Neer Dose Karnataka
Take a fresh look at your lifestyle.

ಮರೆಯಲು ಆಗುತ್ತಿಲ್ಲ ಪುನೀತ್ ರವರನ್ನು, ಮತ್ತೆ ಇದ್ದಕ್ಕಿದ್ದ ಹಾಗೆ ಬೆಳ್ಳಂ ಬೆಳಗ್ಗೆ ಸಮಾಧಿ ಬಳಿ ಬಂದ ವಿನೋದ್ ರಾಜ್ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಈಗಾಗಲೇ 15 ದಿನಗಳು ಕಳೆದರು ಕೂಡ ಅವರ ಸವಿನೆನಪು ಇಂದಿಗೂ ಕೂಡ ಮನಸ್ಸಿನಲ್ಲಿ ಮಾಸದಂತೆ ಉಳಿದುಕೊಂಡಿದೆ. ಚಿತ್ರಗಳಲ್ಲಿ ತೋರಿಸುವಂತೆ ಮತ್ತೆ ಎದ್ದು ಬರಲಿ ಎಂದು ಅದೆಷ್ಟು ಅಭಿಮಾನಿಗಳು ಕಾಯುತ್ತಿದ್ದಾರೆ. ಕನ್ನಡಿಗರು ತಮ್ಮ ಮನೆ ಮಗನನ್ನು ಕಳೆದುಕೊಂಡಿದ್ದೇವೆ ಎಂಬ ಭಾವದಲ್ಲಿ ದುಃಖಿತರಾಗಿದ್ದಾರೆ.

ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 11ನೇ ದಿನದ ಕಾರ್ಯಕ್ರಮವನ್ನು ಮತ್ತು 12ನೇ ದಿನದ ಅನ್ನಸಂತರ್ಪಣೆಯನ್ನು ದೊಡ್ಡ ಮನೆಯವರು ಮಾಡಿ ಮುಗಿಸಿದ್ದಾರೆ. ಇನ್ನು ವಿನೋದ್ ರಾಜ್ ರವರು ಪುನೀತ್ ರಾಜಕುಮಾರ್ ಅವರ 11ನೇ ದಿನದ ತಿಥಿ ಕಾರ್ಯಕ್ರಮದ ದಿನದಂದು ಶ್ರೀರಂಗಪಟ್ಟಣದ ಕಾವೇರಿ ಸಂಗಮಕ್ಕೆ ಹೋಗಿ ಪಿಂಡಪ್ರದಾನ ಮಾಡಿ ತರ್ಪಣ ಬಿಟ್ಟು ಬಂದಿದ್ದರು. ಇನ್ನು ಈ ಕಾರ್ಯಕ್ರಮವನ್ನು ಅವರು ಕೇವಲ ಒಬ್ಬರೇ ಮಾಡದೇ ತಮ್ಮ ತಾಯಿ ಲೀಲಾವತಿ ಅವರನ್ನು ಕೂಡ ಕರೆದುಕೊಂಡು ಹೋಗಿದ್ದರು.

ಇನ್ನು ಈಗ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜಕುಮಾರ್ ರವರ ಸಮಾಧಿಗೂ ಕೂಡ ಭೇಟಿ ನೀಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಮಾಡಿ ನಮಸ್ಕರಿಸಿ ಭಾವುಕರಾಗಿ ವಿನೋದ್ ರಾಜ್ ರವರು ಕಣ್ಣೀರು ಹಾಕಿದ್ದಾರೆ. ಈ ಸಮಯದಲ್ಲಿ ಅಪ್ಪು ಅವರ ಆತ್ಮಕ್ಕೆ ಶಾಂತಿ ಕೋರುತ್ತ ವಿನೋದರಾಜ್ ರವರು ಅಪ್ಪು ಅವರು ಎಲ್ಲೂ ಹೋಗಿಲ್ಲ ಅವರ ಒಳ್ಳೆಯ ಕೆಲಸಗಳ ಮೂಲಕ ಅಭಿಮಾನಿಗಳ ಮನದಾಳದಲ್ಲಿ ಸದಾಕಾಲ ಅಮರ ರಾಗಿರುತ್ತಾರೆ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.