Neer Dose Karnataka
Take a fresh look at your lifestyle.

ವಿವಾಹ ವಿಚ್ಚೇದನದ ಪಡೆದ ನಂತರ ಊಹಿಸದ ರೀತಿಯಲ್ಲಿ ಸಿಹಿ ಸುದ್ದಿ ಹಂಚಿಕೊಂಡ ನಟಿ ಸಮಂತಾ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ವಿವಾಹ ವಿಚ್ಛೇದನ ಪಡೆದ ನಂತರ ನಟಿ ಸಮಂತಾ ರವರು ಎಲ್ಲೂ ಸುದ್ದಿಯಾಗಿರಲಿಲ್ಲ ಹಾಗೂ ಎಲ್ಲೂ ಕೂಡ ಕಾಣಿಸಿಕೊಂಡಿರಲಿಲ್ಲ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಸಮಂತ ರವರು ಎಲ್ಲರಿಂದ ದೂರ ಆಗಿದ್ದರು. ಹೌದು ಸ್ನೇಹಿತರೆ ಸಮಂತ ಹಾಗೂ ನಾಗಚೈತನ್ಯ ರವರು ಹತ್ತು ವರ್ಷಗಳ ಕಾಲ ಪ್ರೀತಿಸಿ 2017 ರಲ್ಲಿ ಮದುವೆಯಾಗುವ ಮೂಲಕ ನಾಲ್ಕು ವರ್ಷದ ತುಂಬು ಸಂಸಾರವನ್ನು ಕೂಡ ನಡೆಸಿದರು.

ಆದರೆ ಯಾರ ಕಣ್ಣು ಇವರ ಸಂಬಂಧದ ಮೇಲೆ ಬಿತ್ತೋ ಏನೋ ಈಗ ಇವರಿಬ್ಬರೂ ಭಿನ್ನಾಭಿಪ್ರಾಯಗಳಿಂದಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ. ಇನ್ನು ಇವರಿಬ್ಬರ ವಿವಾಹ ವಿಚ್ಛೇದನ ದಿಂದಾಗಿ ಇವರಿಬ್ಬರ ಕುಟುಂಬಸ್ಥರು ಮಾತ್ರವಲ್ಲದೆ ಅದಕ್ಕಿಂತ ಹೆಚ್ಚಾಗಿ ಅಭಿಮಾನಿಗಳು ದುಃಖವನ್ನು ಪಡುತ್ತಿದ್ದಾರೆ. ಇನ್ನು ವಿವಾಹ ವಿಚ್ಛೇದನದ ನಂತರ ತಣ್ಣಗಾಗಿದ್ದ ಸಂಬಂಧದವರು ಈಗ ಗುಡ್ ನ್ಯೂಸ್ ಒಂದನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

ಹೌದು ಸ್ನೇಹಿತರ ನಟಿಯ ಸಮಂತ ರವರು ಹೊಸ ಚಿತ್ರಕ್ಕೆ ಕೈಹಾಕಿದ್ದಾರೆ. ನಟಿ ಸಮಂತಾ ರವರ ಹೊಸ ಚಿತ್ರದ ಘೋಷಣೆಯಾಗಿದ್ದು ಈ ಚಿತ್ರವನ್ನು ಶಾಂತರುಬನ್ ಗ್ನಾನ ಸೇಖರನ್ ನಿರ್ದೇಶಿಸುತ್ತಿದ್ದು, ಎಸ್ಆರ್ ಪ್ರಕಾಶ್ ಬಾಬು ಹಾಗೂ ಎಸ್ ಆರ್ ಪ್ರಭು ನಿರ್ಮಾಣ ಮಾಡುತ್ತಿದ್ದಾರೆ. ನಟಿ ಸಮಂತಾ ರವರನ್ನು ದೊಡ್ಡ ಪರದೆ ಮೇಲೆ ಮತ್ತೊಮ್ಮೆ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ಇದು ಸಂತೋಷದ ಸುದ್ದಿ ಆಗಿದೆ. ಇನ್ನು ಇಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಕೂಡ ಸಾಕಷ್ಟು ಆಫರ್ ಗಳು ನಟಿ ಸಮಂತಾ ರವರ ಕೈ ಸೇರುವ ಸಾಧ್ಯತೆ ಇದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.