Neer Dose Karnataka
Take a fresh look at your lifestyle.

ಗಂಡನ ಹಾಲುತುಪ್ಪ ಕಾರ್ಯದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಅಶ್ವಿನಿ ಪುನೀತ್ ರಾಜಕುಮಾರ್. ಅಭಿಮಾನಿಗಳಿಂದ ಶುಭ ಹಾರೈಕೆ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಕೋಟ್ಯಾನುಕೋಟಿ ಕನ್ನಡಿಗರು ಕೂಡ ಅಪ್ಪು ಅವರನ್ನು ಕಳೆದುಕೊಂಡು ಅನಾಥರಾಗಿ ಮನೆಯಲ್ಲಿ ಸೂತಕದ ಛಾಯೆ ಮೂಡಿದೆ. ಅಪ್ಪು ಅವರ ಕೊನೆಯ ವಿಧಿ-ವಿಧಾನಗಳನ್ನು ರಾಘವೇಂದ್ರ ರಾಜಕುಮಾರ್ ರವರ ಪುತ್ರನಾಗಿರುವ ವಿನಯ್ ರಾಜ್ ಕುಮಾರ್ ರವರು ಮಗನ ಸ್ಥಾನದಲ್ಲಿ ನಿಂತು ಮಾಡಿದ್ದಾರೆ.

ಇನ್ನು ಕುಟುಂಬದ ಮುಂದಿನ ಜವಾಬ್ದಾರಿಗಳನ್ನು ನೋಡಿಕೊಳ್ಳಲು ಹಿರಿಯಣ್ಣನಾಗಿ ಶಿವಣ್ಣನವರು ಮುಂದೆ ಬರಬೇಕಾಗಿದೆ. ಇನ್ನು ಇಬ್ಬರು ಪುತ್ರಿಯರ ಜವಾಬ್ದಾರಿಯನ್ನು ಅಶ್ವಿನಿ ಅವರು ನೋಡಿಕೊಳ್ಳಬೇಕಾಗಿದೆ. ಇನ್ನು ಪುನೀತ ರಾಜಕುಮಾರ ರವರ ಹಾಲು ತುಪ್ಪ ಕಾರ್ಯಕ್ರಮ ನಾಳೆ ನಡೆಯಬಹುದಾಗಿದೆ. ಇನ್ನು ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರ ಆಸೆಯನ್ನು ಮುಂದುವರಿಸಿಕೊಂಡು ಹೋಗುವ ದೃಢನಿರ್ಧಾರವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಉತ್ತಮ ಪ್ರತಿಭೆಗಳನ್ನು ಬೆಳಕಿಗೆ ತರಲು ಪಿಆರ್ ಕೆ ಪ್ರೊಡಕ್ಷನ್ಸ್ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಇದರಿಂದಾಗಿ ಅದೆಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಿ ಚಿತ್ರರಂಗದ ಮುನ್ನೆಲೆಗೆ ಬರಲು ಅದೃಷ್ಟ ಸಿಕ್ಕಿತ್ತು. ಇನ್ನು ಇದರ ನಿರ್ಮಾಪಕಿಯಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಕಾಣಿಸಿಕೊಂಡಿದ್ದರು ಕೂಡ ಇದನ್ನು ಮುನ್ನಡೆಸಿಕೊಂಡು ಬಂದಿದ್ದು ಪುನೀತ್ ರಾಜಕುಮಾರ್ ರವರೇ. ಈಗ ಪುನೀತ್ ರಾಜಕುಮಾರ್ ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ರವರು ಇದನ್ನು ಮುನ್ನಡೆಸಿಕೊಂಡು ಹೋಗುವ ದೃಢನಿರ್ಧಾರವನ್ನು ಮಾಡಿದ್ದಾರೆ. ಇದರ ಮೂಲಕ ಒಳ್ಳೆ ಒಳ್ಳೆಯ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ರಾಜಕುಮಾರ್ ರವರ ಆಸೆಯನ್ನು ಪೂರೈಸುವ ಯೋಜನೆಗೆ ದೃಢವಾಗಿ ನಿಂತಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಈ ಕೆಲಸಕ್ಕೆ ಶುಭವಾಗಲಿ ಎಂದು ಹಾರೈಸೋಣ.

Comments are closed.