Neer Dose Karnataka
Take a fresh look at your lifestyle.

ಗುರೂಜಿ ಬಾಯಲ್ಲಿ ಬಂದಿದ್ದು ಅದೆಂತ ಮಾತು: ಸೈಲೆಂಟ್ ಆಗಿ ಎಳೆದುಕೊಂಡು ಬಂದು ಹಾಕ್ತಾ ಇದ್ದೀಯ. ಹಾಗೆ ಅಂದಿದ್ದು ಯಾಕೆ ಗೊತ್ತೇ??

ಪ್ರತಿ ಸೀಸನ್ ನಲ್ಲೂ ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳು ನಡೆಯುವುದು ಬಹಳ ಕಾಮನ್. ಕೆಲವೊಮ್ಮೆ ಆ ಲವ್ ಸ್ಟೋರಿಗಳು ಬಿಗ್ ಬಾಸ್ ಮನೆಗೆ ಮಾತ್ರ ಸೀಮಿತವಾಗಿರುತ್ತದೆ. ಮನೆಯಲ್ಲಿ ಮನರಂಜನೆಗಾಗಿ ಸಹ ಈ ರೀತಿ ಪ್ರೀತಿ ಮಾಡುತ್ತಾರೆ. ಇನ್ನು ಕೆಲವೊಮ್ಮೆ, ಪ್ರೀತಿ ಬಿಗ್ ಬಾಸ್ ಮನೆಯಿಂದ ಹೊರಗೆ ಕೂಡ ಮುಂದುವರೆದು, ಸ್ಪರ್ಧಿಗಳು ಮದುವೆ ಸಹ ಆಗಿದ್ದಾರೆ. ಇಂತಹ ಘಟನೆಗಳು ನಡೆದಿದೆ. ಇದೀಗ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ ನಲ್ಲೂ ಲವ್ ಸ್ಟೋರಿ ಶುರುವಾಗಿದೆ.

ಈ ಬಾರಿ ಕುಚ್ ಕುಚ್ ನಡೆಯುತ್ತಿದೆ ಎಂದು ಅನ್ನಿಸುತ್ತಿರುವುದು ರಾಕೇಶ್ ಅಡಿಗ ಮತ್ತು ಸ್ಪೂರ್ತಿ ಗೌಡ ನಡುವೆ. ಇವರಿಬ್ಬರ ನಡುವೆ ಏನೋ ನಡೀತಿದೆ ಎಂದು ಎಲ್ಲರಿಗೂ ಅನ್ನಿಸುತ್ತಿದೆ. ರಾಕೇಶ್ ಅವರು ಸ್ಪೂರ್ತಿ ಕೈ ನೋಡಿ ಭವಿಷ್ಯ ಹೇಳ್ತೀನಿ ಅಂತ ಹೇಳಿದ್ದು, ಆಗ ಸ್ಪೂರ್ತಿ ಮಾತನಾಡಿದ್ದು, ಇದೆಲ್ಲವು ಸಹ ಇವರಿಬ್ಬರ ನಡುವೆ ಏನೋ ಇದೆ ಎಂದು ಅನ್ನಿಸುತ್ತಿದೆ. ಇದರ ನಡುವೆಯೇ ರಾಕೇಶ್ ಅಡಿಗ ಸ್ಪೂರ್ತಿ ಅವರಿಗೆ ಚಪಾತಿ ತಿನ್ನಿಸಿದ್ದಾರೆ. ಇದನ್ನು ನೋಡಿದ ಗುರೂಜಿ ರಾಕೇಶ್ ಅವರಿಗೆ ರೇಗಿಸಿದ್ದಾರೆ. ರಾಕೇಶ್ ಅಡಿಗ ಕೂತು ಚಪಾತಿ ತಿನ್ನುತ್ತಿದ್ದರು.

ಆಗ ಅಲ್ಲಿಗೆ ಬಂದ ಸ್ಫೂರ್ತಿ ಗೌಡ, ಏನು ಒಬ್ಬನೇ ತಿನ್ನುತ್ತಾ ಇದ್ದೀಯಾ ಎಂದು ಕೇಳಿದರು. ಆಗ ರಾಕೇಶ್ ಅಡಿಗೆ ಚಪಾತಿ ತೆಗೆದುಕೊಂಡು ಸ್ಪೂರ್ತಿ ಅವರಿಗೆ ತಿನ್ನಿಸಿದ್ದಾರೆ. ಆ ಸಮಯದಲ್ಲಿ ಗುರೂಜಿ ಸಹ ಅಲ್ಲಿಗೆ ಬಂದು, ಇವರಿಬ್ಬರನ್ನು ನೋಡಿ ರೇಗಿಸಿದ್ದಾರೆ, “ಏನ್ ಗುರು ಸೈಲೆಂಟ್ ಆಗಿ ಎಳ್ಕೊಂಡು ಬಂದು ಹಾಕ್ತಾ ಇದ್ದೀಯಾ. .” ಎಂದು ಹೇಳಿ. ನೀವೆಲ್ಲಾ ಒಬ್ಬರಿಗೆ ಎರಡು ಚಪಾತಿ ಅಂತ ಕೊಟ್ರೆ, ಇವರು ಇಬ್ಬರಿಗೆ ತಿನ್ನಿಸುತ್ತಾ ಇದ್ದಾರೆ ಎಂದು ಗುರೂಜಿ ತಮಾಷೆ ಮಾಡಿದ್ದು. ರಾಕೇಶ್ ಮತ್ತು ಸ್ಪೂರ್ತಿ ಈ ಮಾತು ಕೇಳಿ ನಕ್ಕಿದ್ದಾರೆ. ಗುರೂಜಿ ಬಾಯಲ್ಲಿ ಈ ರೀತಿಯ ಮಾತುಗಳು ಕೇಳಿಬಂದಿದ್ದು, ಮನೆಯವರು ಸಹ ನಕ್ಕಿದ್ದಾರೆ

Comments are closed.