Neer Dose Karnataka
Take a fresh look at your lifestyle.

ಕೋಟಿಗೊಬ್ಬ 3 ಸಕ್ಸೆಸ್ ಮೀಟ್ ನಲ್ಲಿ ಮಾತಿನಲ್ಲಿಯೇ ಕುಟುಕಿದ ಕಿಚ್ಚ ಸುದೀಪ್, ಖಡಕ್ ಆಗಿ ಪರೋಕ್ಷವಾಗಿ ಹೇಳಿದ್ದು ಯಾರಿಗಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಹಾಗೂ ಸೂರಪ್ಪಬಾಬು ನಿರ್ಮಾಣದಲ್ಲಿ ಮೂಡಿ ಬಂದಿರುವ ಕೋಟಿಗೊಬ್ಬ3 ಚಿತ್ರ ಅಕ್ಟೋಬರ್ 15ರಂದು ಬಿಡುಗಡೆಯಾಗಿ ಬರೋಬ್ಬರಿ ಈಗ ಎರಡು ವಾರಗಳನ್ನು ಈಗಾಗಲೇ ಪೂರೈಸಿದೆ. ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಕೂಡ ಅದ್ದೂರಿಯಾಗಿ ಓಪನಿಂಗ್ ಪಡೆದುಕೊಂಡು ಇಂದಿನವರೆಗೂ ಕೂಡ ಫುಲ್ ಪ್ರದರ್ಶನಗಳನ್ನು ಕಾಣುತ್ತಾ ಬರುತ್ತಿದೆ. ನಿಮಗೆ ತಿಳಿದಿರುವಂತೆ ಈ ಚಿತ್ರವನ್ನು ಹೊಸ ನಿರ್ದೇಶಕ ಶಿವ ಕಾರ್ತಿಕ್ ರವರು ನಿರ್ದೇಶಿಸಿದ್ದಾರೆ.

ಇನ್ನು ನಿನ್ನೆಯಷ್ಟೇ ಕೋಟಿಗೊಬ್ಬ3 ಚಿತ್ರದ ಯಶಸ್ಸಿನ ಸಂಭ್ರಮವನ್ನು ಆಚರಿಸಲು ಚಿತ್ರತಂಡ ಕಾರ್ಯಕ್ರಮವೊಂದನ್ನು ಅರೆಂಜ್ ಮಾಡಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಚಿತ್ರತಂಡದ ನಟ-ನಟಿಯರು ಹಾಗೂ ತಂತ್ರಜ್ಞರು ಸೇರಿದಂತೆ ರಿಯಲ್ ಸ್ಟಾರ್ ಉಪೇಂದ್ರ ರವರು ಕೂಡ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇನ್ನು ಈ ಸಂದರ್ಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಶಿವ ಕಾರ್ತಿಕ್ ರವರಿಗೆ ಮೊದಲ ಚಿತ್ರದ ಯಶಸ್ಸಿನ ಶುಭಾಶಯಗಳನ್ನು ಕೋರುತ್ತಾ ಕನ್ನಡಚಿತ್ರರಂಗದಲ್ಲಿ ನೀವು ಮೊದಲ ಬಾರಿಗೆ ಯಶಸ್ಸನ್ನು ಸಾಧಿಸಿದ್ದೀರಿ ಇಲ್ಲಿಯೇ ಇರಿ ಬೇರೆ ಭಾಷೆಗಳಿಗೆ ಒಂದೇ ಸಮನೆ ಹೋಗಬೇಡಿ ಇಲ್ಲಿ ಕೂಡ ನಟರಿದ್ದಾರೆ ನಿರ್ಮಾಪಕರಿದ್ದಾರೆ ಎಂಬುದಾಗಿ ಕಿವಿಮಾತನ್ನು ಹೇಳಿದ್ದಾರೆ.

ಇನ್ನು ಈ ಮಾತನ್ನು ಕೇಳಿರುವ ನೆಟ್ಟಿಗರು ಕಿಚ್ಚ ಸುದೀಪ್ ರವರು ಈ ಮಾತನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಪರೋಕ್ಷವಾಗಿ ಹೇಳಿದ್ದಾರೆ ಎಂಬುದಾಗಿ ಮಾತನಾಡಿಕೊಂಡಿದ್ದಾರೆ. ಹೌದು ಗೆಳೆಯರೆ ನಿಮಗೆಲ್ಲ ತಿಳಿದಿರುವಂತೆ ಪ್ರಶಾಂತ್ ನೀಲ್ ರವರು ಕೆಜಿಎಫ್ ಚಿತ್ರಗಳು ಮುಗಿಯುತ್ತಿದ್ದಂತೆ ಸಂಪೂರ್ಣವಾಗಿ ತಮ್ಮನ್ನು ತಾವು ತೆಲುಗು ಚಿತ್ರರಂಗಕ್ಕೆ ಸಮರ್ಪಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಇದು ಹಲವಾರು ಅಭಿಮಾನಿಗಳಲ್ಲಿ ಅಸಮಾಧಾನವನ್ನು ಕೂಡ ಉಂಟು ಮಾಡಿ. ಈಗ ಕಿಚ್ಚ ಸುದೀಪ್ ರವರು ಶಿವ ಕಾರ್ತಿಕ್ ರವರಿಗೆ ಹೇಳಿರುವ ಈ ಮಾತನ್ನು ಪ್ರಶಾಂತ್ ನೀಲ್ ರವರು ಮಾಡಿರುವ ಕೆಲಸಕ್ಕೆ ತಳುಕು ಹಾಕಿಕೊಳ್ಳಲಾಗುತ್ತಿದೆ.

Comments are closed.