Neer Dose Karnataka
Take a fresh look at your lifestyle.

ಅಕಾಲಿಕವಾಗಿ ಅಗಲಿದ ಗೆಳೆಯನಿಗೆ ಕೊನೆಯ ಸಂದೇಶವಾಗಿ ಡಿ ಬಾಸ್ ಹೇಳಿದ್ದೇನು ಗೊತ್ತೇ?? ಸಂತಾಪ ಸೂಚಿಸಿದ ದರ್ಶನ್

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಪಾಲಿಗೆ ಇಂದು ಕಪ್ಪು ದಿನ ಎಂದು ಹೇಳಿದರೂ ಕೂಡ ತಪ್ಪಾಗಲಾರದು. ಯಾರು ಕೂಡ ಕನಸು ಮನಸ್ಸಿನಲ್ಲಿಯೂ ಕೂಡ ಎನಿಸಿಕೊಳ್ಳ ದಂತಹ ದುಃಖಕರ ಘಟನೆಯಿಂದು ನಡೆದು ಹೋಗಿಬಿಟ್ಟಿದೆ. ಹೌದು ಗೆಳೆಯರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದು ನಮ್ಮನ್ನೆಲ್ಲಾ ಅಗಲಿ ಪರಮಾತ್ಮನೆಡೆಗೆ ಪಯಣ ಬೆಳೆಸಿದ್ದಾರೆ. ಕನ್ನಡ ಚಿತ್ರರಂಗದ ಆಲ್-ರೌಂಡರ್ ನಟನಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಾಕಷ್ಟು ಹೆಸರು ಮಾಡಿ ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ನಾಯಕ ನಟನಾಗಿದ್ದರು.

ಅದಕ್ಕಿಂತಲೂ ಹೆಚ್ಚಿನದಾಗಿ ಅವರು ಸಾಮಾಜಿಕ ಕಾರ್ಯಗಳ ಮೂಲಕ ಅದೆಷ್ಟೋ ಬಡಜನರಿಗೆ ಸಹಾಯವನ್ನು ಮಾಡಿ ತಮ್ಮ ಜೀವನದಲ್ಲಿ ಸಾರ್ಥಕತೆ ಪಡೆದುಕೊಂಡಿದ್ದರು. ತಮ್ಮ ತಂದೆಯ ಹೆಸರನ್ನು ಎಲ್ಲಾ ಕಡೆಗಳಲ್ಲಿ ಕೂಡ ತಾವು ಎತ್ತರಕ್ಕೆ ಏರಿಸುವ ಪ್ರಯತ್ನವನ್ನು ಕೂಡ ಮಾಡಿದ್ದರು. ಕನ್ನಡ ಚಿತ್ರರಂಗದ ಧೀಮಂತ ಮೇರು ವ್ಯಕ್ತಿತ್ವಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಒಬ್ಬರು. ಯಾವುದೇ ಬೇಡದ ವಿಚಾರಗಳಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದಿಗೂ ಕೂಡ ಸುದ್ದಿ ಆಗದಂತಹ ಏಕೈಕ ಕನ್ನಡ ನಟ.

ಸ್ಟಾರ್ ನಟನ ಮಗನಾಗಿದ್ದರೂ ಕೂಡ ತಮ್ಮ ಸರಳತೆಯ ಮೂಲಕವೇ ಎಲ್ಲರನ್ನೂ ಗೆದ್ದಂತಹ ಸರಳತೆಯ ಸರದಾರ. ಆದರೆ ಇಂದು ಹೃದಯಾಘಾತದಿಂದಾಗಿ ಅವರನ್ನು ಮೆಚ್ಚಿರುವ ಅದೆಷ್ಟು ಅಭಿಮಾನಿಗಳು ಕುಟುಂಬಸ್ಥರು ಸ್ನೇಹಿತರು ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಸ್ಪತ್ರೆಗೆ ಭೇಟಿ ಕೂಡ ನೀಡಿ ಬಂದಿದ್ದರು. ಇನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಳ್ಳೆಯ ಆತ್ಮ, ನಿಜವಾದ ಸ್ನೇಹಿತ ತುಂಬಾ ಬೇಗ ಹೋದರು. ನಿಮ್ಮನ್ನು ಯಾವಾಗ್ಲೂ ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮ ಒಳ್ಳೆಯ ಕೆಲಸಗಳಿಗಾಗಿ ನಾವು ಯಾವಾಗಲೂ ನಿಮ್ಮನ್ನು ನೆನಪಿಸಿಕೊಳ್ಳುತ್ತೇವೆ. ನೀವು ನಮ್ಮೊಂದಿಗಿಲ್ಲ ಎಂಬ ಈ ಕಠಿಣ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ. R.I.P ನನ್ನ ಸ್ನೇಹಿತ

Comments are closed.