Neer Dose Karnataka
Take a fresh look at your lifestyle.

11 ದಿನಗಳ ಕಾರ್ಯ ಮುಗಿದ ಬೆನ್ನಲ್ಲೇ ತಿಳಿದು ಬಂತು ಅಪ್ಪುವಿನ ಕುರಿತು ಮತ್ತೊಂದು ಸುದ್ದಿ, ದೇವರೇ ಈಗ್ಯಾಕೆ ಎಂದ ಜನ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ನಟನಾಗಿದ್ದಾರೆ ಅಷ್ಟೊಂದು ಅಭಿಮಾನಿಗಳು ಇರುತ್ತಿದ್ದರೋ ಇಲ್ಲವೋ ಗೊತ್ತಿಲ್ಲ ಆದರೆ ಅವರು ಮಾಡಿರುವ ಸಮಾಜ ಕಾರ್ಯಗಳು ಮಾತ್ರ ಇಂದಿಗೂ ಕೂಡ ಹಲವಾರು ಜನರ ಮನಸ್ಸಿನಲ್ಲಿ ಅವರಿಗೆ ದೇವರ ಸ್ಥಾನವನ್ನು ನೀಡಿದೆ.

ಅವರಿಂದ ಸಹಾಯವನ್ನು ಪಡೆದವರು ದೇವರಿಗಿಂತ ಹೆಚ್ಚಾಗಿ ಪುನೀತ್ ರಾಜಕುಮಾರ್ ಅವರನ್ನು ಆರಾಧಿಸುತ್ತಿದ್ದರು. ಏಕೆಂದರೆ ಪುನೀತ್ ರಾಜಕುಮಾರ್ ಅವರು ಮಾಡುತ್ತಿದ್ದ ಕೆಲಸವೇ ಮನುಷ್ಯ ರೂಪದಲ್ಲಿದ್ದ ದೇವರು ಮಾಡುವ ಕೆಲಸವಾಗಿತ್ತು. ಯಾರಿಗೆ ಏನೇ ಕಷ್ಟ ಬಂದರೂ ಕೂಡ ತನಗೆ ತಿಳಿದ ತಕ್ಷಣ ಅದಕ್ಕೆ ಬೇಕಾದಂತಹ ಸಹಾಯವನ್ನು ಕೂಡಲೇ ಮಾಡಿ ಬಿಡುತ್ತಿದ್ದರು. ಇನ್ನು ಇದೇ ಮಾದರಿಯ ವಿಷಯವೊಂದು ಹೊರಬಂದಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿದ ಸಹಾಯದಿಂದಾಗಿ ಇಂದು ಒಬ್ಬ ಹುಡುಗ ರಕ್ತದ ಕ್ಯಾನ್ಸರ್ ನಿಂದಾಗಿ ಬದುಕುಳಿದು ಬಂದಿದ್ದಾನೆ.

ಸಂಧ್ಯಾ ಹಾಗೂ ಸೋಮಶೇಖರ್ ದಂಪತಿಗಳ ಪುತ್ರನಾಗಿರುವ ಪುನರ್ಭವ ನಿಗೆ ಜ್ವರ ಬಂದ ಕಾರಣದಿಂದಾಗಿ ಆಸ್ಪತ್ರೆಗೆ ಹೋದಾಗ ಆತನಿಗೆ ರಕ್ತದ ಕ್ಯಾನ್ಸರ್ ಇರುವುದು ಕಂಡು ಬಂದಿತು. ಆದರೆ ತಂದೆತಾಯಿಗಳ ಬಳಿ ನಯಾಪೈಸೆಯೂ ಕೂಡ ಇರಲಿಲ್ಲ. ಹೀಗಾಗಿ ಅಪ್ಪು ಬ್ರಿಗೇಡ್ ನ ಪ್ರಮುಖ ಸದಸ್ಯರುಗಳ ಸಹಾಯಕ್ಕಾಗಿ ಕೋರಲಾಯಿತು. ಅವರು ಪುನೀತ್ ರಾಜಕುಮಾರ್ ಅವರಿಗೆ ಈ ವಿಷಯವನ್ನು ತಿಳಿಸಿದರು. ಅಪ್ಪು ಬ್ರಿಗೇಡ್ನ ಕಡೆಯಿಂದ ಒಂದು ಲಕ್ಷ ಹಣವನ್ನು ನೀಡಲಾಯಿತು. ಇನ್ನು ಮಗುವಿನ ಸಂಪೂರ್ಣ ಖರ್ಚುವೆಚ್ಚವನ್ನು ಸ್ವತಹ ಪುನೀತ್ ರಾಜಕುಮಾರ್ ರವರೆ ನೀಡಿದ್ದು ಮಾತ್ರವಲ್ಲದೆ ಆ ಮಗುವಿನ ಯೋಗಕ್ಷೇಮವನ್ನು ಕೂಡ ವಿಚಾರಿಸುತ್ತಿದ್ದರು. ಆದರೆ ಪುನರ್ಭವ ಈಗ ಗುಣಮುಖನಾಗಿ ಬಂದಿದ್ದಾನೆ ಅದರ ಸಂತೋಷದ ಸುದ್ದಿಯನ್ನು ಹಂಚಿಕೊಳ್ಳಲು ಅಪ್ಪು ಅವರೇ ಇಲ್ಲ. ಇನ್ನು ಮಗನಾದ ಪುನರ್ಭವ ಗೆ ಅಪ್ಪು ಎಂಬ ಮರುನಾಮಕರಣ ಮಾಡಲು ಪೋಷಕರು ನಿರ್ಧರಿಸಿದ್ದಾರೆ. ಹೀಗೆ ಇಂತಹ ಅದೆಷ್ಟೋ ಉಪಕಾರಗಳು ಅಪ್ಪು ಮಾಡಿದ್ದಾರೆ ಆದರೆ ಎಲ್ಲೂ ಕೂಡ ಹೇಳಿಕೊಂಡಿಲ್ಲ. ಇದು ಆ ಬಂಗಾರದ ಮನುಷ್ಯನ ಬಂಗಾರದ ವ್ಯಕ್ತಿತ್ವಕ್ಕೆ ಉದಾಹರಣೆ ಎಂದು ಹೇಳಬಹುದು.

Comments are closed.