Neer Dose Karnataka
Take a fresh look at your lifestyle.

ವಿಚ್ಛೇದನದ ನಂತರ ಮೊದಲ ಫೋಟೋಶೂಟ್​ಗೆ ಪೋಸ್​ ಕೊಟ್ಟ ಸಮಂತಾ, ಇದರಲ್ಲಿ ಮಿಸ್​ ಆಗಿದ್ದೇನು ಗೊತ್ತೇ?? ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ

ನಮಸ್ಕಾರ ಸ್ನೇಹಿತರೇ ಸ್ಯಾಮ್ ಹಾಗೂ ಚಾಯ್ ವಿಚ್ಚೇಧನವಾಗಿ ವಾರಗಳೇ ಕಳೆದಿವೆ. ಆದರೆ ಈ ಬಗ್ಗೆ ಮಾತನಾಡುವುದನ್ನು ಮಾತ್ರ ಜನ ಬಿಟ್ಟಿಲ್ಲ. ತಮ್ಮ ಫೇಮರೇಟ್ ಜೋಡಿ ದೂರಾಗಿದ್ದಕ್ಕೆ ಬೇಸರದಲ್ಲಿ ಕೆಲವರು ಮಾತನಾಡಿದರೆ ಇನ್ನೂ ಕೆಲವರು ಸಮಂತಾ ವಿರುದ್ಧ ಮನ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನೂ ಆಡುತ್ತಿದ್ದಾರೆ. ಇದರಿಂದ ಸಮಂತಾ ಕೂಡ ತುಂಬಾನೇ ನೊಂದುಕೊಂಡಂತೆ ಕಾಣುತ್ತಿದೆ.

ಸಿನಿಮಾರಂಗದಲ್ಲಿ ಮದುವೆಯಾದ ಜೋಡಿ ದೂರಾಗುವುದು ಇಂದು ನಿನ್ನೆಯ ಕಥೆಯೇನಲ್ಲ, ಇದು ಸಾಮಾನ್ಯವಾದ ಸಂಗತಿ, ದಂಪತಿಗಳ ನದುವೆ ವೈಮನಸ್ಸು ಉಂಟಾಗಿ ಪರಸ್ಪರ ಒಪ್ಪಿಯೇ ವಿಚ್ಛೇಧನ ಪಡೆದುಕೊಂಡು ತಮ್ಮ ದಾರಿಯನ್ನು ತಾವು ನೋಡಿಕೊಳ್ಳುತ್ತಾರೆ. ಆದರೆ ಈಪ್ರಕ್ರಿಯೆ ಮೆಲ್ನೋಟಕ್ಕೆ ನಮಗೆ ಎಷ್ಟು ಸುಲಭವಾಗಿ ಬಿಟ್ಟು ಹೋದಳು/ ಹೋದನು ಎಂದು ಹೇಳುವಷ್ಟು ಸುಲಭವಾಗಿ ಇರುವುದಿಲ್ಲ ಪರಿಸ್ಥಿತಿ. ಅವರುಗಳೂ ಕೂಡ ತುಂಬಾನೇ ನೋವು ಅನುಭವಿಸಬಹುದು, ಅಸಾಧ್ಯ ಪರಿಸ್ಥಿತಿಯನ್ನು ಎದುರಿಸಿರಬಹುದು ಎಂದು ನಾವು ಊಹಿಸುವುದೇ ಇಲ್ಲ, ಬದಲಿಗೆ ಆಳಿಗೊಂದು ಕಲ್ಲು ಎನ್ನುವಂತೆ ಇನ್ನಷ್ಟು ಕೆಟ್ಟದಾಗಿ ಮಾತನಾಡಿ ಅವರ ಮನಸ್ಸನ್ನು ಇನ್ನಷ್ಟು ನೋಯಿಸುವ ಪ್ರಯತ್ನ ಮಾಡುತ್ತೇವೆ. ಸಮಂತಾ ಅವರ ವಿಷಯದಲ್ಲಿ ಆಗಿದ್ದೂ ಇದೆ!

ಸಮಂತಾ ಇತ್ತೀಚಿಗೆ ವಿಚ್ಛೇಧನದ ನಂತರ ಹೈದ್ರಾಬಾದ್ ನಲ್ಲಿ ಪೋಟೋಶೂಟ್ ಒಂದರಲ್ಲಿ ಕಾನಿಸಿಕೊಂಡಿದ್ದರು. ಆದರೆ ಎಂದಿನ ಸಮಂತಾ ಅವರಾಗಿರಲಿಲ್ಲ, ಮುಖದಲ್ಲಿ ನಗುವಿನ ಬದಲು ನೋವೇ ಎದ್ದು ಕಾಣುತ್ತಿತ್ತು. ಇನ್ನು ತಮ್ಮ ಬಗ್ಗೆ ಬಾಯಿಗೆ ಬಂದ ಹಾಗೆ ಟ್ರೋಲ್ ಮಾಡುವವರ ಬಗ್ಗೆ ಸಮಂತಾ ಪೋಸ್ಟ್ ಒಂದನ್ನು ಹಾಕಿದ್ದಾರೆ. ’ವಿಚ್ಛೇಧನ ಎನ್ನುವುದೇ ಒಂದು ನೋವಿನ ಪ್ರಕ್ರಿಯೆ, ಅದರ ಮೇಲೆ ಸಮಂತಾ ಅವಕಾಶವಾದಿ, ಆಕೆಗೆ ಮಗು ಮಾಡಿಕೊಳ್ಳಲು ಇಷ್ಟವಿಲ್ಲ, ಅಬಾರ್ಷನ್ ಮಾಡಿಸಿಕೊಂಡಿದ್ದಾಳೆ, ಆಕೆಗೆ ಅಫೇರ್ಸ್ ಇವೆ, ಹೀಗೆ ಏನೆನೋ ರೂಮರ್ಸ್ ಹರಡಿ ನನ್ನನ್ನು ಒಳಗಿನಿಂದಲೇ ಮುರಿಯುವ ಪ್ರಯತ್ನ ಮಾಡುತ್ತಿದ್ದಿರಿ, ಆದರೆ ಅದು ಎಂದಿಗೂ ಸಾಧ್ಯವಿಲ್ಲ’ ಎಂದು ನೋವಿನಿಂದ ಬರೆದುಕೊಂಡಿದ್ದಾರೆ, ಜೊತೆಗೆ ಕಷ್ಟದ ಸಮಯದಲ್ಲಿ ಜೊತೆಗಿದ್ದವರಿಗೆ ಬಗ್ಗೆ ಕೃತಜ್ಞತೆಯನ್ನೂ ತಿಳಿಸಿದ್ದಾರೆ. ಸ್ನೇಹಿತರೆ, ಯಾರ ಜೀವನದಲ್ಲಿ ಏನು ನಡೆದಿರುತ್ತೆ ಅನ್ನೋದು ನಮಗೆ ಗೊತ್ತಿಲ್ಲದೇ ಇದ್ದಾಗ, ಅನಗತ್ಯವಾಗಿ ಅವರ ಮನಸ್ಸನ್ನು ನೋಯಿಸುವುದು ಅಕ್ಷರಶಃ ತಪ್ಪು ಅಲ್ಲವೆ!

Comments are closed.