Neer Dose Karnataka
Take a fresh look at your lifestyle.

ಅಪ್ಪು ಇಹಲೋಕ ತ್ಯಜಿಸಿದ ದಿನವೇ ರವಿ ಚಂದ್ರನ್ ಮನೆಯಲ್ಲಿ ನಡೆದ್ದದೇನು ಗೊತ್ತೇ?? 20 ದಿನಗಳ ಬಳಿಕ ಕಣ್ಣೀರಿಟ್ಟು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಈಗಾಗಲೇ ಕಳೆದುಕೊಂಡು ಹಲವಾರು ದಿನಗಳು ಕಳೆದಿವೆ. ಇನ್ನು ಕೂಡ ಅವರನ್ನು ಕಳೆದುಕೊಂಡಿರುವ ನೆನಪನ್ನು ನಾವು ಕಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಮೊನ್ನೆಯಷ್ಟೇ ಅರಮನೆ ಮೈದಾನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪುನೀತ್ ನಮನ ಕಾರ್ಯಕ್ರಮದಲ್ಲಿ ಸಾವಿರಾರು ಗಣ್ಯರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಚಿಕ್ಕಂದಿನಿಂದಲೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನೋಡಿಕೊಂಡು ಬಂದಿರುವ ಗಣ್ಯರು ಮಾತನಾಡಲು ಸಾಧ್ಯವಾಗಿರಲಿಲ್ಲ. ಇನ್ನು ಈ ಗಣ್ಯರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಒಬ್ಬರು. ಕ್ರೇಜಿಸ್ಟಾರ್ ರವಿಚಂದ್ರನ್ ರವರು ತಮ್ಮ ಮಗ ಮನೋರಂಜನ್ ರವಿಚಂದ್ರನ್ ರವರ ಮುಗಿಲ್ ಪೇಟೆ ಚಿತ್ರದ ಕಾರ್ಯಕ್ರಮದಲ್ಲಿ ಅಪ್ಪು ಅವರ ಕುರಿತಂತೆ ಹೇಳುತ್ತಾ ಯಾವುದೇ ಕಾರ್ಯಕ್ರಮದಲ್ಲಿ ನಾನು ಮೊದಲು ಅಪ್ಪನನ್ನು ಮೊದಲ ನೆನೆಯುತ್ತಿದ್ದೆ ಆದರೆ ಇಂದು ಅಪ್ಪುವನ್ನು ಕೂಡ ನೆನೆಯುತ್ತಿದ್ದೇನೆ ಎಂಬುದಾಗಿ ಹೇಳಿದ್ದಾರೆ.

ಇನ್ನೂ ಅಪ್ಪು ಅವರು ನಿಧನರಾಗಿದ್ದ ದಿನ ಏನಾಯ್ತು ಎಂಬುದನ್ನು ಕೂಡ ವಿವರಿಸಿ ಹೇಳಿದ್ದಾರೆ. ಅಂದು ಅಕ್ಟೋಬರ್ 29ರಂದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡುತ್ತಿದ್ದರಂತೆ. ಆ ಸಂದರ್ಭದಲ್ಲಿ ರವಿಚಂದ್ರನ್ ರವರ ಪತ್ನಿ ತಾಯಿಗೆ ಸ್ವಲ್ಪ ಆರೋಗ್ಯ ಸರಿಯಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಎಂಬುದಾಗಿ ಹೇಳಿದ್ದರಂತೆ. ನಂತರ ಡಬ್ಬಿಂಗ್ ಸ್ಟುಡಿಯೋದಿಂದ ಕಾರಿನಲ್ಲಿ ಮನೆಯತ್ತ ಧಾವಿಸಿದ್ದರು ರವಿಚಂದ್ರನ್ ರವರು.

