Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಇದ್ದಕ್ಕಿದ್ದ ಹಾಗೆ ಕೋಟಿಗೊಬ್ಬ 3 ಸಿನಿಮಾ ಕುರಿತು ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಹಾಮಾರಿಯ ನಂತರ ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಗೆಲುವನ್ನು ತಂದು ಕೊಟ್ಟ ಚಿತ್ರವೆಂದರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ3. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕೋಟಿಗೊಬ್ಬ3 ಅಕ್ಟೋಬರ್ 14ರಂದು ಬಿಡುಗಡೆ ಆಗಬೇಕಾಗಿತ್ತು. ಆದರೆ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರ ಹಲವಾರು ಅಡೆತಡೆಗಳಿಂದಾಗಿ ಒಂದು ದಿನ ತಡವಾಗಿ ಅಂದರೆ ಅಕ್ಟೋಬರ್ 15ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು.

ಇನ್ನು ತಡವಾಗಿ ಬಿಡುಗಡೆಯಾದರೂ ಕೂಡ ಬಾಕ್ಸಾಫೀಸ್ ನಲ್ಲಿ ಹಿಂದೆಂದೂ ಕಂಡುಕೇಳರಿಯದ ಅಂತಹ ಕಲೆಕ್ಷನ್ ಗಳಿಸಿತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಚಿತ್ರ. ಇನ್ನು ಈಗಾಗಲೇ ಕೇಳಿ ಬಂದಿರುವಂತೆ ಬಾಕ್ಸಾಫೀಸ್ ನಲ್ಲಿ ಕೋಟಿಗೊಬ್ಬ3 ಚಿತ್ರ ಆರು ದಿನಗಳಲ್ಲಿ 60 ಕೋಟಿಗೂ ಅಧಿಕ ಗಳಿಕೆಯನ್ನು ಗಳಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಗಾಂಧಿನಗರದಲ್ಲಿ ಕೂಡ ಕೋಟಿಗೊಬ್ಬ3 ಚಿತ್ರದ ಕುರಿತಂತೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬರೋಬ್ಬರಿ 350 ಹೆಚ್ಚಿನ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ3 ಬಿಡುಗಡೆಯಾಗಿತ್ತು.

ಇನ್ನು ಈ ಕುರಿತಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಪ್ರತಿಕ್ರಿಯೆ ನೀಡಿದ್ದಾರಂತೆ. ಅದೇನೆಂದರೆ ಚಿತ್ರ ಒಂದು ದಿನ ತಡವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಿ ಬಿಡುಗಡೆಯಾದ ಸಮಯದಲ್ಲಿ ಚಿತ್ರದ ನಿರ್ಮಾಪಕರಾಗಿರುವ ಸೂರಪ್ಪ ಬಾಬು ರವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರೆ ಮಾಡಿದ್ದರಂತೆ. ಕರೆಮಾಡಿ ಸೂರಪ್ಪ ಬಾಬು ರವರಿಗೆ ನಿಮ್ಮ ಹೀರೋ ಹಾಗೂ ಹೀರೋವಿನ ಅಭಿಮಾನಿಗಳು ಅಷ್ಟು ಸುಲಭದಲ್ಲಿ ನಿಮ್ಮ ಚಿತ್ರವನ್ನು ಸೋಲಲು ಬಿಡುವುದಿಲ್ಲ. ಒಳ್ಳೆಯ ಕಥೆ ಇದ್ದರೆ ಖಂಡಿತವಾಗಿ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬುದಾಗಿ ದೈರ್ಯವನ್ನು ತುಂಬಿದ್ದಾರಂತೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.