Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಇದೊಂದು ಕೆಲಸ ಮಾಡಿದ್ದರೇ ಅಪ್ಪು ಉಳಿದುಕೊಳ್ಳುತ್ತಿದ್ದರು ಎಂದ ಸಾಧು ಕೋಕಿಲ. ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಚಿತ್ರರಂಗ ಸಾಕಷ್ಟು ದುಃಖದಲ್ಲಿ ಇದೆ. 46 ವರ್ಷ ವಯಸ್ಸಿಗೆ ಇಹ ಲೋಕವನ್ನು ತ್ಯಜಿಸುವಂತಹ ಆರೋಗ್ಯ ಅಪ್ಪು ಅವರದಾಗಿರಲಿಲ್ಲ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮರಣದ ವಾರ್ತೆ ಬರಸಿಡಿಲಿನಂತೆ ಚಂದನವನಕ್ಕೆ ಬಡಿದಪ್ಪಳಿಸಿತ್ತು. ಯಾಕೆಂದರೆ ಕಾರ್ಡಿಯಾಕ್ ಅರೆಸ್ಟ್ ಮೂಲಕ ದಿಡೀರ್ ಮರಣವನ್ನು ಹೊಂದಿದ ಅಪ್ಪು ಅವರು ಇಡೀ ಕನ್ನಡ ಚಿತ್ರರಂಗಕ್ಕೆ ಅತ್ಯಂತ ಪ್ರೀತಿಪಾತ್ರ ರಾಗಿದ್ದರು

ಅವರನ್ನು ಕಳೆದುಕೊಂಡ ದುಃಖವನ್ನು ಬರಿಸಲು ಅಂದು ಕೂಡ ಸಾಧ್ಯವಾಗಿಲ್ಲ ಇನ್ನು ಮುಂದೆ ಕೂಡ ಸಾಧ್ಯವಾಗುವುದಿಲ್ಲ. ಇನ್ನು ಅಪ್ಪು ಅವರ ಕುರಿತಂತೆ ಮಾಧ್ಯಮದ ಬಳಿ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಸಾಧುಕೋಕಿಲ್ ಅವರು ಮಾತನಾಡಿದರು. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ಒಳ್ಳೆಯ ಸ್ನೇಹವನ್ನು ಹೊಂದಿರುವ ಸಾಧುಕೋಕಿಲ ರವರು ಅದೊಂದು ಕೆಲಸ ಮಾಡಿದ್ದರೆ ಪುನೀತ್ ರಾಜಕುಮಾರ್ ಅವರು ಉಳಿದುಕೊಳ್ಳುತ್ತಿದ್ದರೋ ಏನೋ ಎಂಬುದಾಗಿ ಹೇಳಿದ್ದಾರೆ.

ಹೌದು ಗೆಳೆಯರೇ ಅಕ್ಟೋಬರ್ 28ರಂದು ಸಾಧುಕೋಕಿಲಾ ಅವರ ಹೊಸ ಚಿತ್ರದ ಕಾರ್ಯಕ್ರಮಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಿದಾಗ 28ನೇ ತಾರೀಖಿಗೆ ನಾನು ಗಾಜನೂರಿಗೆ ಹೋಗಬೇಕು 27 ನೇ ತಾರೀಕಿಗೆ ಬರುತ್ತೇನೆ ಎಂಬುದಾಗಿ ಹೇಳಿದರು. 27 ನೇ ತಾರೀಕಿಗೆ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮದಿಂದ ಹೋಗಿದ್ದರು. ಇದಾದ ನಂತರ 28ನೇ ತಾರೀಖಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಗಾಜನೂರಿಗೆ ಹೋಗಿರಲಿಲ್ಲ‌. ಒಂದು ವೇಳೆ ಅಪ್ಪು ಅವರು ಗಾಜನೂರಿಗೆ 28ನೇ ತಾರೀಖಿಗೆ ಹೋಗುತ್ತಿದ್ದರೆ ಖಂಡಿತವಾಗಿಯೂ ಉಳಿದು ಕೊಳ್ಳುತ್ತಿದ್ದರು ಎಂಬುದು ಸಾಧುಕೋಕಿಲಾ ಅವರ ಭಾವನಾತ್ಮಕ ಮಾತಾಗಿದೆ. ಈ ವಿಚಾರದ ಕುರಿತಂತೆ ನೀವು ಏನು ಹೇಳುತ್ತೀರಾ ಎಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.