Neer Dose Karnataka
Take a fresh look at your lifestyle.

ಕೊನೆಗೂ ಮದುವೆಯಾದ ಒಂದು ವರ್ಷಕ್ಕೆ ಡಿಕೆಶಿ ಮಾತಿಗೆ ಒಪ್ಪಿದ ಅಮರ್ಥ್ಯ ಹೆಗಡೆ, ಡಿಕೆಶಿ ಕುಟುಂಬದಿಂದ ಬಂತು ಮತ್ತೊಂದು ಸಿಹಿ ಸುದ್ದಿ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ರಾಜ್ಯದಲ್ಲಿ ಕ್ರಿಕೆಟ್ ಹಾಗೂ ಸಿನಿಮಾ ಹೊರತುಪಡಿಸಿದರೆ ಅತ್ಯಂತ ಹೆಚ್ಚು ಚಾಲ್ತಿಯಲ್ಲಿರುವ ಕ್ಷೇತ್ರವೆಂದರೆ ಅದು ರಾಜಕೀಯ ಕ್ಷೇತ್ರ. ಅದರಲ್ಲೂ ಇಂದು ನಾವು ಮಾತನಾಡಲು ಹೊರಟಿರುವುದು ಕಾಂಗ್ರೆಸ್ ಪಕ್ಷದ ವರಿಷ್ಠ ರಾಗಿರುವ ಡಿಕೆ ಶಿವಕುಮಾರ್ ಅವರ ಕುರಿತಂತೆ. ಕಾಂಗ್ರೆಸ್ ಪಕ್ಷದ ಬಲಿಷ್ಠ ನಾಯಕರಲ್ಲಿ ಅಗ್ರಗಣ್ಯನಾಗಿ ಕಾಣಿಸಿಕೊಳ್ಳುವ ಡಿಕೆ ಶಿವಕುಮಾರ್ ಅವರು ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಆಗುವ ಪ್ರಬಲ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದೇ ಫೆಬ್ರವರಿ ತಿಂಗಳಲ್ಲಿ ತಮ್ಮ ಮಗಳಾಗಿರುವ ಐಶ್ವರ್ಯಳನ್ನು ತಮ್ಮ ಸ್ನೇಹಿತ ಹಾಗೂ ಕೇಫೆಕಾಫೀಡೇ ಸಂಸ್ಥೆಯ ಮಾಲೀಕರಾಗಿರುವ ದಿವಂಗತ ಸಿದ್ದಾರ್ಥ್ ಹೆಗಡೆಯವರ ಪುತ್ರ ಹಾಗೂ ಎಸ್ಎಂ ಕೃಷ್ಣ ಅವರ ಮೊಮ್ಮಗನ ಆಗಿರುವ ಅಮರ್ತ್ಯ ಹೆಗಡೆ ರವರಿಗೆ ಮದುವೆ ಮಾಡಿಕೊಟ್ಟಿದ್ದರು. ಇನ್ನು ಮದುವೆ ಮಾಡಿಕೊಟ್ಟಿರುವ ಬೆನ್ನಹಿಂದೆಯೇ ಈಗ ವರ್ಷ ಮುಗಿಯುವುದರೊಳಗೆ ಡಿಕೆ ಶಿವಕುಮಾರ್ ಅವರಿಗೆ ಶುಭಸುದ್ದಿ ಅಳಿಯ ಹಾಗೂ ಮಗಳಿಂದ ಕೇಳಿಬಂದಿದೆ. ಹಾಗಿದ್ದರೆ ಬಂದಿರುವ ಶುಭಸುದ್ದಿ ಏನೆಂಬುದನ್ನು ನಾವು ನಿಮಗೆ ಹೇಳುತ್ತೇವೆ ತಪ್ಪದ ಲೇಖನಿಯನ್ನು ಕೊನೆಯವರೆಗೂ ಓದಿ.

ಡಿಕೆ ಶಿವಕುಮಾರ್ ಅವರು ತಮ್ಮ ಅಳಿಯ ನಾಗಿರುವ ಅಮರ್ತ್ಯ ಹೆಗಡೆ ಅವರನ್ನು ರಾಜಕೀಯಕ್ಕೆ ಇಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು ಆದರೆ ಅವರಿಗೆ ಇದರ ಕುರಿತು ಆಸಕ್ತಿ ಇರಲಿಲ್ಲ. ಆದರೆ ಈಗ ಅಮರ್ತ್ಯ ಹೆಗಡೆಯವರು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಶುಭಸುದ್ದಿ ಕೇಳಿಬಂದಿದೆ‌. ಎಸ್ಎಂ ಕೃಷ್ಣ ರವರು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವುದರಿಂದ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎಂಬ ಯೋಜನೆ ನಿಂತಿದ್ದರೂ ಕೂಡ ಈಗ ಚಿಕ್ಕಮಗಳೂರಿನಲ್ಲಿ ಜನರು ಅಮರ್ತ್ಯ ಹೆಗಡೆಯವರನ್ನು ಪೂಜ್ಯ ಭಾವನೆಯಲ್ಲಿ ಕಾಣುವುದರಿಂದ ಈಗ ಈ ಕ್ಷೇತ್ರದಲ್ಲಿ ಅಮರ್ತ್ಯ ಹೆಗಡೆಯವರು ಕಣಕ್ಕಿಳಿಯಲಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್ ಅವರ ಮಗಳಾಗಿರುವ ಐಶ್ವರ್ಯ ರವರ ಬೆಂಬಲ ಕೂಡ ಇದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.