Neer Dose Karnataka
Take a fresh look at your lifestyle.

ಮೊದಲ ಬಾರಿಗೆ ಮುಕ್ತವಾಗಿ ಪುನೀತ್ ರವರ ನಿಧನದ ಹಿಂದಿನ ದಿನ ಏನಾಯಿತು ಎಂದು ತಿಳಿಸಿದ ರಮೇಶ್ ಅರವಿಂದ್, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಕ್ಟೋಬರ್ 29 ರಂದು ಖಂಡಿತವಾಗಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕಪ್ಪು ದಿನವಾಗಿ ಉಳಿಯುವುದು ಖಂಡಿತ. ಯಾಕೆಂದರೆ ಅಪ್ಪು ಅವರನ್ನು ಕಳೆದುಕೊಳ್ಳುತ್ತೇವೆ ಎಂಬ ಚಿಕ್ಕ ಸುಳಿವು ಕೂಡ ಯಾರ ಮನಸ್ಸಿನಲ್ಲಿ ಬಂದಿರಲಿಲ್ಲ.

ಅಷ್ಟೊಂದು ಆರೋಗ್ಯವಾಗಿದ್ದವರು ಒಂದೇ ಸಮನೆ ಹೃದಯಾಘಾತದಿಂದ ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾರೆ ಎಂಬುದನ್ನು ಯಾರೂ ಕೂಡ ಅರಗಿಸಿಕೊಳ್ಳಲಾಗದಂಥ ಸತ್ಯ. ಇನ್ನು ಅವರ ಕುರಿತಂತೆ ನಟ ರಮೇಶ್ ಅರವಿಂದ್ ರವರು ಹೇಳುವಂತೆ ಒಮ್ಮೆ ನೀವು ಅಪ್ಪು ಅವರ ಜೊತೆಗೆ ಮಾತನಾಡಲು ಕುಳಿತರೆ ಅವರನ್ನು ಜೀವನಪರ್ಯಂತ ಇಷ್ಟಪಡುವವರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಹೇಳುತ್ತಾರೆ. ಅಂತಹ ಆಕರ್ಷಕ ವ್ಯಕ್ತಿತ್ವವುಳ್ಳವರು ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಇನ್ನು ಅವರು ಕೊನೆಯುಸಿರೆಳೆಯುವ ಮೊದಲ ದಿನದ ರಾತ್ರಿ ಏನಾಯಿತು ಎಂಬುದರ ಕುರಿತಂತೆ ರಮೇಶ್ ಅರವಿಂದ್ ರವರು ಏನು ಹೇಳಿದ್ದಾರೆ ಗೊತ್ತಾ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೊನೆಯುಸಿರೆಳೆಯುವ ಹಿಂದಿನ ದಿನದ ರಾತ್ರಿ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಜನ್ಮದಿನದ ಸಂಭ್ರಮಾಚರಣೆಯಲ್ಲಿ ತಡರಾತ್ರಿವರೆಗೂ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರಮೇಶ್ ಅರವಿಂದ್ ರವರೊಂದಿಗೆ ಪುನೀತ್ ರವರು ಹಲವಾರು ವಿಚಾರಗಳ ಕುರಿತಂತೆ ಮಾತನಾಡುತ್ತಿದ್ದಾರಂತೆ. ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಕುರಿತಂತೆ ಹೀಗೆ ಹಲವಾರು ವಿಚಾರಗಳ ಕುರಿತಂತೆ ರಮೇಶ್ ಅರವಿಂದ್ ರವರ ಜೊತೆಗೆ ಮುಕ್ತವಾಗಿ ಮಾತನಾಡುತ್ತಿದ್ದರಂತೆ. ಆದರೆ ಮಾರನೇ ದಿನ ಬೆಳಿಗ್ಗೆ ರಮೇಶ್ ಅರವಿಂದ್ ರವರಿಗೆ ಅಪ್ಪು ಅವರ ನಿಧನದ ಸುದ್ದಿ ಕೇಳಿ ಎಲ್ಲಿಲ್ಲದ ದುಃಖ ಉಮ್ಮಳಿಸಿ ಬಂದಿದೆ.

Comments are closed.