Neer Dose Karnataka
Take a fresh look at your lifestyle.

ದಿವ್ಯ ವಸಂತ ರವರಿಗೆ ಸಕ್ಕತ್ತಾಗಿ ಕ್ಲಾಸ್ ತೆಗೆದುಕೊಂಡರೆ ರಂಗಣ್ಣ?? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಅಸಲಿಯತ್ತೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ದಿವ್ಯ ವಸಂತ ಅವರು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಮಾಡುತ್ತಿರುವ ಹೆಸರು ಎಂದರೆ ತಪ್ಪಾಗಲಾರದು. ಬಿಟಿವಿ ವಾಹಿನಿ ಅಮೂಲ್ಯ ರವರು ಪ್ರೆಗ್ನೆಂಟ್ ಆಗಿದ್ದಾರೆ ಇದು ರಾಜ್ಯವೇ ಸಂತೋಷಪಡುವ ಸುದ್ದಿ ಎಂಬುದಾಗಿ ವಾರ್ತೆಯನ್ನು ಬಿತ್ತರಿಸಿತ್ತು. ಇದಾದ ನಂತರ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಪೇಜುಗಳು ಅಣಕಿಸಿದ್ದವು.

ಇದಕ್ಕೆ ಸಿಡಿಮಿಡಿಗೊಂಡ ಬಿಟಿವಿ ನಿರೂಪಕಿ ದಿವ್ಯ ವಸಂತ ರವರು ಟ್ರೋಲ್ ತಲಹರಟೆ ಎಂಬ ಕಾರ್ಯಕ್ರಮವನ್ನು ಮಾಡಿ ಟ್ರೋಲ್ ಪೇಜ್ ಗಳಿಗೆ ಸವಾಲು ಹಾಕಿದ್ದರು. ಇದರಿಂದ ಕುಪಿತರಾದ ಟ್ರೋಲ್ ಪೇಜ್ ಗಳ ಅಡ್ಮಿನಗಳು ದಿವ್ಯ ವಸಂತ ರವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾಮುಗ್ಗಾ ಟ್ರಾಲ್ ಮಾಡುತ್ತಾರೆ. ಇದಾದ ನಂತರ ಮತ್ತೆ ದಿವ್ಯ ವಸಂತ ರವರು ಲೈವ್ ನಲ್ಲಿ ಬಂದು ಟ್ರೋಲ್ ಪೇಜ್ ಗಳಿಗೆ ಮಾತನಾಡಿ ಎಂದು ಹೇಳುತ್ತಾರೆ. ಟ್ರೋಲ್ ಪೇಜ್ ಗಳ ಅಡ್ಮಿನಗಳು ಮಾತನಾಡಲು ಹೋದಾಗ ಆ ಸಮರ್ಪಕವಾದ ಉತ್ತರಗಳನ್ನು ನೀಡಿ ಅರ್ಧದಲ್ಲಿಯೇ ಅವರ ಕರೆಯನ್ನು ರದ್ದು ಮಾಡುತ್ತಿದ್ದರು.

ಇನ್ನು ಇದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪಬ್ಲಿಕ್ ಟಿವಿ ರಂಗಣ್ಣ ನವರು ಕೊಯ್ಯುತ್ತಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಹೌದು ಗೆಳೆಯರೇ ಟ್ರೋಲ್ ಪೇಜ್ ಗಳು ದಿವ್ಯ ವಸಂತ ರವರ ಈ ಕಪಿ ಚೆಸ್ತೆಗೆ ಪಬ್ಲಿಕ್ ಟಿವಿ ರಂಗಣ್ಣನವರು ಟೀಕಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ, ಕೇವಲ 3 ದಿನಗಳಲ್ಲಿ 4 ಲಕ್ಷಕ್ಕೂ ಹೆಚ್ಚು ವ್ಯೂಸ್ ಬಂದಿದೆ, ಇನ್ನು ಡೌನ್ಲೋಡ್ ಮಾಡಿ ಬೇರೆ ಕಡೆ ಹಾಕಿದ ವ್ಯೂಸ್ ಲೆಕ್ಕಕ್ಕೆ ಇಲ್ಲ. ಆದರೆ ಇದನ್ನು ಸರಿಯಾಗಿ ಅವಲೋಕಿಸಿ ನೋಡಿದಾಗ ಇದು ಎಡಿಟ್ ಮಾಡಿರುವ ವಿಡಿಯೋ ಎಂದು ತಿಳಿದುಬಂದಿದೆ. ದಿವ್ಯ ವಸಂತ ರವರು ಸಾಮಾಜಿಕ ಜಾಲತಾಣಗಳಲ್ಲಿ ಈಗ ಎಬ್ಬಿಸಿರುವ ಅಲೆ ಹಾಗೂ ಅವರು ಅದರಿಂದ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿರುವ ಪರಿಯನ್ನು ನೋಡಿದರೆ ನಿಮಗೆ ಏನು ಅನಿಸುತ್ತದೆ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.