Neer Dose Karnataka
Take a fresh look at your lifestyle.

ಏನು ಮಾಡುತ್ತಿರೋ ಗೊತ್ತಿಲ್ಲ, ಈತನನ್ನು ಈಗಲೇ ವಿಶ್ವಕಪ್ ಗೆ ಆಯ್ಕೆ ಮಾಡಿ ಎಂದ ಹರ್ಭಜನ್ ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇದೀಗ ನಡೆಯುತ್ತಿರುವ ಟಿ 20 ವಿಶ್ವಕಪ್ ಸದ್ಯ ಕುತೂಹಲ ಮೂಡಿಸಿದೆ. ಈಗಾಗಲೇ ಭಾರತ ತಂಡ ಆಡುವ ಹದಿನೈದು ಸದಸ್ಯರು ಹಾಗೂ ಮೂವರು ಮೀಸಲು ಆಟಗಾರರನ್ನ ತಂಡ ಅಭ್ಯಾಸ ಪಂದ್ಯಗಳನ್ನು ಆರಂಭಿಸಿದೆ. ತಂಡಕ್ಕೆ ಆಯ್ಕೆಯಾಗಿಕೆಲ ಆಟಗಾರರು ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದಾರೆ. ಆದರೇ ಸದ್ಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೆಲವು ಆಟಗಾರರು ಆ ಕಳಪೆ ಆಟಗಾರರ ಬದಲಿಗೆ ಸ್ಥಾನ ಪಡೆಯಬೇಕು ಎಂಬುದು ಭಾರತ ತಂಡದ ಹಿರಿಯ ಆಟಗಾರ ಹರ್ಭಜನ ಸಿಂಗ್ ಟ್ವೀಟ್ ಮಾಡಿದ್ದಾರೆ.

ಸದ್ಯ ಆರ್ಸಿಬಿ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ ಯುಜವೇಂದ್ರ ಚಾಹಲ್ ಬಗ್ಗೆ ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್, ನೀವು ನಿಮ್ಮ ಕೈಲಾದ ಕೆಲಸವನ್ನು ಮಾಡಿದ್ದಿರಿ, ಉತ್ತಮ ಕೆಲಸವನ್ನು ಮುಂದುವರೆಸಿ, ಗಾಳಿಯಲ್ಲಿ ವೇಗದ ಸ್ಪಿನ್ ಬೌಲಿಂಗ್ ಮುಂದುವರೆಸಿ, ತುಂಬಾ ನಿಧಾನವಾಗಿ ಬೌಲಿಂಗ್ ಮಾಡಬೇಡಿ. ಟಿ 20 ವಿಶ್ವಕಪ್ ನಲ್ಲಿ ನಿಮ್ಮನ್ನು ಬದಲಿ ಆಟಗಾರನನ್ನಾಗಿ ಆಯ್ಕೆ ಮಾಡಲೇ ಬೇಕು ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ಅಜಿತ್ ಅಗರ್ಕರ್ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಹಾಗೇ ಮಾಡಿದರೇ ತಂಡದ ಸಂಯೋಜನೆ ಗೆ ತೊಂದರೆಯಾಗುತ್ತದೆ. ಆಟಗಾರರು ಫಾರ್ಮ್ ಗೆ ಮರಳುವುದಿರಲಿ ಅಥವಾ ಕಳೆದುಕೊಳ್ಳುವುದಿರಲಿ ಈ ಎರಡು ಕೇವಲ ಎರಡು ಇನ್ನಿಂಗ್ಸ್ ಗಳ ವಿಷಯ. ಒಂದೇ ಒಂದು ಇನ್ನಿಂಗ್ಸ್ ನಲ್ಲಿ ಬೇಕಿದ್ದರೇ ಅವರು ಫಾರ್ಮ್ ಗೆ ಮರಳುತ್ತಾರೆ. ಒಮ್ಮೆ ಫಾರ್ಮ್ ಗೆ ಬಂದರೇ ಸಾಕು , ಅವರ ಉತ್ತಮ ಫಾರ್ಮ್ ಹಲವಾರು ಇನ್ನಿಂಗ್ಸ್ ಗಳ ತನಕ ಮುಂದುವರೆಯುತ್ತಾರೆ. ಹಾಗಾಗಿ ಇಂಜುರಿ ಬಗ್ಗೆ ಆಲೋಚನೆ ಮಾಡದೆ ಇರಬೇಕು ಎಂದಿದ್ದಾರೆ.

Comments are closed.