ಈ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲಿ ವಿಕ್ರಮ್ ಆಸ್ಪತ್ರೆಯಲ್ಲಿ ಜನಜಂಗುಳಿ ನಿಂತಿದ್ದು ನೋಡಿ ಯಾರಿಗೆ ಏನಾಯ್ತು ಎಂದು ತಿಳಿದುಕೊಂಡು ಹಾಗೆಯೇ ಮುಂದೆ ಹೋಗುತ್ತಿರಬೇಕಾದರೆ ಒಂದು ಫೋನ್ ಕರೆ ಬಂದು ಅದರಲ್ಲಿ ನಿಮ್ಮಅಪ್ಪುವಿಗೆ ಹೀಗಾಯಿತು ನೋಡಿ ಸರ್ ಎಂಬುದಾಗಿ ಹೇಳಿದ್ದಾರೆ. ಇದನ್ನು ನೋಡಿ ಒಂದು ಕ್ಷಣ ರವಿಚಂದ್ರನ್ ರವರು ಕುಸಿದೇ ಬಿಟ್ಟಿದ್ದರಂತೆ. ಅದೇ ಕ್ಷಣ ಪತ್ನಿಗೆ ಅಮ್ಮನನ್ನು ಚೆನ್ನಾಗಿ ನೋಡ್ಕೊಂತ ಇರು ನಾನು ಅಪ್ಪುವನ್ನು ನೋಡಿಕೊಂಡು ಬರುತ್ತೇನೆ ಎಂದು ಆಸ್ಪತ್ರೆಗೆ ಹೋಗಿದ್ದರಂತೆ.

ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಅಣ್ಣಾವ್ರ ಮನೆಗೆ ಹೋದರೆ ನಾವು ಏನಾದರೂ ಆದರೆ ನೋಡಿಕೊಳ್ಳುತ್ತೇವೆ ಎನ್ನುವ ಧೈರ್ಯದಲ್ಲಿ ಹೋಗುತ್ತಿದ್ದೆ. ಆದರೆ ಅಂದು ಮಾತ್ರ ನನ್ನ ಕೈಯಲ್ಲಿ ಏನೂ ಆಗಲಿಲ್ಲ ನಾನು ತುಂಬ ವೀಕ್ ಆಗಿಬಿಟ್ಟಿದ್ದೆ ಅಪ್ಪು ಅವರನ್ನು ಕಳೆದುಕೊಂಡಿದ್ದೇನೆ ಎಂಬ ಭಾವದಲ್ಲಿ ಹೋಗಿದ್ದೆ. ಅಪ್ಪು ಪುಟಾಣಿ ಯಾಗಿ ಹುಟ್ಟಿದ ಪುಟಾಣಿ ಯಾಗಿ ಬೆಳೆದ ಹಾಗೂ ಪುಟಾಣಿ ಯಾಗಿಯೇ ಹೋದ ಎಂಬುದಾಗಿ ಕೂಡ ಹೇಳಿದ್ದಾರೆ. ಅಪ್ಪು ಅವರ ನಿಧನದ ನಂತರ ಆ ಭಗವಂತನಿಗೆ ಯಾಕೆ ಪೂಜೆ ಮಾಡಬೇಕೆಂದು ಎಷ್ಟು ಜನ ಅಂದುಕೊಂಡಿದ್ದರು ಅವರಲ್ಲಿ ನಾನು ಕೂಡ ಒಬ್ಬ.

ಅಪ್ಪು ಅವರು ದೈಹಿಕವಾಗಿ ನಮ್ಮಿಂದ ದೂರವಾಗಿರಬಹುದು ಆದರೆ ನಮ್ಮ ಮನಸ್ಸಿನಲ್ಲಿ ಸದಾಕಾಲ ನಾವು ಜಗತ್ತನ್ನು ಬಿಟ್ಟು ಹೋಗುವವರೆಗೂ ಕೂಡ ಸದಾ ನೆಲೆಸಿರುತ್ತಾರೆ ಎಂಬುದಾಗಿ ಹೇಳಿದರು ಕ್ರೇಜಿಸ್ಟಾರ್ ರವಿಚಂದ್ರನ್. ಹೌದಲ್ವಾ ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಾವು ಬದುಕಿದ್ದ ಸಮಯದಲ್ಲಿ ಮಾಡಿರುವ ಒಳ್ಳೆಯ ಕಾರ್ಯಗಳಿಂದಾಗಿ ಸೂರ್ಯಚಂದ್ರರು ಇರುವವರಿಗೂ ಖಂಡಿತವಾಗಿಯೂ ಅಜರಾಮರರಾಗಿ ಇರುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.