Neer Dose Karnataka
Take a fresh look at your lifestyle.

ವಿಚ್ಛೇಧನದ ಜೊತೆಗೆ ಸ್ಟಾರ್ ನಟ ನಾಗಚೈತನ್ಯ ಗೆ ಮತ್ತೊಂದು ಸಂಕಷ್ಟ, ಒಂದರ ಮೇಲೊಂದು ಸವಾಲು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ತೇಲುಗು ಸ್ಟಾರ್ ನಟ ನಾಗ ಚೈತನ್ಯ, ನಟಿ ಸಮಂತಾ ಅವರ ವಿಚ್ಛೇಧನದ ವಿಷಯ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಕ್ಕೆ ಕಾರಣ ನಟಿ ಸಮಂತಾ ತಮ್ಮ ಹೆಸರಿನ ಜೊತೆಗಿದ್ದ ’ಅಕ್ಕಿನೆನಿ’ ಎಂಬುದನ್ನು ತೆಗೆದುಹಾಕಿದ್ದು. ಆದರೆ ತೆಲಗು ಸಿನಿ ಪ್ರಪಂಚದ ತುಂಬೆಲ್ಲಾ ಹರಿದಾಡುತ್ತಿರುವ ತಮ್ಮ ವಿಚ್ಛೇಧನದ ವಿಷಯವಾಗಲಿ ತಾವು ದೂರಾಗುವ ವಿಷಯವಾಗಲಿ ಎಲ್ಲಿಯೂ ಸ್ಪಷ್ಟಪಡಿಸಿಲ್ಲ.

ತಮ್ಮ ಮುಂಬರುವ ಚಿತ್ರ ಲವ್ ಸ್ಟೋರಿ’ ಪ್ರಮೋಶನ್ ಸಮಯದಲ್ಲಿ ಸಂದರ್ಶನಕ್ಕೆ ಸಿಕ್ಕ ನಾಗ ಚೈತನ್ಯ ತಮ್ಮ ವಯಕ್ತಿಕ ಬದುಕಿನ ಬಗ್ಗೆ ಮಾತನಾಡುತ್ತಿರುವುದಕ್ಕೆ ನನ್ನದೇನು ಪ್ರತಿಕ್ರಿಯೆ ಇಲ್ಲ, ಏಕೆಂದರೆ ಈಗ ಎಲ್ಲವೂ ಸುದ್ಧಿಯಾಗುತ್ತದೆ. ಕೆಲಸದ ಸ್ಥಳದಲ್ಲಿ ವಯಕ್ತಿಕ ವಿಷಯ ಚರ್ಚಿಸುವುದು ನನಗೆ ಇಷ್ಟವಿಲ್ಲ ಎಂದು ಹೇಳಿ ತಮ್ಮ ವಿಚ್ಛೇಧನಕ್ಕೆ ಸಾಂಬಂಧಿಸಿದಂತೆ ಯಾವ ಗುಟ್ಟನ್ನು ರಟ್ಟು ಮಾಡಿರಲಿಲ್ಲ. ಆದರೆ ಈ ವಿಷಯ ಬಗೆಹರಿಯುವುದಕ್ಕೂ ಮೊದಲೇ ನಟ ನಾಗಚೈತನ್ಯ ಅವರಿಗೆ ಇನ್ನೊಂದು ಸಮಸ್ಯೆ ಎದುರಾಗಿದೆ.

ಹೌದು ’ಲವ್ ಸ್ಟೋರಿ’ ಚಿತ್ರ ನಾಗ ಚೈತನ್ಯ ಹಾಗೂ ಸಾಯಿಪಲ್ಲವಿ ನಟನೆಯ ಚಿತ್ರ. ಇದು ಬಿಡುಗಡೆಯಾಗುತ್ತಿದ್ದ ಹಾಗೆ ಟೆಲಿಗ್ರಾಮ್ ಹಾಗೂ ಇನ್ನಿತರ ಜಾಲತಾಣಗಳಲ್ಲಿ ಉತ್ತವ ಗುಣಮಟ್ತದ ಪರೆಟೆಡ್ ಕಾಫಿ ಬಿಡುಗಡೆಯಾಗಿದೆ. ಈ ಪೈರೆಟೆಡ್ ಕಾಫಿಯನ್ನು ತಮಿಳು ರಾಕರ್ಸ್ ಬಿಡುಗದೆ ಮಾಡಿದ್ದು, ಎಲ್ಲಾ ಚಿತ್ರಮಂದಿರಗಳಲ್ಲಿ ಸರಿಯಾಗಿ ಪ್ರಸಾರವಾಗುವುದಕ್ಕೂ ಮೊದಲೇ ಜನರ ಕೈಸೇರುವಂತಾಗಿದೆ. ಇದು ಚಿತ್ರೀಕರಣದ ಶ್ರಮವನ್ನು ಒಂದೇ ಕ್ಷಣದಲ್ಲಿ ನೀರಿನಲ್ಲಿ ಹೋಮ ಮಾಡಿದಂತೆಯೇ ಸರಿ. ಆದರೂ ಸಾಯಿ ಪಲ್ಲವಿ ಹಾಗೂ ನಟ ನಾಗಚೈತನ್ಯ ಅವರ ಫ್ಯಾನ್ ಫಾಲೋವರ್ಸ್ ಚಿತ್ರಮಂದಿರಕ್ಕೇ ಹೋಗಿ ಚಿತ್ರ ನೋಡುತ್ತಾರೆ ಎಂಬ ಭರವಸೆಯಂತೂ ಚಿತ್ರತಂಡಕ್ಕಿದೆ.

Comments are closed.