Neer Dose Karnataka
Take a fresh look at your lifestyle.

ಮೊದಲ ಬಾರಿಗೆ ಪವನ್ ಶೆರಾವತ್ ರವರ ಬಗ್ಗೆ ಮಾತನಾಡಿದ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾದ ವಿಕಾಸ್ ಕಂಡೋಲ. ಹೇಳಿದ್ದೇನು ಗೊತ್ತೇ?

ನಮ್ಮ ದೇಶದಲ್ಲಿ ಸ್ಪೋರ್ಟ್ಸ್ ಅಂದ್ರೆ ಜನರಿಗೆ ಬಹಳ ಆಸಕ್ತಿ. ಕ್ರಿಕೆಟ್, ಫುಟ್ ಬಾಲ್, ಕಬಡ್ಡಿ ಹೀಗೆ ಎಲ್ಲಾ ಆಟಗಳನ್ನು ಬಹಳ ಆಸಕ್ತಿಯಿಂದ ನೋಡುತ್ತಾರೆ. ಕ್ರಿಕೆಟ್ ಹಾಗೂ ಐಪಿಎಲ್ ಕ್ರೇಜ್ ಒಂದು ಕಡೆಯಾದರೆ. ಮತ್ತೊಂದು ಕಡೆ ಕಬಡ್ಡಿ ಕ್ರೇಜ್. ಪ್ರೊ ಕಬಡ್ಡಿ ಲೀಗ್ ಪಂದ್ಯಗಳು ಎಷ್ಟು ಜನಪ್ರಿಯತೆ ಪಡೆದುಕೊಂಡಿದೆ ಎನ್ನುವುದು ನಮಗೆಲ್ಲ ಗೊತ್ತಿದೆ. ಇದೀಗ ಪ್ರೊ ಕಬಡ್ಡಿ 9ನೇ ಸೀಸನ್ ಶುರುವಾಗಲಿದೆ.

9ನೇ ಸೀಸನ್ ನ ಆಕ್ಷನ್ ಗಳು ಮುಗಿದಿದ್ದು, ಬೆಂಗಳೂರು ಬುಲ್ಸ್ ತಂಡಕ್ಕೆ ವಿಕಾಸ್ ಕಂಡೊಲ ಅವರು ಆಯ್ಕೆಯಾಗಿದ್ದು, ಇವರು ಈ ವರ್ಷ ನಮ್ಮ ಕರ್ನಾಟಕದ ತಂಡದ ಪರವಾಗಿ ಕಬಡ್ಡಿ ಆಡಲಿದ್ದಾರೆ. ವಿಕಾಸ್ ಅವರು ಸಹ ಅದ್ಭುತವಾದ ಕಬಡ್ಡಿ ಪ್ಲೇಯರ್ ಆಗಿದ್ದಾರೆ. ಇವರು ಈ ಹಿಂದಿನ ನಾಯಕ ಪವನ್ ಕುಮಾರ್ ಶೆರಾವತ್ ಅವರ ಹಾಗೆ ಅಡುವುದಿಲ್ಲ. ವಿಕಾಸ್ ಅವರ ಆಟದ ಶೈಲಿಯೇ ಬೇರೆ ರೀತಿ ಆಗಿದೆ. ಇದೀಗ ಹೊಸ ಕ್ಯಾಪ್ಟನ್ ವಿಕಾಸ್ ಅವರು ಮಾಜಿ ಕ್ಯಾಪ್ಟನ್ ಪವನ್ ಅವರ ಬಗ್ಗೆ ಮಾತನಾಡಿದ್ದಾರೆ. ವಿಕಾಸ್ ಅವರು ಪವನ್ ಅವರ ಬಗ್ಗೆ ಮಾತನಾಡಲು ಒಂದು ಕಾರಣ ಇದೆ. ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡಕ್ಕೆ ವಿರಾಟ್ ಅವರು ಹೇಗೋ, ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಪವನ್ ಅವರು ಅದೇ ರೀತಿ ಇದ್ದರು.

ಇದೀಗ ಪವನ್ ಶೆರಾವತ್ ಅವರ ಜಾಗಕ್ಕೆ ವಿಕಾಸ್ ಕಂಡೊಲ ಅವರು ಬಂದಿರುವ ಕಾರಣ, ವಿಕಾಸ್ ಅವರು ಪವನ್ ಅವರ ಬಗ್ಗೆ ಮಾತನಾಡಿದ್ದಾರೆ, “ಪವನ್ ಮತ್ತು ನಾನು ಒಳ್ಳೆಯ ಫ್ರೆಂಡ್ಸ್. ಅವರು ಎಂತಹ ಆಟಗಾರ ಎಂದು ನನಗೆ ಗೊತ್ತಿದೆ. ನಾನು ಅವರು ಒಟ್ಟಿಗೆ ಆಡಿದ್ದೇವೆ, ಪವನ್ ನನ್ನ ಫೇವರೆಟ್ ಕ್ಯಾಪ್ಟನ್. ರೈನೋಸ್ ತಂಡದಲ್ಲಿದ್ದಾಗ, ಪವನ್ ಅವರ ಕ್ಯಾಪ್ಟನ್ಸಿಯಲ್ಲಿ ನಾನು ಅಡಿದ್ದೇನೆ, ಆಗ ಅವರು ನನಗೆ ಬಹಳ ಚೆನ್ನಾಗಿ ಗೈಡ್ ಮಾಡುತ್ತಿದ್ದರು. ಈಗ ಅವರು ಬೆಂಗಳೂರು ಬುಲ್ಸ್ ತಂಡದಲ್ಲಿಲ್ಲ, ನಾನು ಕೋಚ್ ಗೆ ಹೇಳಿದೆ, ನಾನು ಪವನ್ ಅವರು ಒಂದೇ ತಂಡದಲ್ಲಿ ಆಡ್ತೀವಿ ಅಂತ. ಆದರೆ ಬಜೆಟ್ ಇರಲಿಲ್ಲ. ನನ್ನನ್ನ ಬೆಂಗಳೂರು ಬುಲ್ಸ್ ತಂಡ ಪಿಕ್ ಮಾಡ್ತು, ಪವನ್ ಅವರನ್ನ ಬೇರೆ ತಂಡ ಪಿಕ್ ಮಾಡಿದೆ..” ಎಂದು ಹೇಳಿದ್ದಾರೆ ವಿಕಾಸ್

Comments are closed.