿದಿನ ಜನರ ಬಳಿ ಸಹಾಯ ಕೇಳಿ ಅಂಗಲಾಚುತ್ತಿದ್ದರು. ಈ ಕಾರಣಕ್ಕೆ ಕೆಲವರು ಸಹಾಯ ಮಾಡಿದ್ದರೆ ಇನ್ನೂ ಕೆಲವರು ವಿಜಯಲಕ್ಷ್ಮಿಯವರ ಬಗ್ಗೆ ತಿರಸ್ಕಾರವನ್ನು ವ್ಯಕ್ತಪಡಿಸಿದ್ದಾರೆ.

ಒಬ್ಬ ನಟಿಗೆ ಸಮಸ್ಯೆಯಾದರೆ ಖಂಡಿತವಾಗಿಯೂ ಬೇಸರವಾಗುತ್ತೆ. ಅಂಥವರಿಗೆ ಸಹಾಯ ಮಾಡುವ ಮನಸ್ಸಾಗತ್ತೆ. ಆದರೆ ನಟಿ ವಿಜಯಲಕ್ಷ್ಮಿ ವಿಷಯದಲ್ಲಿ ಹಾಗಲ್ಲ. ಅವರು ಒದು ಕಾಲದಲ್ಲಿ ಕನ್ನಡದಲ್ಲಿ ಸೂರ್ಯವಂಶದಂಥ ಚಿತ್ರದಲ್ಲಿ ನಟಿಸಿ ಫೇಮಸ್ ಆಗಿ ನಂತರ ಕನ್ನಡವನ್ನು ಧಿಕ್ಕರಿಸಿ ತಮಿಳುನಾಡಿಗೆ ಹೋದವರು. ಇನ್ನು ನಟ ಸೃಜನ್ ಲೋಕೇಶ್ ಅವರನ್ನು ಆರು ವರ್ಷಗಳ ಕಾಲ ಪ್ರೀತಿಸಿ, ನಿಶ್ಚಿತಾರ್ಥವನ್ನೂ ಮಾಡಿಕೊಂಡು ನಂತರ ಮದುವೆಯ ವಿಷಯ ಬಂದಾಗ ಹಿಂದೇಟು ಹಾಕಿದರು. ಇದೀಗ ಕರೋನಾ ಬಂದಾಗಿನಿಂದ ತಾನು ಅಮ್ಮ ಹಾಗೂ ಅಕ್ಕ ಕಷ್ಟ ಪಡುತ್ತಿರುವುದನ್ನು ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಜೊತೆಗೆ ಕನ್ನಡ ಚಿತ್ರರಂಗದ ಹಲವು ನಟರನ್ನು ಬೈದಿದ್ದೂ ಇದೆ. ಆದರೂ ಶಿವಣ್ಣ ಹಾಗೂ ಕಿಚ್ಚ ಸುದೀಪ್ ಮೊದಲಾದವರು ಅವರ ಆಸ್ಪತ್ರೆ ಖರ್ಚಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಇತ್ತೀಚಿಗೆ ಅಭಿಮಾನಿಗಳಲ್ಲಿ ತನಗೆ ಇರಲು ಒಂದು ಮನೆಯಿಲ್ಲ ದಯವಿಟ್ಟು ಸಹಾಯ ಮಾಡಿ ಎಂದು ಅಂಗಲಾಚಿ ವಿಡಿಯೋ ಮಾಡಿದ್ದರು. ಇದಕ್ಕೆ ಮರುಗಿದ ಒಬ್ಬ ಅಭಿಮಾನಿ ಕಾರವಾರದಲ್ಲಿ ಒಂದು ಮನೆಯನ್ನು ವಿಜಯಲಕ್ಷ್ಮಿ ಕುಟುಂಬಕ್ಕೆ ಬಿಟ್ಟುಕೊಟ್ಟಿದ್ದ. ಆದರೆ ಈ ಮನೆಯಲ್ಲಿ ಜಿರಳೆ ಕಾಟ, ತಾನು ಇಲ್ಲಿರುವುದಿಲ್ಲ ಎಂದು ಖ್ಯಾತೆ ತೆಗೆದಿದ್ದಾರೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಏನು ಇಲ್ಲದವರಿಗೆ ಉಳಿಯಲು ಮನೆ ಸಿಕ್ಕಿದೆ, ಜಿರಳೆ ಓಡಿಸಿಕೊಂಡಾದರೂ ಇರಬಹುದು ಎಂದು ವಿಜಯಲಕ್ಷ್ಮಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Comments are closed.